ಭಾರತದ ಜನಸಂಖ್ಯೆ 120 ಕೋಟಿಗೂ ಹೆಚ್ಚಿದೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆ ಇರುವ ದೇಶದಲ್ಲಿ ವಾರ್ಷಿಕವಾಗಿ ವೃತ್ತಿಪರವಾಗಿ ಆದಾಯ 1 ಕೋಟಿ ರುಪಾಯಿಗೂ ಹೆಚ್ಚು ಇರುವುದಾಗಿ ಟಾಕ್ಸ್ ರಿಟರ್ನ್ಸ್ ಫೈಲ್ ಮಾಡಿರುವವರು ಎಷ್ಟು ಮಂದಿ ಗೊತ್ತೆ? 2200 ಕ್ಕಿಂತ ಸ್ವಲ್ಪ ಹೆಚ್ಚು ಅಷ್ಟೇ.
ಈ ಅಂಶವನ್ನು ಆದಾಯ ತೆರಿಗೆ ಇಲಾಖೆಯ ಸರಣಿ ಟ್ವೀಟ್ ನಲ್ಲಿ ಬಹಿರಂಗ ಮಾಡಿದೆ. 2018-19ನೇ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ದತ್ತಾಂಶವನ್ನು ಹಂಚಿಕೊಳ್ಳಲಾಗಿದೆ. "ಪ್ರಸಕ್ತ ಆರ್ಥಿಕ ವರ್ಷದಲ್ಲಿ ITR ಫೈಲ್ ಮಾಡಿರುವ ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ ಗಳು, ವಕೀಲರು ಮತ್ತು ಇಂಥದ್ದೇ ಇತರ ವೃತ್ತಿಪರರು 2200ಕ್ಕೂ ಸ್ವಲ್ಪ ಹೆಚ್ಚು ಮಂದಿ ವಾರ್ಷಿಕ ವೃತ್ತಿಪರ ಆದಾಯ 1 ಕೋಟಿಗೂ ಹೆಚ್ಚು ತೋರಿಸಿದ್ದಾರೆ" ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಭಾರತದ ಅಭಿವೃದ್ಧಿಗಾಗಿ ತೆರಿಗೆಯನ್ನು ಪಾವತಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಈಚೆಗೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಂದಿ ತೆರಿಗೆ ತಪ್ಪಿಸಿಕೊಂಡರೆ ಯಾರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿರುತ್ತಾರೋ ಅಂಥವರ ಮೇಲೆ ಹೊರೆ ಬೀಳುತ್ತದೆ. ಇದು ನಂಬಲಸಾಧ್ಯ. ಆದರೆ ಸತ್ಯ. ದೇಶದಲ್ಲಿ ಕೇವಲ 2200 ಮಂದಿ ಮಾತ್ರ ತಮ್ಮ ವಾರ್ಷಿಕ ಆದಾಯ 1 ಕೋಟಿ ರುಪಾಯಿಗೂ ಹೆಚ್ಚು ಘೋಷಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯು 2018-19ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಐಟಿಆರ್ ಫೈಲಿಂಗ್ ನ ಅಂಕಿ- ಅಂಶವನ್ನು ಬಹಿರಂಗ ಮಾಡಿದೆ. ಆ ಮಾಹಿತಿ ಇಂತಿದೆ:
* 2018-19 ಆರ್ಥಿಕ ವರ್ಷದ ಆದಾಯಕ್ಕೆ 5.78 ಕೋಟಿ ವೈಯಕ್ತಿಕ ತೆರಿಗೆದಾರರು ರಿಟರ್ನ್ಸ್ ಫೈಲ್ ಮಾಡಿದ್ದಾರೆ.
* ಇದರಲ್ಲಿ 1.03 ಕೋಟಿ ಮಂದಿ ತಮ್ಮ ಆದಾಯವನ್ನು 2.5 ಲಕ್ಷಕ್ಕಿಂತ ಕಡಿಮೆ ತೋರಿಸಿದ್ದಾರೆ. 3.29 ಕೋಟಿ ಮಂದಿ 2.5 ಲಕ್ಷ ರುಪಾಯಿಯಿಂದ 5 ಲಕ್ಷದ ತನಕ ಆದಾಯ ತೋರಿಸಿದ್ದಾರೆ.
* 5.78 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದವರಲ್ಲಿ 4.32 ಕೋಟಿ ಮಂದಿ 5 ಲಕ್ಷ ರುಪಾಯಿಯೊಳಗೆ ಆದಾಯ ತೋರಿಸಿದ್ದಾರೆ.
* ಫೈನಾನ್ಸ್ ಕಾಯ್ದೆ 2019ರ ಅಡಿಯಲ್ಲಿ 5 ಲಕ್ಷದೊಳಗಿನ ಆದಾಯ ಇರುವ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ವಿನಾಯ್ತಿ ನೀಡಲಾಗಿದೆ. ಆದ್ದರಿಂದ 2019-20ರ ಮತ್ತು ಆ ನಂತರದ ಆರ್ಥಿಕ ವರ್ಷಕ್ಕೆ ಈ 4.32 ಕೋಟಿ ವೈಯಕ್ತಿಕ ತೆರಿಗೆ ಪಾವತಿದಾರರು ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ಆದ್ದರಿಂದ 1.46 ಕೋಟಿ ದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
* ಇನ್ನು ಆ ನಂತರದ 1 ಕೋಟು ಮಂದಿ 5ರಿಂದ 10 ಲಕ್ಷ ರುಪಾಯಿ, 46 ಲಕ್ಷ ಮಂದಿ 10 ಲಕ್ಷಕ್ಕೂ ಹೆಚ್ಚು ಆದಾಯ ಘೋಷಿಸಿಕೊಂಡಿದ್ದಾರೆ.
* ಕೇವಲ 3.16 ಲಕ್ಷ ವೈಯಕ್ತಿಕ ತೆರಿಗೆ ಪಾವತಿದಾರರು 50 ಲಕ್ಷಕ್ಕೂ ಹೆಚ್ಚು ಆದಾಯವನ್ನು ಘೋಷಿಸಿಕೊಂಡಿದ್ದಾರೆ.
* ಇಡೀ ದೇಶದಲ್ಲಿ 5 ಕೋಟಿ ರುಪಾಯಿಗೂ ಹೆಚ್ಚು ಆದಾಯವನ್ನು ಘೋಷಿಸಿಕೊಂಡಿರುವವರು 8600 ಮಂದಿ ಮಾತ್ರ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications