ಕರ್ನಾಟಕ ಸರ್ಕಾರ ಉಚಿತ ಕಾಲೇಜು ಶಿಕ್ಷಣ ಸ್ಕೀಮ್ ಅನ್ನು ಘೋಷಣೆ ಮಾಡಿದೆ. ರಾಜ್ಯದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಿಕ್ಷಣ ನೀಡಲು ಈ ಯೋಜನೆಯನ್ನು ಘೋಷಿಸಲಾಗಿದೆ.
ಕರ್ನಾಟಕ ಸರ್ಕಾರ ಉಚಿತ ಕಾಲೇಜು ಶಿಕ್ಷಣ ಸ್ಕೀಮ್ ಅನ್ನು ಘೋಷಣೆ ಮಾಡಿದೆ. ರಾಜ್ಯದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಿಕ್ಷಣ ನೀಡಲು ಈ ಯೋಜನೆಯನ್ನು ಘೋಷಿಸಲಾಗಿದೆ. ಸರಕಾರಿ ಪೂರ್ವ ವಿಶ್ವವಿದ್ಯಾನಿಲಯ, ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಓದುವ ಹುಡುಗಿಯರ ಕಾಲೇಜು ಶಿಕ್ಷಣದ ವೆಚ್ಚವನ್ನು ರಾಜ್ಯದ ಸರ್ಕಾರವು ಭರಿಸಲಿದೆ.
ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಓದುವ ಬಾಲಕಿಯರಿಗೆ ಕರ್ನಾಟಕ ಸರ್ಕಾರ ಉಚಿತ ಶಿಕ್ಷಣ ಒದಗಿಸಲಿದೆ.
ಯೋಜನಾ ಧ್ಯೇಯ
ಕರ್ನಾಟಕ ಸರ್ಕಾರ ಘೋಷಿಸಿರುವ ಉಚಿತ ಕಾಲೇಜು ಶಿಕ್ಷಣ ಸ್ಕೀಮ್ ಮುಖ್ಯ ಧ್ಯೇಯವೆಂದರೆ ರಾಜ್ಯದಲ್ಲಿ ಹುಡುಗಿಯರ ಸಬಲೀಕರಣ, ಸಮಾನವಾದ ಅವಕಾಶಗಳನ್ನು ಒದಗಿಸುವುದು ಹಾಗು ಹುಡುಗಿಯರನ್ನು ಉನ್ನತ ಹುದ್ದಗಳಿಗೆ ಅಧಿಕಾರಕ್ಕೆ ತರುವುದು.
ಯೋಜನೆಗೆ ಕಾರಣ
ವಿವಿಧ ಕಾರಣಗಳಿಂದ ಶಾಲಾ ಶಿಕ್ಷಣದ ನಂತರ ಬಹುತೇಕ ಹುಡುಗಿಯರು ಶಾಲೆ ಬಿಡುತ್ತಾರೆ. ಅಂದರೆ ಅರ್ಧಕ್ಕೆ ಶಾಲೆ ಬಿಡುವವರ ಡ್ರಾಪ್ ಔಟ್ ರೇಟ್ ಜಾಸ್ತಿ ಇದೆ. ಇದಕ್ಕೆ ಪ್ರಾಥಮಿಕವಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿ ಉನ್ನತ ಶಿಕ್ಷಣ ಪಡೆಯುವಲ್ಲಿ ಅಡ್ಡಾಗಲಾಗುತ್ತದೆ. ಹಳ್ಳಿಗಳಿಂದ ಕಾಲೇಜುಗಳು ದೂರವಿರುವ ಕಾರಣ, ಬಸ್ ಸೌಲಭ್ಯ ಇಲ್ಲದಿರುವ ಕಾರಣ ಹೆಚ್ಚಿನ ಪಾಲಕರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲ್ಲ. ಹೀಗಾಗಿ ಉಚಿತ ಕಾಲೇಜು ಶಿಕ್ಷಣ ಯೋಜನೆ ಹುಡುಗಿಯರು ಉನ್ನತ ಶಿಕ್ಷಣವನ್ನು ಪಡೆಯುವಂತೆ ಸಹಾಯ ಮಾಡುತ್ತದೆ. ಇದು ಹುಡುಗಿಯರ ಡ್ರಾಪ್ ಔಟ್ ಪ್ರಮಾಣವನ್ನು ಕಡಿಮೆ ಮಾಡಲಿದೆ.
ಉದ್ದೇಶಗಳೇನು ಗೊತ್ತೆ?
- ಶಾಲಾ ಶಿಕ್ಷಣದ ನಂತರ ಅರ್ಧಕ್ಕೆ ಶಾಲೆ ಬೀಡುವ ಹುಡುಗಿಯರ ಡ್ರಾಪ್-ಔಟ್ ದರವನ್ನು ಕಡಿಮೆ ಮಾಡುವುದು.
- ಹುಡುಗಿಯರಿಗೆ ಆರ್ಥಿಕವಾಗಿ ಬೆಂಬಲ ಒದಗಿಸುವುದು
- ಹುಡುಗಿಯರಿಂದ ಎಷ್ಟು ಸಾಧ್ಯವೋ ಅಷ್ಟು ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸುವುದು.
- ಶಿಕ್ಷಣದ ಮೂಲಕ ಹುಡುಗಿಯರು ಮತ್ತು ಅವರ ಕುಟುಂಬಗಳ ಸಬಲೀಕರಣ
ಪ್ರಯೋಜನಗಳು
ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಾದ ಪೂರ್ವ ವಿಶ್ವವಿದ್ಯಾಲಯ, ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಬಾಲಕಿಯರು ಉಚಿತ ಕಾಲೇಜು ಶಿಕ್ಷಣ ಪಡೆಯಬಹುದು.
ಉಚಿತ ಕಾಲೇಜು ಶಿಕ್ಷಣ ಯೊಜನೆ ಮೂಲಕ ರಾಜ್ಯದ ಸುಮಾರು 3.7 ಲಕ್ಷ ಬಾಲಕಿಯರಿಗೆ ಪ್ರಯೋಜನವಾಗಲಿದೆ.
ಯೋಜನಾ ವೆಚ್ಚ, ಕಾಯಿದೆ
ಈ ಯೋಜನೆಗಾಗಿ ವಾರ್ಷಿಕ ರೂ. 95 ಕೋಟಿ ವೆಚ್ಚವಾಗಲಿದೆ. 2018-19ರ ಶೈಕ್ಷಣಿಕ ವರ್ಷದಿಂದ ಈ ಯೋಜನೆಯು ಅನ್ವಯವಾಗುತ್ತದೆ. ಡಿಸೆಂಬರ್ 2018 ರಲ್ಲಿ ರಾಜ್ಯ ಸಚಿವ ಸಂಪುಟ ಈ ಯೋಜನೆಯನ್ನು ಅನುಮೋದಿಸಿದೆ. ಶಾಲಾ ಶಿಕ್ಷಣದ ನಂತರ ಹುಡುಗಿಯರು ಸಾಮಾನ್ಯವಾಗಿ ಕಾಲೇಜು ಬಿಡುತ್ತಾರೆ. ಶಿಕ್ಷಣ ಹಕ್ಕು ಕಾಯಿದೆ ಶಾಲಾ ಶಿಕ್ಷಣದ ತನಕ ಹುಡುಗಿಯರ ಕಡ್ಡಾಯ ಶಿಕ್ಷಣ ಬೆಂಬಲಿಸುತ್ತದೆ. ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ಮುನ್ನ ಇಲ್ಲೊಮ್ಮೆ ನೋಡಿ..
More From GoodReturns

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಎಲ್ಲ ಹಣವನ್ನೂ ಒಂದೇ ಬ್ಯಾಂಕ್ನಲ್ಲಿ ಇಡ್ತಿದ್ದೀರಾ? ಒಂದು ತಪ್ಪು ನಿಮ್ಮ ಸಂಪೂರ್ಣ ಉಳಿತಾಯಕ್ಕೆ ಅಪಾಯ!

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications