ಮದುವೆ ಸೀಸನ್ ಎಂದರೆ ವ್ಯಾಪಾರ, ವಹಿವಾಟಿಗೂ ಒಂದು ಸೀಸನ್ ಇದ್ದಂತೆ. ದೇಶಾದ್ಯಂತ ಹಲವಾರು ವಸ್ತುಗಳ ಬೇಡಿಕೆಯು ಈ ಮದುವೆ ಸೀಸನ್ನಲ್ಲಿ ಇರುತ್ತದೆ. ಒಟ್ಟು ಆರು ತಿಂಗಳ ಸಂಭ್ರಮದಲ್ಲಿ ಉತ್ತಮ ವ್ಯಾಪಾರದ ನಿರೀಕ್ಷೆಯನ್ನು ಎಲ್ಲ ವ್ಯಾಪಾರಿಗಳು ಹೊಂದಿರುತ್ತದೆ.
ಜನವರಿಯಿಂದ ಮದುವೆ ಸೀಸನ್ ಆರಂಭವಾಗಲಿದ್ದು, ಜೂನ್ ಅಂತ್ಯದವರೆಗೂ ಇರಲಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಅಂದಾಜಿನ ಪ್ರಕಾರವಾಗಿ ಒಟ್ಟಾಗಿ ಸುಮಾರು 53 ಶುಭ ದಿನಗಳು ಇರಲಿದೆ. ಈ ಅವಧಿಯಲ್ಲಿ ದೇಶದಾದ್ಯಂತ ಸುಮಾರು 70 ಲಕ್ಷ ವಿವಾಹಗಳು ನಡೆಯಲಿದೆ. ಸುಮಾರು 13 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಯುವ ನಿರೀಕ್ಷೆಯಿದೆ.

ದೆಹಲಿ ಒಂದು ರಾಜ್ಯದಲ್ಲೇ ಸುಮಾರು 1.25 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 7 ಲಕ್ಷಕ್ಕೂ ಹೆಚ್ಚು ವಿವಾಹಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ 3.75 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದಾದ್ಯಂತ 32 ಲಕ್ಷ ವಿವಾಹಗಳನ್ನು ನಡೆಸಲಾಗಿದೆ.
ಎಷ್ಟು ಖರ್ಚಿನಲ್ಲಿ ವಿವಾಹ ನಡೆಯಲಿದೆ?
ಸಿಎಐಟಿ ರಾಷ್ಟ್ರೀಯ ಅಧ್ಯಕ್ಷರಾದ ಬಿ.ಸಿ.ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳುವಂತೆ ಮದುವೆಗೆ 53 ಮಂಗಳಕರ ದಿನಗಳಿದ್ದು, ಈ ಆರು ತಿಂಗಳ ಮದುವೆಯ ಸೀಸನ್ನಲ್ಲಿ ಸುಮಾರು 10 ಲಕ್ಷ ಮದುವೆಗಳಿಗೆ ಅಂದಾಜು 3 ಲಕ್ಷ ರೂಪಾಯಿ ವೆಚ್ಚವಾಗಲಿದೆ.
ಈ ಪೈಕಿ ಸುಮಾರು 10 ಲಕ್ಷ ಮದುವೆಗೆ ಸುಮಾರು 5 ಲಕ್ಷ ರೂಪಾಯಿ ವೆಚ್ಚ, 15 ಲಕ್ಷ ಮದುವೆಗೆ 10 ಲಕ್ಷ ರೂಪಾಯಿ ವೆಚ್ಚ, 10 ಲಕ್ಷ ಮದುವೆಗೆ 15 ಲಕ್ಷ ರೂಪಾಯಿ ವೆಚ್ಚ, 10 ಲಕ್ಷ ಮದುವೆಗೆ 25 ಲಕ್ಷ ರೂಪಾಯಿ ವೆಚ್ಚ, 10 ಲಕ್ಷ ಮದುವೆಯು 35 ಲಕ್ಷ ರೂಪಾಯಿ ವೆಚ್ಚ, 3 ಲಕ್ಷ ಮದುವೆಗಳು 50 ಲಕ್ಷ ರೂಪಾಯಿ ವೆಚ್ಚ, 2 ಲಕ್ಷ ಮದುವೆಗಳು 1 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವೆಚ್ಚದಲ್ಲಿ ನಡೆಯಲಿದೆ.
ಭರ್ಜರಿಯಾಗಿ ನಡೆಯುವ ವ್ಯಾಪಾರ
"ಮದುವೆ ಸೀಸನ್ಗೂ ಮುನ್ನವೇ ಮನೆಗಳ ದುರಸ್ತಿ, ಪೇಂಟ್, ಆಭರಣಗಳು, ಉಡುಪುಗಳು, ಪೀಠೋಪಕರಣಗಳು, ಪಾದರಕ್ಷೆಗಳು, ಶುಭಾಶಯ ಪತ್ರಗಳು, ಸಿಹಿತಿಂಡಿಗಳು, ಹಣ್ಣುಗಳು, ಪೂಜಾ ಸಾಮಗ್ರಿಗಳು, ದಿನಸಿ, ಆಹಾರ ಧಾನ್ಯಗಳು, ಅಲಂಕಾರ ವಸ್ತುಗಳು, ಎಲೆಕ್ಟ್ರಾನಿಕ್ಸ್ ಮತ್ತು ಅನೇಕ ಉಡುಗೊರೆ ವಸ್ತುಗಳು ಬೇಡಿಕೆ ಅಧಿಕವಾಗಿರುತ್ತದೆ. ಈ ಸೀಸನ್ನಲ್ಲಿ ಭರ್ಜರಿಯಾಗಿ ವ್ಯಾಪಾರ ನಡೆಯುತ್ತದೆ," ಎಂದು ಬಿ.ಸಿ.ಭಾರ್ತಿಯಾ ಮತ್ತು ಖಂಡೇಲ್ವಾಲ್ ತಿಳಿಸಿದರು.
"ಇದನ್ನು ಹೊರತುಪಡಿಸಿ ಹಾಲ್, ಹೊಟೇಲ್ಗಳು, ಪಾರ್ಕ್ಗಳು, ಫಾರ್ಮ್ ಹೌಸ್ಗಳು, ಕ್ಯಾಟೆರಿಂಗ್, ಕ್ಯಾಬ್ ಸೇವೆ, ವಿಡಿಯೋಗ್ರಾಫರ್, ಫೋಟೋಗ್ರಾಫರ್, ಡಿಜೆ, ಹಾಡುಗಾರರು, ವಾದ್ಯ-ತಬಲ ವೃಂದ, ಪೂಜಾರಿಗಳು, ಪಂಡಿತರು, ಗುರಿಕಾರರ ಬೇಡಿಕೆ ಕೂಡಾ ಈ ಮದುವೆಯ ಸೀಸನ್ನಲ್ಲಿಯೇ ಅಧಿಕವಾಗುತ್ತದೆ," ಎಂದು ಮಾಹಿತಿ ನೀಡಿದರು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications