PM SVANidhi Scheme: ಸರ್ಕಾರದಿಂದ ಸಾಲ ಪಡೆಯುವ ವಿಧಾನ ತಿಳಿಯಿರಿ
ಸರ್ಕಾರಗಳು ವಿವಿಧ ಸಮುದಾಯಗಳಿಗೆ ವಿವಿಧ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ. ಬಹಳಷ್ಟು ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಇರುವುದು ಕಡಿಮೆಯೇ. ಕೇಂದ್ರ ಸರ್ಕಾರ ಕೂಡ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಿಎಂ ಸ್ವನಿಧಿ ಯೋಜನೆಯೂ ಒಂದು.
ಕೋವಿಡ್ ಸಂದರ್ಭದಲ್ಲಿ ದೇಶಕ್ಕೆ ದೇಶವೇ ವಿವಿಧ ಸಮಸ್ಯೆಗಳಿಂದ ನಲುಗಿ ಹೋಗಿತ್ತು. ಅದರಲ್ಲೂ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ತತ್ತರಿಸಿಹೋದರು. ಬೀದಿಬದಿ ವ್ಯಾಪಾರಿಗಳು ಬೀದಿಗೆ ಬೀಳುವಂತಾಯಿತು. ಇಂಥ ಸಮುದಾಯದವರು ಮತ್ತೆ ಬದುಕು ಕಟ್ಟಿಕೊಳ್ಳಲು ಸರ್ಕಾರ ಸಾಲ ಸೇರಿದಂತೆ ಕೆಲ ಯೋಜನೆಗಳನ್ನು ಜಾರಿಗೆ ತಂದಿತು. ಪಿಎಂ ಸ್ವನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಒದಗಿಸಲಾಗುತ್ತದೆ.
ನಿಮ್ಮ ಸಂಸ್ಥೆಯ ಟ್ರೇಡ್ ಮಾರ್ಕ್ ಆನ್ಲೈನ್ ಮೂಲಕ ರಿಜಿಸ್ಟ್ರೇಷನ್ ಹೀಗೆ ಮಾಡಿ
ಇದು ಅಡಮಾನ ಅಗತ್ಯ ಇಲ್ಲದ ಸಾಲವಾಗಿದ್ದು, ಬೀದಿ ಬದಿ ವ್ಯಾಪಾರಿಗಳು 50 ಸಾವಿರ ರೂವರೆಗೂ ಸಾಲ ಪಡೆಯಬಹುದು. 2020ರಲ್ಲಿ ಸ್ವನಿಧಿ ಯೋಜನೆ ಮೊದಲು ಆರಂಭವಾಗಿದ್ದು. ಮೊದಲಿಗೆ ಪ್ರತಿಯೊಬ್ಬ ವ್ಯಾಪಾರಿಗೂ 10 ಸಾವಿರ ರೂ ಸಾಲ ಎಂದು ಘೋಷಿಸಲಾಯಿತು. ಒಟ್ಟು 20 ಲಕ್ಷ ಮಂದಿ ಈ ಸಾಲ ಸೌಲಭ್ಯ ಬಳಸಿಕೊಂಡರು.
ನಂತರ ಹಂತ ಹಂತವಾಗಿ ಷರತ್ತುಗಳ ಆಧಾರದ ಮೇಲೆ 50 ಸಾವಿರ ರೂ ವರೆಗೆ ಸಾಲವನ್ನು ಸರ್ಕಾರ ಕೊಡುತ್ತಿದೆ.
50 ಸಾವಿರ ರೂ ಸಾಲ ಹೇಗೆ ಪಡೆಯುವುದು?
ಪಿಎಂ ಸ್ವನಿಧಿ ಸ್ಕೀಮ್ನಲ್ಲಿ ಮೊದಲ ಬಾರಿಗೆ ಸಾಲ ಪಡೆಯುವಾಗ ಸಿಗುವುದು 10 ಸಾವಿರ ರೂ ಮಾತ್ರವೇ. ಒಂದು ವರ್ಷದವರೆಗೆ ಈ ಸಾಲ ಮರುಪಾವತಿಗೆ ಅವಕಾಶ ಇರುತ್ತದೆ. ಈಗ ಆರಂಭಿಕ ಸಾಲದ ಮೊತ್ತವನ್ನು 10 ಸಾವಿರದಿಂದ 20 ಸಾವಿರ ರೂಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ವಾಹನದ ಇನ್ಷೂರೆನ್ಸ್ ಕ್ಲೈಮ್ ಮಾಡಲು ಪಿಯುಸಿ ಸರ್ಟಿಫಿಕೇಟ್ ಬೇಕಾ?
ಈಗ ಮೊದಲು ಪಡೆದ ಸಾಲವನ್ನು ಒಂದು ವರ್ಷದಲ್ಲಿ ತೀರಿಸಿದವರು ಮತ್ತೊಮ್ಮೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಆಗ ಅವರಿಗೆ 20 ಸಾವಿರ ರೂ ಸಾಲ ಪಡೆಯುವ ಅವಕಾಶ ಇರುತ್ತದೆ. ಈ ಎರಡನೇ ಸಾಲವನ್ನೂ ತೀರಿಸಿ ಮೂರನೇ ವರ್ಷದಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದರೆ 50 ಸಾವಿರ ರೂ ಸಾಲ ಸಿಗುತ್ತದೆ. ಈ ಸಾಲಕ್ಕೆ ವಾರ್ಷಿಕ ಬಡ್ಡಿ ದರ ಶೇ. 7 ಮಾತ್ರ ಇರುತ್ತದೆ. ನೀವು ತಿಂಗಳಿಗೆ ಆನ್ಲೈನ್ನಲ್ಲೇ ಸಾಲದ ಕಂತು ಕಟ್ಟಿದರೆ ಬಡ್ಡಿಯಲ್ಲೂ ಸಬ್ಸಿಡಿ ಸಿಗುತ್ತದೆ. ವಿವಿಧ ಸಬ್ಸಿಡಿ, ರಿಬೇಟ್ ಇತ್ಯಾದಿ ಗಣಿಸಿದರೆ ಸ್ವನಿಧಿ ಸಾಲ ಬಹುತೇಕ ಬಡ್ಡಿ ರಹಿತ ಸಾಲವಾಗುತ್ತದೆ.
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಬೀದಿ ಬದಿ ವ್ಯಾಪಾರಿ ನೀವಾಗಿದ್ದರೆ ಸ್ವನಿಧಿ ಸ್ಕೀಮ್ಗೆ ಅರ್ಜಿ ಸಲ್ಲಿಸಲು ಮೊದಲು ಎಸ್ಬಿಐ, ಕೆನರಾ ಬ್ಯಾಂಕ್ ಇತ್ಯಾದಿ ನಿಮ್ಮ ಖಾತೆ ಇರುವ ಯಾವುದಾದರೂ ಸರ್ಕಾರಿ ಬ್ಯಾಂಕ್ಗೆ ಹೋಗಬೇಕು. ಅಲ್ಲಿ ಎಸ್ ಲೋನ್ ಅರ್ಜಿ ಸಿಗುತ್ತದೆ. ಅದನ್ನು ಭರ್ತಿ ಮಾಡಬೇಕು. ಆಧಾರ್ ಕಾರ್ಡ್ನ ಒಂದು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.
ನಿಮ್ಮ ಸಾಲದ ಅರ್ಜಿಗೆ ಅನುಮೋದನೆ ಸಿಕ್ಕ ಬಳಿಕ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.