ಹಬ್ಬದ ಸೀಸನ್ಗಳ ನಡುವೆ ಡೆಪಾಸಿಟ್ದಾರರನ್ನು ಆಕರ್ಷಿಸಲು ಮತ್ತು ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳಂತಹ ಇತರ ಹಣಕಾಸು ಸೇವಾ ಪೂರೈಕೆದಾರರೊಂದಿಗೆ ಸ್ಪರ್ಧೆಯನ್ನು ತೀವ್ರಗೊಳಿಸಲು ಸರ್ಕಾರವು ಕೆಲವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್ಸಿಎಸ್ಎಸ್) ಇವುಗಳು ಭಾರತದ ಕಾರ್ಮಿಕ ವರ್ಗದ ಜನಸಂಖ್ಯೆಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಬೇಡಿಕೆಯ ಉಳಿತಾಯ ಯೋಜನೆಗಳಾಗಿವೆ. ತಮ್ಮ ಆರ್ಥಿಕ ವ್ಯವಹಾರಗಳ ಇಲಾಖೆ (DEA) ಮೂಲಕ ಹಣಕಾಸು ಸಚಿವಾಲಯದ ಪ್ರಸ್ತುತ ಬದಲಾವಣೆಗಳು ಹೂಡಿಕೆದಾರರು ಅಥವಾ ಖಾತೆದಾರರಿಗೆ ಪ್ರಯೋಜವನ್ನು ಉಂಟು ಮಾಡಿದೆ.

ಭಾರತೀಯ ನಾಗರಿಕರು ಉತ್ತಮ ಬಡ್ಡಿಯನ್ನು ಪಡೆದು ತಮ್ಮ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವಂತೆ ಕೇಂದ್ರ ಸರ್ಕಾರವು ಪ್ರಸ್ತುತ ಒಂಬತ್ತು ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿದೆ. ಬಹುತೇಕ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳು ಈ ಉಳಿತಾಯ ಯೋಜನೆಗಳನ್ನು ನೀಡುತ್ತದೆ.
ಪಿಪಿಎಫ್ ಬಡ್ಡಿ ಲೆಕ್ಕಾಚಾರ ಬದಲಾವಣೆ
ಈ ಹಿಂದೆ, ಪಿಪಿಎಫ್ ಖಾತೆಯನ್ನು ಅವಧಿಗೆ ಮುನ್ನ ಹಿಂತೆಗೆದುಕೊಂಡರೆ, ನಂತರ ಲೆಕ್ಕ ಹಾಕಲಾದ ಬಡ್ಡಿಯು ಪ್ರಾರಂಭದ ದಿನಾಂಕ ಅಥವಾ ವಿಸ್ತರಣೆಯ ದಿನಾಂಕದಿಂದ ಬಡ್ಡಿಯನ್ನು ಡೆಪಾಸಿಟ್ ಮಾಡಿದ ಒಪ್ಪಿಗೆ ದರಕ್ಕಿಂತ ಶೇಕಡ 1 ರಷ್ಟು ಕಡಿಮೆಯಾಗಿದೆ.
ಆರ್ಥಿಕ ವ್ಯವಹಾರಗಳ ಇಲಾಖೆ (DEA) ಯ ಹೊಸ ಅಧಿಸೂಚನೆಯ ಪ್ರಕಾರ, ಅಕಾಲಿಕ ಹಿಂಪಡೆಯುವಿಕೆಗಳಿಗೆ ಪಿಪಿಎಫ್ ಬಡ್ಡಿ ಲೆಕ್ಕಾಚಾರವು ಐದು ವರ್ಷಗಳ ಪ್ರಸ್ತುತ ಬ್ಲಾಕ್ ಅವಧಿಯ ಪ್ರಾರಂಭದ ದಿನಾಂಕದಿಂದ ನಿಯತಕಾಲಿಕವಾಗಿ ಕ್ರೆಡಿಟ್ ಮಾಡಲಾದ ಬಡ್ಡಿಗಿಂತ ಶೇಕಡ 1 ರಷ್ಟು ಕಡಿಮೆ ಇರುತ್ತದೆ.
ಎಸ್ಸಿಎಸ್ಎಸ್ ಅವಧಿ ವಿಸ್ತರಣೆ
ಸರ್ಕಾರಿ ಅಥವಾ ಖಾಸಗಿ ಉದ್ಯೋಗದಿಂದ ನಿವೃತ್ತರಾದ ನಂತರ, ತಮ್ಮ ಎಸ್ಸಿಎಸ್ಎಸ್ ಖಾತೆಯೊಂದಿಗೆ ಪ್ರಾರಂಭಿಸಲು ತಮ್ಮ ಹಣಕಾಸಿನ ಪುರಾವೆಗಳು, ನಿವೃತ್ತಿ ಪ್ರಯೋಜನಗಳು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೊದಲು ಅವರಿಗೆ ಕೇವಲ ಒಂದು ತಿಂಗಳ ಅವಕಾಶ ಇರುತ್ತದೆ.
ಗೆಜೆಟ್ ಅಧಿಸೂಚನೆಯೊಂದಿಗೆ ಹೇಳಲಾದ ಹೊಸ ಅಪ್ಡೇಟ್ ಪ್ರಕಾರ, ಹೆಚ್ಚಿನ ಬಡ್ಡಿ ಗಳಿಕೆಯ ಲಾಭಕ್ಕಾಗಿ ಎಸ್ಸಿಎಸ್ಎಸ್ ಖಾತೆಯನ್ನು ಪ್ರಾರಂಭಿಸಲು ನಿವೃತ್ತಿಯ ನಂತರ ಒಬ್ಬ ವ್ಯಕ್ತಿಯು ಈಗಿನಿಂದ ಸುಮಾರು ಮೂರು ತಿಂಗಳ ಹೆಚ್ಚುವರಿ ಅವಧಿಯನ್ನು ಹೊಂದಿರುತ್ತಾನೆ.
ನಿವೃತ್ತ ಸರ್ಕಾರಿ ನೌಕರರ ಸಂಗಾತಿಯು ಈ ನಿರ್ದಿಷ್ಟ ಯೋಜನೆಯಲ್ಲಿ ಹೆಚ್ಚಿನ ಬಡ್ಡಿಯ ಪ್ರೀಮಿಯಂನೊಂದಿಗೆ ಹಣವನ್ನು ಹೂಡಿಕೆ ಮಾಡಬಹುದು. ಎಸ್ಸಿಎಸ್ಎಸ್ ಖಾತೆಯನ್ನು ವಿಸ್ತರಣೆ ಮಾಡಿದರೆ, ಬಡ್ಡಿಯನ್ನು ಮುಕ್ತಾಯದ ದಿನಾಂಕದಂದು ಲೆಕ್ಕಹಾಕಲಾಗುತ್ತದೆ. ಮೊದಲ ವರ್ಷದ ಅಂತ್ಯದ ಮೊದಲು ಹಣವನ್ನು ಹಿಂತೆಗೆದುಕೊಂಡರೆ ಈ ಖಾತೆಯಿಂದ ಡೆಪಾಸಿಟ್ಗಳ ಶೇಕಡ 1ರಷ್ಟು ಕಡಿತಗೊಳಿಸಲಾಗುತ್ತದೆ.
ಮೊದಲು, ಮೂರು ವರ್ಷಗಳ ಒಂದು ವಿಸ್ತರಣೆಯನ್ನು ಮಾತ್ರ ಅನುಮತಿಸಲಾಗಿದೆ. ಈಗ, ವಿಸ್ತರಣೆಗೆ ಯಾವುದೇ ಮಿತಿಗಳಿಲ್ಲ, ಇದು ಮೂರು ವರ್ಷಗಳ ಬ್ಲಾಕ್ ಅನ್ನು ಆಯ್ಕೆ ಮಾಡುವ ಮೂಲಕ ಖಾತೆದಾರರಿಗೆ ಸ್ಥಿರವಾಗಿ ವಿಸ್ತರಿಸಲು ಅನುವು ಮಾಡಿಕೊಡುತ್ತದೆ.
ಟೈಮ್ ಡೆಪಾಸಿಟ್ ಬಡ್ಡಿದರ ಪರಿಷ್ಕರಣೆ
ರಾಷ್ಟ್ರೀಯ ಉಳಿತಾಯ ಟೈಮ್ ಡೆಪಾಸಿಟ್ ಕಾರ್ಯಕ್ರಮದ ಹೊಸ ಅಪ್ಡೇಟ್ ಏನೆಂದರೆ, ಐದು ವರ್ಷಗಳ ಮೊದಲು ಅಕಾಲಿಕ ಹಿಂಪಡೆಯುವಿಕೆಗಳ ಬಡ್ಡಿ ದರವನ್ನು ಈಗ ಅಂಚೆ ಕಚೇರಿ ಉಳಿತಾಯ ಖಾತೆ ಯೋಜನೆಯ ಪ್ರಕಾರ ಅನ್ವಯವಾಗುವ ದರದೊಂದಿಗೆ ಲೆಕ್ಕಹಾಕಲಾಗುತ್ತದೆ.
ಐದು ವರ್ಷಗಳಿಗಿಂತಲೂ ಕಡಿಮೆ ಅವಧಿಗೆ ಬ್ಯಾಂಕುಗಳು ನೀಡುವ ಟರ್ಮ್ ಡೆಪಾಸಿಟ್ ಬಡ್ಡಿ ದರಗಳು ಶೇಕಡ 6 ರಿಂದ ಶೇಕಡ 6.5 ರ ವ್ಯಾಪ್ತಿಯಲ್ಲಿದೆ. ಈ ಹೊಂದಾಣಿಕೆಯು ಡೆಪಾಸಿಟ್ದಾರರಿಗೆ ಪ್ರಯೋಜನಕಾರಿಯಾಗಿದೆ. ಆದರೆ ಅಂಚೆ ಕಚೇರಿ ಡೆಪಾಸಿಟ್ಗಳಿಗೆ ಐದು ವರ್ಷಗಳಿಗಿಂತ ಕಡಿಮೆ ಬಡ್ಡಿದರ ಶೇಕಡ 7 ರಷ್ಟಿದೆ.
ಸರ್ಕಾರದ ಒಂಬತ್ತು ಸಣ್ಣ ಉಳಿತಾಯ ಯೋಜನೆಗಳು
ಪಿಪಿಎಫ್, ಎಸ್ಸಿಎಸ್ಎಸ್, ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ, ಅಂಚೆ ಕಚೇರಿ ಟರ್ಮ್ ಡೆಪಾಸಿಟ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸುಕನ್ಯಾ ಸಮೃದ್ಧಿ ಯೋಜನೆ, ಕಿಸಾನ್ ವಿಕಾಸ್ ಪತ್ರ, ಅಟಲ್ ಪಿಂಚಣಿ ಯೋಜನೆ ಮತ್ತು ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಈ ಒಂಬತ್ತು ಸರ್ಕಾರಿ ಉಳಿತಾಯ ಯೋಜನೆಗಳಾಗಿದೆ.
ಪ್ರಸ್ತುತ ಬಡ್ಡಿದರ ಎಷ್ಟಿದೆ?
1. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಶೇಕಡ 7.10 ಬಡ್ಡಿದರ
2. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್ಎಸ್): ಶೇಕಡ 8.20 ಬಡ್ಡಿದರ
3. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್): ಶೇಕಡ 7.40 ಬಡ್ಡಿದರ
4. ಅಂಚೆ ಕಚೇರಿ ಟರ್ಮ್ ಡೆಪಾಸಿಟ್ (ಪಿಒಟಿಡಿ): ಶೇಕಡ 7.50 ಬಡ್ಡಿದರ
5. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ): ಶೇಕಡ 7.70 ಬಡ್ಡಿದರ
6. ಸುಕನ್ಯ ಸಮೃದ್ಧಿ ಯೋಜನೆ: ಶೇಕಡ 8 ಬಡ್ಡಿದರ
7. ಕಿಸಾನ್ ವಿಕಾಸ್ ಪತ್ರ (ಕೆವಿಪಿ): ಶೇಕಡ 7.50 ಬಡ್ಡಿದರ
8. ಪ್ರಧಾನ ಮಂತ್ರಿ ವಯ ವಂದನ ಯೋಜನೆ: ಶೇಕಡ 7.40 ಬಡ್ಡಿದರ
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications