ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅತಿ ದೊಡ್ಡ ಗ್ರಾಹಕ ವಸ್ತುಗಳ ಉತ್ಪಾದನಾ ಕಂಪೆನಿ ಹಿಂದೂಸ್ತಾನ್ ಯುನಿಲಿವರ್ ಸಹಭಾಗಿತ್ವದಲ್ಲಿ ರೀಟೇಲರ್ ಗಳು ಮತ್ತು ವಿತರಕರಿಗೆ ಆನ್ ಲೈನ್ ಸಾಲ ಸೌಲಭ್ಯ ಒದಗಿಸಲು ಮುಂದಾಗಿದೆ. ಕೊರೊನಾ ಕಾರಣಕ್ಕೆ ಸಣ್ಣ ವ್ಯಾಪಾರಗಳಿಗೆ ಆಗಿರುವ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲಿ ಈ ಸಾಲ ಯೋಜನೆ ರೂಪಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ರೀಟೇಲರ್ ಗಳಿಗೆ ಆನ್ ಲೈನ್ ಮೂಲಕ 50 ಸಾವಿರ ರುಪಾಯಿ ತನಕ ಸಾಲ ನೀಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ವರ್ತಕರು ಎಚ್ ಯುಎಲ್ ನ ಶಿಖರ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು, ಈ ಸೌಲಭ್ಯ ಬಳಸಿಕೊಳ್ಳಬಹುದು. ಆರಂಭದಲ್ಲಿ ಮುಂಬೈ ಹಾಗೂ ಬೆಂಗಳೂರಿನಲ್ಲಿ ಈ ಸೌಲಭ್ಯ ಒದಗಿಸಲಾಗುತ್ತದೆ. ಆ ನಂತರ ಇತರ ನಗರಗಳಿಗೆ ವಿಸ್ತರಣೆ ಮಾಡಲಾಗುತ್ತದೆ.
ಕಾಗದ- ಪತ್ರ ಇಲ್ಲದೆ ಓವರ್ ಡ್ರಾಫ್ಟ್ ಸೌಲಭ್ಯ
ವಿತರಕರಿಗೆ ಬಾಕಿ ಇರುವ ಬಿಲ್ಲಿಂಗ್ ಗೆ ವಿತರಕರಿಗೆ ಸಾಲ ಸೌಲಭ್ಯವು ಯಾವುದೇ ಕಾಗದ- ಪತ್ರದ ಅಗತ್ಯವಿಲ್ಲದೆ ತಕ್ಷಣದ ಓವರ್ ಡ್ರಾಫ್ಟ್ ಸೌಲಭ್ಯ ಸಿಗಲಿದೆ. ಇನ್ನು ಎಸ್ ಬಿಐನಿಂದ ಸಣ್ಣ ನಗರದ ಎಚ್ ಯುಎಲ್ ಟಚ್ ಪಾಯಿಂಟ್ ಗಳಲ್ಲಿ ಪಾಯಿಂಟ್ ಆಫ್ ಸೇಲ್ ಮಶೀನ್ ಹಾಕಲಿದೆ. ದೊಡ್ಡ ಮಟ್ಟದ ಡೀಲರ್ ಗಳಿಗೆ ನಗದುರಹಿತ ಪಾವತಿ ಮಾಡಲು ಯುಪಿಐ ಆಧಾರಿತ ಬೆಂಬಲವನ್ನು ರೀಟೇಲರ್ ಗಳಿಗೆ ನೀಡಲಾಗುತ್ತದೆ.
ಕೊರೊನಾದ ಕಾರಣಕ್ಕೆ ನಗದು ಸಮಸ್ಯೆ
ರೀಟೇಲರ್ ಗಳು ಸರಕು ಖರೀದಿಸಿದ ಮೇಲೆ ಹಣ ಪಾವತಿಗೆ ವಿತರಕರಿಂದ ಏಳರಿಂದ ಹತ್ತು ದಿನಗಳ ಸಮಯ ನೀಡಲಾಗುತ್ತದೆ. ಆದರೆ ಕೊರೊನಾ ಕಾರಣಕ್ಕೆ ಹೇರಿದ ಲಾಕ್ ಡೌನ್ ನಿಂದಾಗಿ ಪೂರೈಕೆ ಜಾಲ ಮತ್ತು ಬೇಡಿಕೆಗೆ ಸಮಸ್ಯೆ ಆಗಿದೆ. ವಿತರಕರಿಗೇ ನಗದು ಸಮಸ್ಯೆ ಎದುರಾಗಿರುವುದರಿಂದ ಮುಂಚಿತವಾಗಿಯೇ ಹಣ ಪಾವತಿಸುವಂತೆ ವಿತರಕರು ಕೇಳುತ್ತಿದ್ದಾರೆ.
ಎಫ್ ಎಂಸಿಜಿಯದು ಮಾರಾಟದಲ್ಲಿ ಶೇಕಡಾ 90ರಷ್ಟು ಕೊಡುಗೆ
ಸಾಮಾನ್ಯ ವ್ಯವಹಾರದಲ್ಲಿ ಚೇತರಿಕೆ ಅಥವಾ ವಿತರಕರು ಹಾಗೂ ಸಣ್ಣ ರೀಟೇಲರ್ ಗಳು ಈ ಎಫ್ ಎಂಸಿಜಿಗೆ ಬಹಳ ಮುಖ್ಯ. ಏಕೆಂದರೆ ಎಫ್ ಎಂಸಿಜಿಯು ಮಾರಾಟದ ಶೇಕಡಾ 90ರಷ್ಟು ಕೊಡುಗೆ ನೀಡುತ್ತದೆ. ಎಚ್ ಯುಎಲ್ ನಿಂದ ಡಿಜಿಟಲೈಸ್ ಹಾಗೂ ಆಧುನಿಕತೆ ತರಲು ಪ್ರಯತ್ನಿಸಲಾಗುತ್ತದೆ. ಆ ಮೂಲಕ ಜಾಲ, ರೀಟೇಲರ್ ಗಳಿಗೆ ಬೆಂಬಲ ಮತ್ತು ಸಮಯಕ್ಕೆ ಮತ್ತು ಕೈಗೆಟುಕುವಂತೆ ಹಣಕಾಸು ಸೌಲಭ್ಯ ಸಿಗಲಿ ಎಂಬುದು ಉದ್ದೇಶ.
ಮುದ್ರಾ ಸಾಲದ ವಿಸ್ತರಣೆ
ಎಸ್ ಬಿಐ ನಿಂದ ಮಾತನಾಡಿ, ಈ ಸಹಭಾಗಿತ್ವದಿಂದ ದೇಶದ ದೂರದೂರದಲ್ಲೂ ಇರುವ ಗ್ರಾಹಕರಿಗೆ ಸೇವೆ ಒದಗಿಸಲು ಸಹಾಯ ಆಗುತ್ತದೆ. ಬ್ಯಾಂಕ್ ಅಧ್ಯಕ್ಷ ರಜನೀಶ್ ಕುಮಾರ್ ಮಾತನಾಡಿ, ಇದು ಮುದ್ರಾ ಸಾಲದ ವಿಸ್ತರಣೆ. ಭವಿಷ್ಯದಲ್ಲಿ ಇದು ಪೂರೈಕೆ ಜಾಲದ ಹಣಕಾಸು ಸೌಲಭ್ಯಕ್ಕೆ ಮಾದರಿ ಆಗಲಿದೆ ಎಂದು ಹೇಳಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications