ಕೌನ್ ಬನೇಗಾ ಕರೋಡ್ಪತಿ ಭಾರತದ ಅಚ್ಚುಮೆಚ್ಚಿನ ರಸಪ್ರಶ್ನೆ ಕಾರ್ಯಕ್ರಮ ಬುದ್ಧಿವಂತಿಕೆ ಮತ್ತು ಅದೃಷ್ಟ ಎರಡರ ಆಕರ್ಷಕ ಮಿಶ್ರಣವಾಗಿದೆ. ಬೇರೆ ಬೇರೆ ಹಿನ್ನೆಲೆಯಿಂದ ಬಂದ ಸ್ಪರ್ಧಿಗಳು ಕಾರ್ಯಕ್ರಮದ ವೇದಿಕೆಗೆ ಸೇರುತ್ತಾರೆ. ಈ ಕ್ವಿಜ್ ಕಾರ್ಯಕ್ರಮದಲ್ಲಿ ನೀವು ಆಟವಾಡಿ ಶ್ರೀಮಂತರಾಗಬಹುದು. ಆದರೆ ಆದಾಯ ತೆರಿಗೆ ಕಾನೂನಿನ ಪ್ರಕಾರ, ಗೆಲುವಿನ ಮೊತ್ತಕ್ಕೂ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಈ ಕಾನೂನು ಚೌಕಟ್ಟಿನ ಅಡಿಯಲ್ಲಿ, ವಿಜೇತರು ತಮ್ಮ ಬಹುಮಾನದ ಹಣದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಒಟ್ಟು ಬಹುಮಾನ ಮೊತ್ತದ ಮೇಲೆ ಸರಿಸುಮಾರು ಶೇಕಡ 30ರಷ್ಟು ತೆರಿಗೆಯನ್ನು ವಿಧಿಸುತ್ತದೆ ಎಂದು ವರದಿ ಹೇಳುತ್ತದೆ. ತೆರಿಗೆಯ ಮೇಲೆ ಹೆಚ್ಚುವರಿ ಶೇಕಡ 4ರಷ್ಟು ಸೆಸ್ ಅನ್ನು ಕೂಡಾ ಪಾವತಿ ಮಾಡಬೇಕಾಗುತ್ತದೆ.

ಒಂದು ಕೋಟಿ ರೂಪಾಯಿಯಲ್ಲಿ ಎಷ್ಟು ತೆರಿಗೆ?
ಕಾರ್ಯಕ್ರಮದ ಹದಿನೈದನೇ ಸೀಸನ್ನಲ್ಲಿ ಜಸ್ಕರನ್ ಸಿಂಗ್ ತನ್ನ ಹೆಸರನ್ನು ಈ ಸೀಸನ್ನ ಮೊದಲ ಮಿಲಿಯನೇರ್ ಎಂದು ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜಸ್ಕರನ್ ಸಿಂಗ್ ಈ ಕಾರ್ಯಕ್ರಮದಲ್ಲಿ 1 ಕೋಟಿ ರೂಪಾಯಿಯನ್ನು ಗೆದ್ದಿದ್ದಾರೆ. ಆದರೆ ಮೇಲೆ ವಿವರಿಸಿದ ತೆರಿಗೆ ನಿಯಮಗಳಿಗೆ ಅನುಗುಣವಾಗಿ, ಈ ತೆರಿಗೆ ಪಾವತಿಸಬೇಕಾಗುತ್ತದೆ.
ಜಸ್ಕರನ್ ಸಿಂಗ್ ಒಂದು ಕೋಟಿ ರೂಪಾಯಿ ಗೆದ್ದಿದ್ದರೂ ಕೂಡಾ ಸಂಪೂರ್ಣ ಮೊತ್ತವು ಅವರಿಗೆ ಲಭ್ಯವಾಗದು. ಈ ಮೊತ್ತದಲ್ಲಿ ತೆರಿಗೆಯನ್ನು ಜಸ್ಕರನ್ ಸಿಂಗ್ ಪಾವತಿ ಮಾಡಬೇಕಾಗುತ್ತದೆ. ಒಂದು ಕೋಟಿ ರೂಪಾಯಿಯಲ್ಲಿ ಶೇಕಡ 30ರಷ್ಟು ತೆರಿಗೆ ಎಂದರೆ ಕನಿಷ್ಠ 30 ಲಕ್ಷ ರೂಪಾಯಿಯಷ್ಟು ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಸೆಸ್ ಕಡಿತ ಮಾಡಿದ ಬಳಿಕ ಉಳಿದ ಮೊತ್ತ ಜಸ್ಕರನ್ ಸಿಂಗ್ಗೆ ಸೇರಲಿದೆ.
ಜಸ್ಕರನ್ ಸಿಂಗ್ ಬಗ್ಗೆ ತಿಳಿಯಿರಿ
ಪಂಜಾಬ್ನ ಖಲ್ರಾ ಎಂಬ ಹಳ್ಳಿಯ 21 ವರ್ಷದ ಜಸ್ಕರನ್ ಸಿಂಗ್ ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿಯಾಗಲು ಬಯಸುತ್ತಾರೆ. ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ 17ನೇ ಸೀಸನ್ನಲ್ಲಿ ಜಸ್ಕರನ್ ಸಿಂಗ್ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿರೂಪಕ ಅಮಿತಾಭ್ ಬಚ್ಚನ್ ಮತ್ತು ಪ್ರೇಕ್ಷಕರ ಗಮನವನ್ನು ಜಸ್ಕರನ್ ಸಿಂಗ್ ಸೆಳೆದಿದ್ದಾರೆ.
ದುರದೃಷ್ಟವಶಾತ್, ಜಸ್ಕರನ್ ಸಿಂಗ್ 7 ಕೋಟಿ ರೂಪಾಯಿಯ ಪ್ರಶ್ನೆಯಲ್ಲಿ ಸೋತಿದ್ದಾರೆ. "ಪದ್ಮ ಪುರಾಣದ ಪ್ರಕಾರ, ಜಿಂಕೆಯ ಶಾಪದಿಂದ ನೂರು ವರ್ಷಗಳ ಕಾಲ ಯಾವ ರಾಜನು ಹುಲಿಯಾಗಿ ಬದುಕಬೇಕಾಯಿತು?" ಎಂದು ಆಯ್ಕೆಯ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಕ್ಷೇಮಧೂರ್ತಿ, ಧರ್ಮದತ್ತ, ಮಿತಧ್ವಜ ಮತ್ತು ಪ್ರಭಂಜನ ಎಂಬ ಆಯ್ಕೆಯನ್ನು ನೀಡಲಾಗಿದೆ. ಈ ಪ್ರಶ್ನೆಗೆ ಜಸ್ಕರನ್, "ಸರ್, ನಾನು ಈ ಬಗ್ಗೆ ಈ ಹಿಂದೆ ಕೇಳಿಲ್ಲ." ಎಂದು ಉತ್ತರಿಸಿದ್ದು, ಆಟದಿಂದ ನಿರ್ಗಮಿಸುವ ನಿರ್ಧಾರವನ್ನು ಮಾಡಿದರು.


Click it and Unblock the Notifications