ಕ್ರೆಡಿಟ್ ಡೇಟಾ ಸಂಸ್ಥೆಯಾದ ಟ್ರಾನ್ಸ್ಯೂನಿಯನ್ ಸಿಬಿಲ್ ಸಾಲ ಮರುಪಾತಿ ಕುರಿತಂತೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಆ ಪ್ರಕಾರ ಬ್ಯಾಂಕ್ಗಳು ಅಥವಾ ಎನ್ಬಿಎಫ್ಸಿಗಳಿಂದ ಸಾಲವನ್ನು ಮರುಪಾವತಿಸುವಾಗ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಶಿಸ್ತುಬದ್ಧತೆ ಅಥವಾ ಪ್ರಾಮಾಣಿಕತೆಯನ್ನು ತೋರಿಸುತ್ತಿರುವುದಾಗಿ ಹೇಳಿದೆ. ಈ ವರದಿಯು ಮಹಿಳಾ ದಿನಾಚರಣೆಯಾದ ಮಾ.8ರ ಮುನ್ನವೇ ಬಿಡುಗಡೆಯಾಗಿದೆ.
ಈ ವರದಿಯಲ್ಲಿ ಹೊರಬಂದ ಅಂಶಗಳ ಪ್ರಕಾರ ಕಳೆದ ಐದು ವರ್ಷದಲ್ಲಿ ಮಹಿಳೆಯರಿಗೆ ನೀಡಿರುವ ಸಾಲದ ಸಂಖ್ಯೆ ಹೆಚ್ಚಾಗಲು ಅವರು ಮರುಪಾವತಿಯಲ್ಲಿ ತೋರಿಸಿದ ಪ್ರಾಮಾಣಿಕತೆಯೇ ಕಾರಣ ಎಂದು ಹೇಳಿದೆ. ಟ್ರಾನ್ಸ್ಯೂನಿಯನ್ ಸಿಬಿಲ್ ಪ್ರಕಾರ, ಭಾರತದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳಾ ಸಾಲಗಾರರ ಸಂಖ್ಯೆಯು ವಾರ್ಷಿಕ ಶೇ.15ರಂತೆ ಕಳೆದ ಐದು ವರ್ಷಗಳಲ್ಲಿ ಏರಿಕೆಯಾಗಿದೆ. ಪುರುಷ ಸಾಲಗಾರ ಸಂಖ್ಯೆ ಶೇ.11 ರಷ್ಟು ಇದೆ.

ಡೇಟಾದಲ್ಲಿ ಬೇರೆ ಏನಿದೆ ನೋಡಿ
2017ರಲ್ಲಿ ಶೇ.25ರಷ್ಟು ಸಾಲಗಾರರು ಮಹಿಳೆಯರಾಗಿದ್ದು, 2022ಕ್ಕೆ ಅದು ಶೇ.28ಕ್ಕೆ ಏರಿಕೆಯಾಗಿದೆ. ಈ ಅಂಕಿ-ಅಂಶವನ್ನು ನೋಡಿದಾಗ ದೇಶದ ಆರ್ಥಿಕ ಸೇರ್ಪಡೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದು ಹಾಗೂ ಮಹಿಳೆಯರಿಗೆ ಸಾಲ ನೀಡುವಲ್ಲಿ ವಿಪುಲ ಅವಕಾಶವಿರುವುದನ್ನು ಸೂಚಿಸುತ್ತದೆ. ಪ್ರಸ್ತುತ ಭಾರತದ ಅಂದಾಜು 1.4 ಬಿಲಿಯನ್ ಜನಸಂಖ್ಯೆಯಲ್ಲಿ ಸುಮಾರು 454 ಮಿಲಿಯನ್ ಮಂದಿ ವಯಸ್ಕ ಮಹಿಳೆಯರಾಗಿದ್ದಾರೆ.
ಆ ಪೈಕಿ ಸುಮಾರು 6.3 ಕೋಟಿ ಮಹಿಳೆಯರು ಸಾಲ ಪಡೆದುಕೊಂಡಿರುವುದಾಗಿ 2022ರವರೆಗಿನ ಅಂಕಿ-ಅಂಶಗಳು ಹೇಳುತ್ತವೆ. 2017ರಲ್ಲಿ ಸಾಲ ಪಡೆಯುವ ಮಹಿಳೆಯರ ಸಂಖ್ಯೆ ಶೇ.7ರಷ್ಟು ಇದ್ದು, ಅದು 2022ರಲ್ಲಿ ಶೇ.14ಕ್ಕೆ ಹೆಚ್ಚಳವಾಗಿದೆ. ಈ ಅಂಕಿ-ಅಂಶವನ್ನು ನೋಡಿದರೆ, ದೇಶದಲ್ಲಿ ಮಹಿಳೆಯರ ಆರ್ಥಿಕ ಸೇರ್ಪಡೆ ಸಾಧಿಸುವಲ್ಲಿ ಇನ್ನೂ ಬಹಳ ದೂರ ಸಾಗಬೇಕಿದೆ. ಆದರೆ, ಇಲ್ಲಿವರೆಗೆ ಮಾಡಿರುವ ಪ್ರಗತಿಯು ಉತ್ತೇಜನಕಾರಿಯಾಗಿದೆ.
ಮಹಿಳಾ ಸಾಲಗಾರರ ಸಂಖ್ಯೆಯಲ್ಲಿನ ಹೆಚ್ಚಳವು ಸರ್ಕಾರದ ಆರ್ಥಿಕ ಸೇರ್ಪಡೆಗೆ ಧನಾತ್ಮಕ ಸಂಕೇತವಾಗಿದೆ ಎಂದು ಟ್ರಾನ್ಸ್ಯೂನಿಯನ್ ಸಿಬಿಲ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರ್ಷಲಾ ಚಂದೋರ್ಕರ್ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಮಹಿಳೆಯರಿಗೆ ಸಾಲ ನೀಡುವುದರಿಂದ ವಿವಿಧ ಸಾಮಾಜಿಕ-ಆರ್ಥಿಕ ವರ್ಗದವರಿಗೆ, ನಾನಾ ವಯಸ್ಸಿನವರಿಗೆ ಹಾಗೂ ಭೌಗೋಳಿಕವಾಗಿ ತಮ್ಮ ಆಕಾಂಕ್ಷೆಗಳನ್ನು ಪೂರೈಸುವುದಕ್ಕೆ ಸಹಾಯವಾಗುತ್ತದೆ.
ಇದರಿಂದ ಮಹಿಳೆಯರಿಗೆ ಮಾತ್ರವಲ್ಲದೆ ಸಾಂಪ್ರದಾಯಿಕವಾಗಿ ಹಿಂದುಳಿದ ವಲಯದವರಿಗೂ ಅನುಕೂಲವಾಗಲಿದೆ ಎನ್ನುವುದು ಅವರ ಸಲಹೆಯಾಗಿದೆ.ಟ್ರಾನ್ಸ್ಯೂನಿಯನ್ ಸಿಬಿಲ್ ವರದಿಯು ಭಾರತದ ಕ್ರೆಡಿಟ್ ಮಾರ್ಕೆಟ್ನಲ್ಲಿ ಮಹಿಳೆಯರ ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವ ಸಕಾರಾತ್ಮಕ ಪ್ರವೃತ್ತಿಯನ್ನು ತೋರಿಸುತ್ತದೆ.
ಸುಧಾರಣೆಗಳಿಗೆ ಇನ್ನೂ ಅವಕಾಶಗಳಿರುವ ಬಗ್ಗೆ ಉಲ್ಲೇಖಿಸಿರುವ ವರದಿಯು ಮಹಿಳೆಯರು ತಾವು ಪಡೆಯುವ ಸಾಲವನ್ನು ಮರುಪಾವತಿಸುವಲ್ಲಿ ಹೆಚ್ಚು ಪ್ರಾಮಾಣಿಕರಾಗಿದ್ದಾರೆ ಹಾಗೂ ಇದು ಮಹಿಳಾ ಸ್ನೇಹಿ ಸಾಲದ ಅವಕಾಶಗಳನ್ನು ಒದಗಿಸುವ ಮೂಲಕ ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ಹಾಗೂ ಆರ್ಥಿಕ ಬೆಳವಣಿಯನ್ನು ಉತ್ತೇಜಿಸಲು ಸಹಾಯವಾಗುತ್ತದೆ ಎಂದು ಹೇಳಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications