ಕೌನ್ ಬನೇಗಾ ಕರೋಡ್ಪತಿ ಭಾರತದ ಅಚ್ಚುಮೆಚ್ಚಿನ ರಸಪ್ರಶ್ನೆ ಕಾರ್ಯಕ್ರಮ ಬುದ್ಧಿವಂತಿಕೆ ಮತ್ತು ಅದೃಷ್ಟ ಎರಡರ ಆಕರ್ಷಕ ಮಿಶ್ರಣವಾಗಿದೆ. ಬೇರೆ ಬೇರೆ ಹಿನ್ನೆಲೆಯಿಂದ ಬಂದ ಸ್ಪರ್ಧಿಗಳು ಕಾರ್ಯಕ್ರಮದ ವೇದಿಕೆಗೆ ಸೇರುತ್ತಾರೆ. ಈ ಕ್ವಿಜ್ ಕಾರ್ಯಕ್ರಮದಲ್ಲಿ ನೀವು ಆಟವಾಡಿ ಶ್ರೀಮಂತರಾಗಬಹುದು. ಆದರೆ ಆದಾಯ ತೆರಿಗೆ ಕಾನೂನಿನ ಪ್ರಕಾರ, ಗೆಲುವಿನ ಮೊತ್ತಕ್ಕೂ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಈ ಕಾನೂನು ಚೌಕಟ್ಟಿನ ಅಡಿಯಲ್ಲಿ, ವಿಜೇತರು ತಮ್ಮ ಬಹುಮಾನದ ಹಣದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಒಟ್ಟು ಬಹುಮಾನ ಮೊತ್ತದ ಮೇಲೆ ಸರಿಸುಮಾರು ಶೇಕಡ 30ರಷ್ಟು ತೆರಿಗೆಯನ್ನು ವಿಧಿಸುತ್ತದೆ ಎಂದು ವರದಿ ಹೇಳುತ್ತದೆ. ತೆರಿಗೆಯ ಮೇಲೆ ಹೆಚ್ಚುವರಿ ಶೇಕಡ 4ರಷ್ಟು ಸೆಸ್ ಅನ್ನು ಕೂಡಾ ಪಾವತಿ ಮಾಡಬೇಕಾಗುತ್ತದೆ.

ಒಂದು ಕೋಟಿ ರೂಪಾಯಿಯಲ್ಲಿ ಎಷ್ಟು ತೆರಿಗೆ?
ಕಾರ್ಯಕ್ರಮದ ಹದಿನೈದನೇ ಸೀಸನ್ನಲ್ಲಿ ಜಸ್ಕರನ್ ಸಿಂಗ್ ತನ್ನ ಹೆಸರನ್ನು ಈ ಸೀಸನ್ನ ಮೊದಲ ಮಿಲಿಯನೇರ್ ಎಂದು ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜಸ್ಕರನ್ ಸಿಂಗ್ ಈ ಕಾರ್ಯಕ್ರಮದಲ್ಲಿ 1 ಕೋಟಿ ರೂಪಾಯಿಯನ್ನು ಗೆದ್ದಿದ್ದಾರೆ. ಆದರೆ ಮೇಲೆ ವಿವರಿಸಿದ ತೆರಿಗೆ ನಿಯಮಗಳಿಗೆ ಅನುಗುಣವಾಗಿ, ಈ ತೆರಿಗೆ ಪಾವತಿಸಬೇಕಾಗುತ್ತದೆ.
ಜಸ್ಕರನ್ ಸಿಂಗ್ ಒಂದು ಕೋಟಿ ರೂಪಾಯಿ ಗೆದ್ದಿದ್ದರೂ ಕೂಡಾ ಸಂಪೂರ್ಣ ಮೊತ್ತವು ಅವರಿಗೆ ಲಭ್ಯವಾಗದು. ಈ ಮೊತ್ತದಲ್ಲಿ ತೆರಿಗೆಯನ್ನು ಜಸ್ಕರನ್ ಸಿಂಗ್ ಪಾವತಿ ಮಾಡಬೇಕಾಗುತ್ತದೆ. ಒಂದು ಕೋಟಿ ರೂಪಾಯಿಯಲ್ಲಿ ಶೇಕಡ 30ರಷ್ಟು ತೆರಿಗೆ ಎಂದರೆ ಕನಿಷ್ಠ 30 ಲಕ್ಷ ರೂಪಾಯಿಯಷ್ಟು ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಸೆಸ್ ಕಡಿತ ಮಾಡಿದ ಬಳಿಕ ಉಳಿದ ಮೊತ್ತ ಜಸ್ಕರನ್ ಸಿಂಗ್ಗೆ ಸೇರಲಿದೆ.
ಜಸ್ಕರನ್ ಸಿಂಗ್ ಬಗ್ಗೆ ತಿಳಿಯಿರಿ
ಪಂಜಾಬ್ನ ಖಲ್ರಾ ಎಂಬ ಹಳ್ಳಿಯ 21 ವರ್ಷದ ಜಸ್ಕರನ್ ಸಿಂಗ್ ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿಯಾಗಲು ಬಯಸುತ್ತಾರೆ. ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ 17ನೇ ಸೀಸನ್ನಲ್ಲಿ ಜಸ್ಕರನ್ ಸಿಂಗ್ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿರೂಪಕ ಅಮಿತಾಭ್ ಬಚ್ಚನ್ ಮತ್ತು ಪ್ರೇಕ್ಷಕರ ಗಮನವನ್ನು ಜಸ್ಕರನ್ ಸಿಂಗ್ ಸೆಳೆದಿದ್ದಾರೆ.
ದುರದೃಷ್ಟವಶಾತ್, ಜಸ್ಕರನ್ ಸಿಂಗ್ 7 ಕೋಟಿ ರೂಪಾಯಿಯ ಪ್ರಶ್ನೆಯಲ್ಲಿ ಸೋತಿದ್ದಾರೆ. "ಪದ್ಮ ಪುರಾಣದ ಪ್ರಕಾರ, ಜಿಂಕೆಯ ಶಾಪದಿಂದ ನೂರು ವರ್ಷಗಳ ಕಾಲ ಯಾವ ರಾಜನು ಹುಲಿಯಾಗಿ ಬದುಕಬೇಕಾಯಿತು?" ಎಂದು ಆಯ್ಕೆಯ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಕ್ಷೇಮಧೂರ್ತಿ, ಧರ್ಮದತ್ತ, ಮಿತಧ್ವಜ ಮತ್ತು ಪ್ರಭಂಜನ ಎಂಬ ಆಯ್ಕೆಯನ್ನು ನೀಡಲಾಗಿದೆ. ಈ ಪ್ರಶ್ನೆಗೆ ಜಸ್ಕರನ್, "ಸರ್, ನಾನು ಈ ಬಗ್ಗೆ ಈ ಹಿಂದೆ ಕೇಳಿಲ್ಲ." ಎಂದು ಉತ್ತರಿಸಿದ್ದು, ಆಟದಿಂದ ನಿರ್ಗಮಿಸುವ ನಿರ್ಧಾರವನ್ನು ಮಾಡಿದರು.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!



Click it and Unblock the Notifications