ನೀವು ರೆಸ್ಟೋರೆಂಟ್ ವೊಂದಕ್ಕೆ ತೆರಳಿ ತಿಂಡಿ ತಿಂದು ಬಿಲ್ ಪಡೆದ ಮೇಲೆ ಹಲವಾರು ಅನುಮಾನಗಳು ಕಾಡುತ್ತಲೇ ಇರುತ್ತವೆ. ನೀವು ಆರ್ಡರ್ ಮಾಡಿದ ಆಹಾರದ ಲೆಕ್ಕಕ್ಕೂ ಕೈಗೆ ಹೊಟೆಲ್ ಇತ್ತ ಬಿಲ್ ಗೂ ಅಜಗಜಾಂತರ ವ್ಯತ್ಯಾಸ ಕಂಡುಬರಂದಂತೆ ಅನಿಸುತ್ತದೆ.
ಕೆಲವರು ಸುಮ್ಮನೆ ಕೇಳಿದ್ದಷ್ಟು ಬಿಲ್ ನೀಡಿ ಬರುತ್ತಾರೆ. ಪ್ರಶ್ನೆ ಮಾಡಿದರೆ ಹೊಟೆಲ್ ಮಾಲೀಕರು ಸಿದ್ಧ ಉತ್ತರಗಳನ್ನು ನೀಡುತ್ತಾರೆ. ಗ್ರಾಹಕರಿಗೆ ಇರುವ ಕಡಿಮೆ ತಿಳಿವಳಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ರೆಸ್ಟೋರೆಂಟ್ ಮಾಲೀಕರು ಸರಿಯಾಗಿಯೇ ಹಣ ವಸೂಲಿ ಮಾಡುತ್ತಿದ್ದಾರೆ.[ತೆರಿಗೆ ಪಾವತಿ ವೇಳೆ ತಪ್ಪಾದರೆ ಮತ್ತೆ ರಿಟರ್ನ್ಸ್ ಸಾಧ್ಯವೇ?]

ಇಲ್ಲಿ ನಿಮಗೆ ಸೇವಾಶುಲ್ಕ, ಸೇವಾ ತೆರಿಗೆ ಎಂಬ ಎರಡು ಶಬ್ದಗಳ ನಡುವಿನ ಗೊಂದಲ ಉಂಟಾಗಬಹುದು. ಇವುಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡರೆ ರೆಸ್ಟೋರೆಂಟ್ ಗಳ ಕರಾಮತ್ತು ಅರ್ಥವಾಗುತ್ತದೆ.[ವಿಳಂಬವಾಗಿದ್ದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಹೇಗೆ?]
ಸೇವಾ ತೆರಿಗೆ
ನೀವು ಪಡೆದುಕೊಂಡ ಸೇವೆಗೆ ಸರ್ಕಾರಕ್ಕೆ ಪಾವತಿಸುವ ತೆರಿಗೆಯನ್ನು ಸೇವಾ ತೆರಿಗೆ ಎಂದು ಪರಿಗಣನೆ ಮಾಡಬಹುದು. ಸರ್ಕಾರಕ್ಕೆ ಈ ಬಗೆಯ ತೆರಿಗೆ ಪ್ರಮುಖ ಆದಾಯದ ಮೂಲವಾಗಿರುತ್ತದೆ.
ನಿಮ್ಮ ಹೊಟೆಲ್ ಬಿಲ್ ಅಥವಾ ದೂರವಾಣಿ ಬಿಲ್ ಮೇಲೆಯೂ ಈ ತೆರಿಗೆಯ ಉಲ್ಲೇಖವಿರುತ್ತದೆ. ಜುನ್ 1, 2015 ರಿಂದ ಸೇವಾ ತೆರಿಗೆಯನ್ನು ಶೇ. 14 ರಂತೆ ಆಕರಣೆ ಮಾಡಲಾಗುತ್ತಿದೆ. ನೀವು ನೀಡಬೇಕಾದ ಒಟ್ಟು ಮೊತ್ತದ ಶೇ. 5.6 ನ್ನು ಸೇವಾ ತೆರಿಗೆಯಾಗಿ ಪಾವತಿ ಮಾಡಬೇಕಾಗುತ್ತದೆ.
ರೆಸ್ಟೋರೆಂಟ್ ಗಳು ನಿಮ್ಮ ಬಿಲ್ ಅಷ್ಟೂ ಮೊತ್ತಕ್ಕೆ ಸೇವಾ ತೆರಿಗೆ ಪಾವತಿ ಮಾಡುವಂತೆ ಕೇಳುತ್ತವೆ. ಯಾಕೆಂದರೆ ಅವುಗಳು ಶೇ. 5.6 ಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಬೇಕು ಎಂಬ ಮನೋಭಾವ ಹೊಂದಿರುತ್ತವೆ. ರೆಸ್ಟೋರೆಂಟ್ ಗಳು, ಮೆಸ್ ಗಳು, ಹವಾನಿಯಂತ್ರಿತ ಕೊಠಡಿಗಳು ಮುಂತಾದವು ಸೇವಾ ತೆರಿಗೆಯನ್ನು ಪಡೆದುಕೊಳ್ಳುತ್ತವೆ.
ಸೇವಾ ಶುಲ್ಕ
ಸೇವಾ ಶುಲ್ಕ ವನ್ನು ಆಯಾ ರೆಸ್ಟೋರೆಂಟ್ ಮಾಲೀಕರೆ ನಿರ್ಧಾರ ಮಾಡುತ್ತಾರೆ. ಇಲ್ಲಿ ಪಾವತಿಯಾಗುವ ಹಣ ನೇರವಾಗಿ ಮಾಲೀಕರ ಜೇಬನ್ನು ಸೇರುತ್ತದೆ. ಪೂರೈಕೆ ಮಾಡುವ ಆಹಾರ, ಟೇಬಲ್, ಸ್ವಚ್ಛತೆ ಮುಂತಾದ ಕಾರಣಗಳ ಆಧಾರದಲ್ಲಿ ತೆಗೆದುಕೊಳ್ಳುವ ಹಣ ಸೇವಾ ಶುಲ್ಕ ಎಂದು ಕರೆಸಿಕೊಳ್ಳುತ್ತದೆ.
ಆಯಾ ರೆಸ್ಟೋರೆಂಟ್ ಆಧಾರಲ್ಲಿ ಇದರ ಪ್ರಮಾಣ ಹೆಚ್ಚು ಕಡಿಮೆ ಆಗಬಹುದು. ಶೇ. 5 ರಿಂದ 20 ರವೆಗೆ ಸೇವಾ ಶುಲ್ಕವನ್ನು ಪಡೆದುಕೊಳ್ಳಬಹುದು. ಆಯಾ ಪ್ರದೇಶ, ಮಹಾನಗರ, ಸ್ಥಳ ಮುಂತಾದವುಗಳ ಆಧಾರದಲ್ಲಿ ಸೇವಾ ಶುಲ್ಕ ಆಕರಣೆ ಮಾಡಿಕೊಳ್ಳಲಾಗುತ್ತದೆ.
ಕೊನೆ ಮಾತು: ಸೇವಾ ತೆರಿಗೆ ಅಥವಾ ಶೇವಾ ಶುಲ್ಕ ಪಾವತಿ ಮಾಡುವಾಗ ಅನೇಕ ಸಂಗತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಟಿಐಎನ್ ಸಂಖ್ಯೆ ಮತ್ತು ಸೇವಾ ಶುಲ್ಕದ ಸಂಖ್ಯೆಯನ್ನು ಗಮನಿಸುವುದು ಒಳಿತು. ಅಲ್ಲದೇ ಇದು ಸರ್ಕಾರದ ಮಾನ್ಯತೆ ಪಡೆದ ಬಿಲ್ ಹೌದೋ ಎಂಬುದನ್ನು ಮನಗಾಣಬೇಕಾಗುತ್ತದೆ.(ಗುಡ್ ರಿಟರ್ನ್ಸ್.ಇನ್)
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ



Click it and Unblock the Notifications