ಕಳೆದ ಒಂದೆರಡು ತಿಂಗಳಲ್ಲಿ ಪ್ರಮುಖ ಎಲ್ಲ ಆಹಾರ ಉತ್ಪನ್ನಗಳ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕ್ರಿಸಿಲ್ ಪ್ರಕಾರ ಜುಲೈನಲ್ಲಿ, ಒಂದು ಪ್ಲೇಟ್ ಆಹಾರದ ವೆಚ್ಚ ವಿಶ್ಲೇಷಣೆಯ ಪ್ರಕಾರ ಮನೆಯಲ್ಲಿ ತಯಾರಿಸಿದ ಸಸ್ಯಾಹಾರಿ ಊಟದ ಸರಾಸರಿ ಬೆಲೆಯು ಸುಮಾರು 33.7 ರೂಪಾಯಿ ಆಗಿದ್ದರೆ, ಮಾಂಸಾಹಾರಿ ಊಟದ ಸರಾಸರಿ ದರವು ಸುಮಾರು 66.8 ಆಗಿತ್ತು. ಆದರೆ ಅದಕ್ಕೂ ಒಂದು ತಿಂಗಳ ಹಿಂದಿನ ವೆಚ್ಚಕ್ಕೆ ಹೋಲಿಕೆ ಮಾಡಿದಾಗ ಈ ವೆಚ್ಚವು ಏರಿಕೆಯಾಗಿದೆ.
ಜುಲೈಗಿಂತ ಹಿಂದಿನ ತಿಂಗಳಿಗೆ ಅಂದರೆ ಜೂನ್ ತಿಂಗಳಿಗೆ ಹೋಲಿಕೆ ಮಾಡಿದರೆ, ತರಕಾರಿ ಮತ್ತು ಮಾಂಸಹಾರಿ ಊಟದ ವೆಚ್ಚವು ಕ್ರಮವಾಗಿ ಶೇಕಡ 34 ರಷ್ಟು ಮತ್ತು ಶೇಕಡ 13 ರಷ್ಟು ಏರಿಕೆ ಕಂಡಿದೆ. ಟೊಮೆಟೊ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಒಂದು ಪ್ಲೇಟ್ ಊಟದ ದರವು ಹೆಚ್ಚಳವಾಗಿದೆ.

ಆಗಸ್ಟ್ 7 ರಂದು ಕ್ರಿಸಿಲ್ ಮಾಸಿಕ ಆಹಾರ ವೆಚ್ಚ ಮೌಲ್ಯಮಾಪನವನ್ನು ಬಿಡುಗಡೆ ಮಾಡಿದೆ. ಈ ಆವಿಷ್ಕಾರದ ಪ್ರಕಾರ ಭಾರತದಲ್ಲಿ ಮೂಲ ಸಸ್ಯಾಹಾರಿ ಊಟದ ಬೆಲೆಯು ಜೂನ್ನಿಂದ ಜುಲೈವರೆಗೆ ಗಮನಾರ್ಹವಾಗಿ ಶೇಕಡ 34 ರಷ್ಟು ಜಿಗಿತವನ್ನು ಕಂಡಿದೆ. ಈ ಬೆಲೆ ಏರಿಕೆಯ ಸರಿಸುಮಾರು ಕಾಲು ಭಾಗವು ಕೇವಲ ಗಗನಕ್ಕೆ ಏರಿಕೆ ಟೊಮೆಟೊ ದರದಿಂದ ಆಗಿದೆ ಎಂದು ವರದಿಯು ಹೇಳುತ್ತದೆ.
ಟೊಮೆಟೊ, ಈರುಳ್ಳಿ, ಆಲೂಗಡ್ಡೆ ದರ ಏರಿಕೆ
ಜೂನ್ನಲ್ಲಿ ಒಂದು ಕೆಜಿಗೆ 33 ರೂಪಾಯಿ ಆಗಿದ್ದ ಟೊಮೆಟೊ ಬೆಲೆ ಜುಲೈನಲ್ಲಿ 110 ರೂಪಾಯಿಗೆ ಏರಿಕೆಯಾಗಿದೆ. ಕೇವಲ ಒಂದು ತಿಂಗಳಲ್ಲಿ ಟೊಮೆಟೊ ದರವು ಸುಮಾರು ಶೇಕಡ 233 ರಷ್ಟು ಹೆಚ್ಚಳವಾಗಿದೆ. ಹೆಚ್ಚುವರಿಯಾಗಿ, ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಗಳು ಜೂನ್ನಿಂದ ಜುಲೈವರೆಗೆ ಕ್ರಮವಾಗಿ ಶೇಕಡ 16 ರಷ್ಟು ಮತ್ತು 9 ರಷ್ಟು ಹೆಚ್ಚಳವಾಗಿದೆ.
ಮತ್ತೊಂದೆಡೆ, ಮಾಂಸಾಹಾರಿ ಊಟದ ಬೆಲೆಯು ನಿಧಾನವಾಗಿ ಏರಿಕೆಯನ್ನು ಕಂಡಿದೆ. ಬ್ರಾಯ್ಲರ್ ಬೆಲೆಯಲ್ಲಿ ಮಾತ್ರ ಶೇಕಡ 3ರಿಂದ ಶೇಕಡ 5ರಷ್ಟು ಇಳಿಕೆಯಾಗಿದೆ. ಒಟ್ಟಾರೆ ವೆಚ್ಚವು ಶೇಕಡ 50 ರಷ್ಟು ಹೆಚ್ಚಳವಾಗಿದೆ. ತರಕಾರಿ ತೈಲ ಬೆಲೆಯಲ್ಲಿ ಶೇಕಡ 2 ರಷ್ಟು ಕುಸಿತ ಕಂಡು ಬಂದಿದೆ. ಹಲವಾರು ವಸ್ತುಗಳ ದರ ಏರಿಕೆಯಾಗಿರುವಾಗ ಕೆಲವೊಂದು ಆಹಾರ ಉತ್ಪನ್ನಗಳ ದರ ಮಾತ್ರ ಇಳಿಕೆಯಾಗಿದೆ.
ಕ್ರಿಸಿಲ್ನ ನಿರ್ದೇಶಕರಾದ ಪೂಶನ್ ಶರ್ಮಾ, ಜುಲೈನಲ್ಲಿ ಸತತ ಮೂರು ತಿಂಗಳುಗಳ ಕಾಲ ಊಟದ ಬೆಲೆಯು ಸ್ಥಿರವಾಗಿ ಏರಿಕೆ ಕಂಡಿದೆ. ಈ ಆರ್ಥಿಕ ವರ್ಷದಲ್ಲಿ ಮೊದಲ ಬಾರಿಗೆ ವಾರ್ಷಿಕವಾಗಿ ಹೆಚ್ಚಳವನ್ನು ಕಂಡಿದೆ. ಮುಖ್ಯವಾಗಿ ಟೊಮೆಟೊ ದರ ಏರಿಕೆಯಿಂದಾಗಿ ಸಂಪೂರ್ಣವಾಗಿ ಒಂದು ಹೊತ್ತಿನ ಒಂದು ಪ್ಲೇಟ್ ಊಟದ ಬೆಲೆಯು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಮಸಾಲೆ ಮಾರುಕಟ್ಟೆಯಲ್ಲಿ ಕಳೆದ ವರ್ಷದಲ್ಲಿ ಅಗತ್ಯ ಮಸಾಲೆಗಳಲ್ಲಿ ಗಮನಾರ್ಹ ಬೆಲೆ ಏರಿಕೆ ಆಗಿದೆ. ಜುಲೈನಲ್ಲಿ, ಮೆಣಸಿನಕಾಯಿ ಮತ್ತು ಜೀರಿಗೆ ದರವು ತಿಂಗಳ ಆಧಾರದ ಮೇಲೆ ಕ್ರಮವಾಗಿ ಶೇಕಡ 69 ರಷ್ಟು ಮತ್ತು ಶೇಕಡ 16 ರಷ್ಟು ಏರಿಕೆಯಾಗಿದೆ. ಮೆಣಸಿನಕಾಯಿ ಮತ್ತು ಜೀರಿಗೆಯಂತಹ ಪ್ರಮುಖ ಮಸಾಲೆಗಳು ಎರಡಂಕಿಯ ಬೆಲೆ ಏರಿಕೆಯನ್ನು ಕಂಡಿದ್ದರೂ ಸಹ ಊಟದ ಒಟ್ಟಾರೆ ವೆಚ್ಚವು ಕೆಲವು ತರಕಾರಿಗಳ ಬೆಳೆಗಳಿಗಿಂತ ಕಡಿಮೆಯಾಗಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!



Click it and Unblock the Notifications