Ayodhya Ram Mandir: ಭಾರತದಾದ್ಯಂತ ಇರುವ ಏಳು ಭವ್ಯವಾದ ರಾಮಮಂದಿರಗಳಿವು

ವಾಲ್ಮೀಕಿ ರಾಮಾಯಣ, ಕಂಬ ರಾಮಾಯಣ, ತುಸಿದಾಸರ ರಾಮಚರಿತಮಾನಸಗಳು ಭಾರತೀಯ ಸಾಹಿತ್ಯ ಇತಿಹಾಸದಂತೆಯೇ ಒಂದೇ ನಿರೂಪಣೆಗೆ ಬದ್ಧವಾಗಿಲ್ಲ. ಆದ್ದರಿಂದ ಅಯೋಧ್ಯೆಯಲ್ಲಿ ಮಾತ್ರವಲ್ಲ ದೇಶದ ಬೇರೆ ಬೇರೆ ಭಾಗಗಳಲ್ಲಿ ಅಲ್ಲಿಯ ಪೌರಾಣಿಕ ಕಥೆಗೆ ಅನುಸಾರವಾಗಿ ರಾಮ ಮಂದಿರಗಳಿದೆ.

ತಜ್ಞರ ಪ್ರಕಾರ ಭಾರತೀಯ ಮಹಾಕಾವ್ಯ ರಾಮಾಯಣದ ಮುನ್ನೂರು ಆವೃತ್ತಿಗಳ ಅಸ್ತಿತ್ವದಲ್ಲಿವೆ ಎಂದು ತಿಳಿದುಬಂದಿದೆ. ಜನವರಿ 22 ರಂದು ರಾಮಮಂದಿರದಲ್ಲಿ 'ಪ್ರಾಣ ಪ್ರತಿಷ್ಠಾ' ಸಮಾರಂಭವನ್ನು ಆಚರಿಸಲು ಭಕ್ತರು ಸಜ್ಜಾಗಿದ್ದಾರೆ. ಈ ನಡುವೆ ನಾವು ದೇಶಾದ್ಯಂತ ಇರುವ ಏಳು ಭವ್ಯವಾದ ರಾಮಮಂದಿರಗಳ ಬಗ್ಗೆ ತಿಳಿಯೋಣ ಮುಂದೆ ಓದಿ....

 ಭಾರತದಾದ್ಯಂತ ಇರುವ ಏಳು ಭವ್ಯವಾದ ರಾಮಮಂದಿರಗಳಿವು

1. ಕೋದಂಡರಾಮ ದೇವಾಲಯ - ವೊಂಟಿಮಿಟ್ಟ, ಆಂಧ್ರಪ್ರದೇಶ

ಕೋದಂಡರಾಮ ದೇವಾಲಯವು ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ವೊಂಟಿಮಿಟ್ಟಾ ಮಂಡಲಂನ ವೊಂಟಿಮಿಟ್ಟಾ ಪಟ್ಟಣದಲ್ಲಿದೆ. ನಿಷಾದ ವಂಶದ ಮಾಜಿ ದರೋಡೆಕೋರರಾದ ವೊಂಟುಡು ಮತ್ತು ಮಿಟ್ಟುಡು ರಾಮನ ಭಕ್ತರಾದ ಬಳಿಕ ನಿರ್ಮಿಸಿದ ದೇವಾಲಯವಿದೆ. ಈ ದೇವಾಲಯವು ಅವರ ಭಕ್ತಿಗೆ ಸಾಕ್ಷಿಯಾಗಿದೆ.

2. ಎರಿ-ಕಥಾ ರಾಮರ್ ದೇವಾಲಯ- ಮಧುರಾಂತಕಂ, ತಮಿಳುನಾಡು

ತಮಿಳುನಾಡಿನ ಮದುರಾಂತಕಂನಲ್ಲಿರುವ ಎರಿ-ಕಥಾ ರಾಮರ್ ದೇವಾಲಯವನ್ನು ರಾಮನು ರಾವಣನನ್ನು ಸೋಲಿಸಿದ ನಂತರ ಸೀತೆ ಮತ್ತು ಲಕ್ಷ್ಮಣರೊಂದಿಗೆ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಹಿಂದಿರುಗುವ ಪ್ರಯಾಣದಲ್ಲಿ ಪುಷ್ಪಕ ವಿಮಾನವನ್ನು ನಿಲ್ಲಿಸಿದ ಸ್ಥಳ ಎಂದು ನಂಬಲಾಗಿದೆ.

3. ರಾಮ್ ತೀರಥ್ ದೇವಾಲಯ - ಅಮೃತಸರ, ಪಂಜಾಬ್

ಪಂಜಾಬ್‌ನ ಅಮೃತಸರದಲ್ಲಿ ನೆಲೆಗೊಂಡಿರುವ ರಾಮ ತೀರ್ಥ ದೇವಾಲಯವು ಸೀತಾ ಪುತ್ರರಾದ ಲವ ಮತ್ತು ಕುಶ ಅವರ ಜನ್ಮದೊಂದಿಗೆ ಸಂಬಂಧಿಸಿದೆ. ದೇವಾಲಯವು ತನ್ನ ಪುರಾತನ ಬಾವಿಗೆ ಹೆಸರುವಾಸಿಯಾಗಿದೆ. ಇದು ಯಾವುದೇ ಕಾಯಿಲೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಲಂಕಾ ವಿಜಯದ ನಂತರ ವಾಲ್ಮೀಕಿ ಋಷಿ ಸೀತೆಗೆ ಆಶ್ರಯ ನೀಡಿದ ಸ್ಥಳವೂ ಇಲ್ಲಿದೆ.

4. ತ್ರಿಪ್ರಯಾರ್ ಶ್ರೀ ರಾಮ ದೇವಾಲಯ - ಕೇರಳ

ಕೇರಳದ ತ್ರಿಶ್ಶೂರ್ ಜಿಲ್ಲೆಯ ತ್ರಿಪ್ರಯಾರ್‌ನಲ್ಲಿರುವ ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದೇವಾಲಯದಲ್ಲಿ ಕೃಷ್ಣನಿಂದ ಪೂಜಿಸಲ್ಪಟ್ಟ ವಿಗ್ರಹವಿದೆ. ನಾಲಂಬಲಂಗಳಲ್ಲಿ ರಾಜ ದಶರಥನ ಪುತ್ರರಿಗೆ ಸಮರ್ಪಿತವಾದ ನಾಲ್ಕು ದೇವಾಲಯಗಳಲ್ಲಿ ಈ ದೇವಾಲಯವು ಮೊದಲನೆಯದಾಗಿದೆ.

5. ಕೋದಂಡ ರಾಮ ದೇವಾಲಯ- ಚಿಕ್ಕಮಗಳೂರು, ಕರ್ನಾಟಕ

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನಲ್ಲಿ ನೆಲೆಗೊಂಡಿರುವ ಕೋದಂಡರಾಮಸ್ವಾಮಿ ದೇವಾಲಯವು ಸ್ಕಂದ ಪುರಾಣದ ವಿಶಿಷ್ಟ ಘಟನೆಯೊಂದಿಗೆ ಸಂಬಂಧಿಸಿದೆ. ಪ್ರಾಚೀನ ಸಾಹಿತ್ಯದ ಅವಧಿಯ ಕಥೆ ಹೇಳುವ ಪ್ರಕಾರ ರಾಮನು ಪರಶುರಾಮನಿಗೆ ತನ್ನ ಮೂಲ ವಿವಾಹ ಭಂಗಿಯಲ್ಲಿ ಸೀತೆಯನ್ನು ತನ್ನ ಪಕ್ಕದಲ್ಲಿಟ್ಟುಕೊಂಡು ದರ್ಶನ ನೀಡುತ್ತಾನೆ.

6. ರಾಮರಾಜ ದೇವಾಲಯ - ಓರ್ಚಾ, ಮಧ್ಯಪ್ರದೇಶ

ಮಧ್ಯಪ್ರದೇಶದ ಓರ್ಚಾದಲ್ಲಿರುವ ರಾಮರಾಜ ದೇವಾಲಯವು ಅರಮನೆಯ ವ್ಯವಸ್ಥೆಯಲ್ಲಿ ರಾಮನನ್ನು ರಾಜನಾಗಿ ಪೂಜಿಸುವ ಏಕೈಕ ದೇವಾಲಯವಾಗಿದೆ. ರಾಜನಿಗೆ ಮಾಡುವಂತೆ ದೈನಂದಿನವಾಗಿ ಗೌರವ ನೀಡಲಾಗುತ್ತದೆ. ಈ ದೇವಾಲಯದಲ್ಲಿರುವ ರಾಮನ ವಿಗ್ರಹವು ಪದ್ಮಾಸನದಲ್ಲಿ ಕುಳಿತಿರುವಾಗ ಖಡ್ಗ ಮತ್ತು ಗುರಾಣಿಯನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ.

7. ಶ್ರೀ ವಿಜಯರಾಘವ ಪೆರುಮಾಳ್ ದೇವಸ್ಥಾನ- ತಿರುಪ್ಪುಕುಝಿ, ಕಾಂಚೀಪುರಂ ಜಿಲ್ಲೆ, ತಮಿಳುನಾಡು

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ತಿರುಪ್ಪುಕುಜಿಯಲ್ಲಿರುವ ಈ ದೇವಾಲಯವು ವಿಷ್ಣುವಿಗೆ ಸಮರ್ಪಿತವಾದ 108 ದಿವ್ಯ ದೇಶಗಳಲ್ಲಿ ಒಂದಾಗಿದೆ. ಗರ್ಭಗುಡಿಯ ಒಳಗೆ, ಜಟಾಯುವನ್ನು ವಿಜಯರಾಘವ ಪೆರುಮಾಳ್‌ನ ಮಡಿಲಲ್ಲಿ ಚಿತ್ರಿಸಲಾಗಿದೆ. ಇದು ರಾಮನು ಪಕ್ಷಿ ಜಟಾಯುವಿಗೆ ಅಂತಿಮ ವಿಧಿಗಳನ್ನು ಮಾಡಿದ ಸ್ಥಳವನ್ನು ಸಂಕೇತಿಸುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+