Bangalore Chennai Expressway: ನಕ್ಷೆ, ಪ್ರಯಾಣ ಸಮಯ, ಯಾವೆಲ್ಲ ನಗರದಲ್ಲಿ ಸಾಗುತ್ತದೆ ತಿಳಿಯಿರಿ

ಪ್ರಸ್ತುತ ಎಲ್ಲೆಂದರಲ್ಲಿ ಟ್ರಾಫಿಕ್ ಇರುತ್ತದೆ. ಇದರಿಂದಾಗಿ ಜನರ ಸಮಯ ಮತ್ತು ಇಂಧನ ಎರಡೂ ಕೂಡಾ ವ್ಯರ್ಥವಾಗುತ್ತದೆ. ಪ್ರಯಾಣಿಕರಿಗೆ ಸಮಯ ಹಾಗೂ ಇಂಧನವನ್ನು ಉಳಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ರಸ್ತೆಮಾರ್ಗ ಸಚಿವಾಲಯವು ಭಾರತಮಾಲಾ ಯೋಜನೆಯಡಿ ರಾಷ್ಟ್ರದಾದ್ಯಂತ ಹಲವಾರು ಎಕ್ಸ್‌ಪ್ರೆಸ್‌ವೇಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕೂಡಾ ಈ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ. ಬಹುನಿರೀಕ್ಷಿತ ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್‌ವೇ 2024ರ ಅಕ್ಟೋಬರ್‌ನಲ್ಲಿ ಉದ್ಘಾಟನೆಯಾಗಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಈಗ ಉದ್ಘಾಟನೆ ದಿನಾಂಕವು ಇನ್ನಷ್ಟೂ ವಿಳಂಬವಾಗಲಿದೆ ಎಂದು ವರದಿಯು ಉಲ್ಲೇಖಿಸಿದೆ.

 ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ: ಸಮಯ, ನಗರ, ವಿವರ

ವಿಳಂಬಕ್ಕೆ ಕಾರಣವೇನು?

ಆಂಧ್ರಪ್ರದೇಶದ ಒಂದು ವಿಭಾಗದಲ್ಲಿ ಎಲ್ಲ ಕಾರ್ಯಾಚರಣೆಯು ನಿಧಾನವಾಗಿ ಸಾಗುತ್ತಿರುವ ಕಾರಣದಿಂದಾಗಿಯೇ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸಂಪೂರ್ಣವಾಗಿಲ್ಲ. ಇದರಿಂದಾಗಿ ಉದ್ಘಾಟನೆ ದಿನಾಂಕವನ್ನು ನಿರಂತರವಾಗಿ ಮುಂದೂಡಲಾಗುತ್ತಿದೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ. 2025 ರ ಜೂನ್‌ನಲ್ಲಿ ಈ ಎಕ್ಸ್‌ಪ್ರೆಸ್‌ವೇ ಸಂಪೂರ್ಣವಾಗು ನಿರೀಕ್ಷೆಯಿದೆ ಎಂದು ವರದಿ ಹೇಳುತ್ತದೆ.

ಎಕ್ಸ್‌ಪ್ರೆಸ್‌ವೇ ಬಗ್ಗೆ ಮಾಹಿತಿ

ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದುಹೋಗುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ 262 ಕಿಮೀ ಉದ್ದವಿದೆ. ಅಂದಾಜು 16,730 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಳ್ಳಲಿದೆ. ಇದು ಪೂರ್ಣಗೊಂಡ ನಂತರ, ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು 2-3 ಗಂಟೆಗಳವರೆಗೆ ಕಡಿಮೆ ಮಾಡಲಿದೆ.

ಈ ಗ್ರೀನ್‌ಫೀಲ್ಡ್ ಹೆದ್ದಾರಿಯ 262 ಕಿಲೋಮೀಟರ್‌ಗಳಲ್ಲಿ 85 ಕಿಮೀ ತಮಿಳುನಾಡಿನಲ್ಲಿ, 71 ಕಿಮೀ ಆಂಧ್ರಪ್ರದೇಶದಲ್ಲಿ ಮತ್ತು 106 ಕಿಮೀ ಕರ್ನಾಟಕದಲ್ಲಿ ಇರುತ್ತದೆ. ಗ್ರೀನ್‌ಫೀಲ್ಡ್ ಜೋಡಣೆಯೊಂದಿಗೆ ಎಕ್ಸ್‌ಪ್ರೆಸ್‌ವೇ ರಸ್ತೆಯ ದೂರವನ್ನು 42 ಕಿಲೋಮೀಟರ್‌ಗಳಷ್ಟು ಕಡಿಮೆ ಮಾಡಲಾಗುತ್ತದೆ.

ಇದು ಪ್ರಯಾಣದ ದೂರವನ್ನು 300 ಕಿಮೀ ನಿಂದ 262 ಕಿಮೀಗೆ ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಕನಿಷ್ಠ 9,500 ಪ್ರಯಾಣಿಕ ಆಟೋಮೊಬೈಲ್ ಘಟಕಗಳನ್ನು ಒಳಗೊಂಡಿರುವ ಎರಡು ನಗರಗಳ ನಡುವಿನ ದೈನಂದಿನ ಸಂಚಾರವನ್ನು ನಿಭಾಯಿಸಲು ಇದು ಸಹಾಯ ಮಾಡುತ್ತದೆ.

ಎಕ್ಸ್‌ಪ್ರೆಸ್‌ವೇನ ಪ್ರಯೋಜನ, ಇತರೆ ಮಾಹಿತಿ

* ಪ್ರಸ್ತುತ, ಪ್ರಯಾಣಿಕರು ರಸ್ತೆಯ ಮೂಲಕ ಚೆನ್ನೈ ಮತ್ತು ಬೆಂಗಳೂರು ನಡುವಿನ ಅಂತರವನ್ನು ಕ್ರಮಿಸಲು ಐದರಿಂದ ಆರು ಗಂಟೆಗಳನ್ನು ಬೇಕಾಗುತ್ತದೆ.
* ನಾಲ್ಕು ಪಥಗಳ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ 26 ಹೊಸ ಹಸಿರು ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ. ಮೇ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕಿದರು. ಇದು ಪ್ರಯಾಣ ಸರಳಗೊಳಿಸಲಿದೆ.
* ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಿಂದ ಆರಂಭವಾಗಿ ಮಾಲೂರು, ಬಂಗಾರಪೇಟೆ, ಕೋಲಾರ ಗೋಲ್ಡ್ ಫೀಲ್ಡ್ (ಕೆಜಿಎಫ್), ಪಲಮನೇರ್, ಚಿತ್ತೂರು ಮತ್ತು ರಾಣಿಪೇಟೆ ಪಟ್ಟಣಗಳ ಮೂಲಕ ಸಾಗಿ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಪೆರಂಬದೂರಿನಲ್ಲಿ ಈ ಎಕ್ಸ್‌ಪ್ರೆಸ್‌ವೇ ಕೊನೆಯಾಗುತ್ತದೆ.
* ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರಕಾರ, ಯೋಜನೆಯನ್ನು ಮೂರು ಹಂತಗಳಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+