ವಿಚ್ಛೇದನ ಅಥವಾ ಡಿವೋರ್ಸ್ ಎನ್ನುವುದು ಈಗ ಸಾಮಾನ್ಯವಾಗಿದೆ. ಅದರೊಂದಿಗೆ ವಿಚ್ಛೇದನ ಪರಿಹಾರವೂ ಕೂಡಾ ಹೆಚ್ಚು ಸದ್ದು ಮಾಡುತ್ತಾ ಬರುತ್ತಿದೆ. ಅದರಲ್ಲೂ ಇತ್ತೀಚೆಗೆ ಗೌತಮ್ ಸಿಂಘಾನಿಯಾರ ವಿಚ್ಛೇದನ ಪ್ರಕರಣ ಅಧಿಕ ಸುದ್ದಿಯಾಗಿದೆ. ಸಿಂಘಾನಿಯಾ ಪತ್ನಿ ಭಾರೀ ಡಿವೋರ್ಸ್ ಪರಿಹಾರವನ್ನು ಕೇಳಿದ್ದಾರೆ.
ಹೌದು, ಗೌತಮ್ ಸಿಂಘಾನಿಯಾರ ಪತ್ನಿ ನವಾಜ್ ಮೋದಿ ವಿಚ್ಛೇದನ ಪರಿಹಾರಕ್ಕಾಗಿ ಸಿಂಘಾನಿಯಾರ ಸಂಪತ್ತಾದ 1.4 ಬಿಲಿಯನ್ ಡಾಲರ್ನಲ್ಲಿ ಶೇಕಡ 75 ರಷ್ಟನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಇದೇ ಮೊದಲು ಇಂತಹ ದುಬಾರಿ ವಿಚ್ಛೇದನ ನಡೆಯುತ್ತಿರುವುದಲ್ಲ. ಬಾಲಿವುಡ್ನ ಅತೀ ದುಬಾರಿ ವಿಚ್ಛೇದನ ಪ್ರಕರಣಗಳು ಇಲ್ಲಿದೆ, ಮುಂದೆ ಓದಿ.....

ಹೃತಿಕ್ ರೋಷನ್- ಸುಸಾನೆ ಖಾನ್
14 ವರ್ಷಗಳ ವೈವಾಹಿಕ ಜೀವನದ ಬಳಿಕ ಹೃತಿಕ್ ರೋಷನ್ ಮತ್ತು ಸುಸಾನೆ ಖಾನ್ ಬೇರ್ಪಟ್ಟಿದ್ದಾರೆ. ಸುಸಾನೆ ಖಾನ್ ಡಿವೋರ್ಸ್ ಪರಿಹಾರವಾಗಿ 400 ಕೋಟಿ ರೂಪಾಯಿಯ ಬೇಡಿಕೆಯನ್ನು ಮುಂದಿಟ್ಟರೆ, ಹೃತಿಕ್ ರೋಷನ್ 380 ಕೋಟಿ ರೂಪಾಯಿಯನ್ನು ಪರಿಹಾರವಾಗಿ ನೀಡಿದ್ದಾರೆ.
ಕರಿಷ್ಮಾ ಕಪೂರ್- ಸಂಜಯ್ ಕಪೂರ್
ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ಮೇ 2016 ರಲ್ಲಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದರು. ಪ್ರಕರಣದ ವಕೀಲರು, "ಕರಿಷ್ಮಾ ಅವರು ಸಂಜಯ್ ಅವರ ತಂದೆಯ ಮನೆಯನ್ನು (ಖಾರ್ನಲ್ಲಿರುವ) ತನ್ನ ಹೆಸರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಸಂಜಯ್ ಅವರು ಮಕ್ಕಳ ಹೆಸರಿನಲ್ಲಿ 14 ಕೋಟಿ ರೂಪಾಯಿ ಮೌಲ್ಯದ ಬಾಂಡ್ಗಳನ್ನು ಖರೀದಿಸಬೇಕಾಗಿದೆ. ಇದು ಮಾಸಿಕವಾಗಿ ಸುಮಾರು 10 ಲಕ್ಷ ರೂಪಾಯಿ ನೀಡುತ್ತದೆ," ಎಂದು ಮಾಹಿತಿ ನೀಡಿದ್ದರು.
ಫರ್ಹಾನ್ ಅಖ್ತರ್- ಅಧುನಾ ಭಬಾನಿ
ಫರ್ಹಾನ್ ಅಖ್ತರ್ ಮತ್ತು ಅಧುನಾ ಭಬಾನಿ ದಂಪತಿಗಳು 16 ವರ್ಷಗಳ ನಂತರ ತಮ್ಮ ದಾಂಪತ್ಯ ಜೀವನವನ್ನು ಕೊನೆ ಮಾಡಿದ್ದಾರೆ. ಫರ್ಹಾನ್ ಅಧುನಾಗೆ ಒಂದು ಬಾರಿ ಜೀವನಾಂಶವನ್ನು ಪಾವತಿಸಿದ್ದಾರೆ. ಮುಂಬೈನ ಬ್ಯಾಂಡ್ಸ್ಟ್ಯಾಂಡ್ನಲ್ಲಿರುವ ವಿಪಸ್ಸನಾ ಎಂಬ ಹೆಸರಿನ 10,000 ಚದರ ಅಡಿ ಬಂಗಲೆಯನ್ನು ಅಧುನಾಗೆ ನೀಡಿದ್ದಾರೆ.
ಸೈಫ್ ಅಲಿ ಖಾನ್- ಅಮೃತಾ ಸಿಂಗ್
ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ ದಾಂಪತ್ಯದ ನಂತರ, 2004 ರಲ್ಲಿ ಇಬ್ಬರೂ ಬೇರ್ಪಟ್ಟರು. ಜೀವನಾಂಶದ ಬಗ್ಗೆ ಹಳೆಯ ಮಾತನಾಡುತ್ತಾ, ಸೈಫ್ ಸಂದರ್ಶನವೊಂದರಲ್ಲಿ, "ನಾನು ಅಮೃತಾಗೆ 5 ಕೋಟಿ ರೂಪಾಯಿಗಳನ್ನು ನೀಡಬೇಕಾಗಿತ್ತು. ಅದರಲ್ಲಿ ನಾನು ಈಗಾಗಲೇ ಅವಳಿಗೆ ಸುಮಾರು 2.5 ಕೋಟಿ ರೂಪಾಯಿಗಳನ್ನು ನೀಡಿದ್ದೇನೆ. ಅಲ್ಲದೆ, ನನ್ನ ಮಗನಿಗೆ 18 ವರ್ಷವಾಗುವವರೆಗೆ ತಿಂಗಳಿಗೆ 1 ಲಕ್ಷ ರೂಪಾಯಿ ನೀಡಲಿದ್ದೇನೆ," ಎಂದು ತಿಳಿಸಿದ್ದರು.
ಹಾಗೆಯೇ, "ನಾನು ಶಾರುಖ್ ಖಾನ್ ಅಲ್ಲ. ನನ್ನ ಬಳಿ ಅಷ್ಟೊಂದು ಹಣವಿಲ್ಲ. ನಾನು ಉಳಿದ ಹಣವನ್ನು ಪಾವತಿಸುತ್ತೇನೆ ಎಂದು ನಾನು ಅವಳಿಗೆ ಭರವಸೆ ನೀಡಿದ್ದೇನೆ. ನಾನು ಸಾಯುವವರೆಗೂ ನಾನು ಅದಕ್ಕಾಗಿ ದುಡಿಯಬೇಕಾಗಿ ಬಂದರೂ ಕೂಡಾ ನಾನು ಹಣ ನೀಡುತ್ತೇನೆ," ಎಂದು ಹೇಳಿದ್ದರು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications