ನಾವು ವರ್ಷದ ಕೊನೆಯಲ್ಲಿ ಆಗಲಿ ಅಥವಾ ಇತರೆ ಸೀಸನ್ ಆಗಲಿ ನಾವು ಪ್ರವಾಸ ಎಂದಾಗ ಗೋವಾ, ಪಾಲಕ್ಕಾಡ್ ಎಂಬ ಆಯ್ಕೆಗಳನ್ನು ಮಾಡುತ್ತೇವೆ. ಆದರೆ ನಮ್ಮ ಕರ್ನಾಟಕದ ಕರಾವಳಿ ಭಾಗದಲ್ಲಿಯೇ ಬೀಚ್ಗಳು, ಉತ್ತಮ ಪ್ರವಾಸಿ ತಾಣಗಳು, ದೇವಾಲಯಗಳು ಇದೆ ಎಂಬುವುದು ನಿಮಗೆ ತಿಳಿದಿದೆಯೇ?
ಉಡುಪಿ, ಮಂಗಳೂರು, ಕಾರಾವಾರ ಮೀನಿನ ಊಟಕ್ಕೆ ಮಾತ್ರವಲ್ಲ ಸುಂದರವಾದ ಸ್ಥಳಗಳಿಗೂ ಭಾರತದಲ್ಲಿ ಫೇಮಸ್ ಆಗಿದೆ. ಮಂಗಳೂರಿನ ಐಡಿಯಲ್ ಐಸ್ಕ್ರೀಮ್ನಿಂದ ಹಿಡಿದು ಕಾಪು ಬೀಚ್ನ ಸುಂದರ ದೃಶ್ಯ, ಮಚಿಲಿ ಹೊಟೇಲ್ನ ಮೀನಿನ ಸ್ವಾದ. ಅಬ್ಬಾ! ಹೇಳುವುದೇನು? ನೀವೇ ಪ್ರವಾಸ ಹೋಗಿ ನೋಡಿ.

ವೈವಿಧ್ಯಮಯ ಮಂಗಳೂರು
ಮಂಗಳೂರು ವೈವಿಧ್ಯಮಯವಾದ ಸ್ಥಳವಾಗಿದೆ. ಬೀಚ್ಗಳಿರುವ, ಬಿಸಿ ತಾಪವಿರುವ, ಹಲವಾರು ಇತಿಹಾಸಗಳಿಗೆ ಸಾಕ್ಷಿಯಾದ ಸ್ಥಳ ಇದಾಗಿದೆ. ಭಾರತದ ಅತೀ ಹಳೆಯ ದೇವಾಲಯಗಳಲ್ಲಿ ಒಂದಾಗ ಮಂಗಳಾದೇವಿ ದೇವಾಲಯ ಮಂಗಳೂರಿನಲ್ಲಿದೆ. ಮಂಗಳೂರಿನ ದಸರಾ ಎಂದರೆ ಮೈಸೂರು ದಸರಾದ ನಂತರದ ಸ್ಥಾನದಲ್ಲಿ ಬರುತ್ತದೆ. ಹಾಗೆಯೇ ಕದ್ರಿ ಮಂಜುನಾಥ ದೇವಾಲಯವು ಮಂಗಳೂರಿನಲ್ಲಿ ಪ್ರಸಿದ್ಧವಾಗಿದೆ.
ಇನ್ನು ಪಣಂಬೂರು ಬೀಚ್, ಮಂಗಳೂರು ಪೋರ್ಟ್, ಮೊದಲಾದವುಗಳಿದೆ. ಇನ್ನು ಉಡುಪಿಯಲ್ಲಿ ಹಲವಾರು ದೇವಾಲಯ, ಮಠಗಳಿದೆ. ಕಾರ್ಸ್ಟ್ರೀಟ್ ರೋಡ್ನಲ್ಲಿ ದೇವಾಲಯಗಳು ಹಲವಾರಿದೆ. ಕನಕನ ಕಿಂಡಿಯನ್ನು ನಾವು ಉಡುಪಿಯಲ್ಲಿ ನೋಡಬಹುದು, ಸೆಂಟ್ ಮೇರಿಸ್ ಐಲ್ಯಾಂಡ್ ಅನ್ನು ನೋಡಬಹುದು.
ಮುರುಡೇಶ್ವರದಲ್ಲಿ ಸ್ಕೂಬಾ ಡೈವ್ ಮಾಡಿ
ಮುರುಡೇಶ್ವರದಲ್ಲಿ ನಾವು ಸ್ಕೂಬಾ ಡೈವ್ ಕೂಡಾ ಮಾಡಬಹುದು. ಸುಂದರವಾದ ದೇವಾಲಯ ಮತ್ತು ಪ್ರಶಾಂತವಾದ ಬೀಚ್ ಮುರುಡೇಶ್ವರ ಬೀಚ್ನಲ್ಲಿದೆ. ನೀರಿನಲ್ಲಿ ಇಳಿದು ಆಡಲು ಬಯಸುವವರಿಗೆ ಉತ್ತಮ ಆಯ್ಕೆ ಇದಾಗಿದೆ. ಅತೀ ದೊಡ್ಡದಾದ ಶಿವನ ಮೂರ್ತಿಯನ್ನು ನಾವು ಮುರುಡೇಶ್ವರದಲ್ಲಿ ನೋಡಬಹುದು.
ಕರ್ನಾಟಕದ ಗೋವಾ
ನಾವು ಗೋಕರ್ಣಕ್ಕೆ ಹೋದರೆ ಅದನ್ನು ನೋಡಿದಾಗಲೇ ಕರ್ನಾಟಕದ ಗೋವಾ ಎಂದು ಅಡಿಯಿಲ್ಲದೆ ಕರೆಯಬಹುದು. ಅಂತಹ ಬೀಚ್ ಮತ್ತು ವಾತಾವರಣವನ್ನು ಗೋಕರ್ಣ ಹೊಂದಿದೆ. ಹಾಗೆಯೇ ಪ್ರವಾಸಿಗರ ತಾಣ ಇದಾಗಿದೆ. ಓಂ, ಕುಡ್ಲೆ ಮೊದಲಾದ ಬೀಚ್ಗಳು ಇಲ್ಲಿದೆ.
ನೀವು ನೋಡಲೇಬೇಕಾದ ಸ್ಥಳಗಳು
ಮಂಗಳೂರು: ಮಂಗಳೂರಿನಲ್ಲಿ ಹಲವಾರು ದೇವಾಲಯಗಳು ಮತ್ತು ಚರ್ಚ್ಗಳಿದೆ. ಮಂಗಳಾದೇವಿ ದೇವಾಲಯ, ಕದ್ರಿ ಮಂಜುನಾಥ ದೇವಾಲಯ, ಮಿಲಾಗ್ರಿಸ್ ಚರ್ಚ್, ಉಳ್ಳಾಲ ದರ್ಗಾ ಪ್ರಮುಖ ದೇಗುಲಗಳಾಗಿದೆ. ಪಣಂಬೂರು, ತಣ್ಣೀರುಬಾವಿ, ಉಳ್ಳಾಲ ಬೀಚ್, ಸುರತ್ಕಲ್ ಬೀಚ್ ಪ್ರಮುಖ ಬೀಚ್ಗಳಾಗಿದೆ. ಮಂಗಳೂರಿಗೆ ನೀವು ಹೋದರ ಪ್ರಸಿದ್ಧ ಗಡ್ಬಡ್ ಐಸ್ ಕ್ರೀಮ್ ಅನ್ನು ಮಿಸ್ ಮಾಡಲೇಬಾರದು.
ಉಡುಪಿ: ದೇವಾಲಯಗಳ ನಾಡದ ಉಡುಪಿಯು ಒಂದು ಸಾಂಸ್ಕೃತಿಕ ತಾಣವಾಗಿದೆ. ನೀವು ಕೃಷ್ಣನ ದೇಗುಲ ಸೇರಿದಂತೆ ಚಂದ್ರಮೌಳೇಶ್ವರ ಮತ್ತು ಅನಂತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಐವತ್ತು ವರ್ಷ ಹಳೆಯ ಮಿತ್ರಾ ಸಮಾಜದಲ್ಲಿ ನೀವು ಉಡುಪಿಯ ಊಟ ಸವಿಯಬಹುದು. ಕಾಪು ಮತ್ತು ಮಲ್ಪೆ ಬೀಚ್ ಇಲ್ಲಿನ ಫೇಮಸ್ ತಾಣಗಳು. ಹಾಗೆಯೇ ಸೆಂಟ್ ಮೇರಿಸ್ ಐಸ್ಲ್ಯಾಂಡ್ ಇಲ್ಲಿದೆ.
ಮರವಂತೆ: ಕಂಚುಗೋಡಿನ ಬೀಚ್ ಹಾಗೂ ಮೀನುಗಾರಿಕೆ ಪ್ರದೇಶವೇ ಮರವಂತೆ ಆಗಿದೆ. ಕುಂದಾಪುರದಲ್ಲಿ ಈ ಬೀಚ್ ಮಾತ್ರವಲ್ಲದೆ ಹಲವಾರು ಐತಿಹಾಸಿಕ ದೇವಾಲಯಗಳಿದೆ. ಆನೆಗುಂಡಿ ಶ್ರೀ ವಿನಾಯಕ ದೇವಾಲಯ ಮತ್ತು ಮೂಕಾಂಬಿಕ ದೇವಿ ದೇವಾಲಯವು ಇಲ್ಲಿದೆ.
ಮರುಡೇಶ್ವರ: ಮುರುಡೇಶ್ವರ ನೀವು ಭೇಟಿ ನೀಡಲೇಬೇಕಾದ ದೇವಾಲಯವಾಗಿದೆ. ಶಿನ ದೇವಾಲಯ ಇದಾಗಿದ್ದು, ಅತೀ ದೊಡ್ಡದಾದ ಶಿವ ಮೂರ್ತಿಯಿದೆ. ಹಾಗೆಯೇ ಬೀಚ್ ಕೂಡಾ ಇದೆ.
ಗೋಕರ್ಣ: ಈ ಮೇಲೆ ಹೇಳಿದಂತೆ ಕರ್ನಾಟಕದ ಗೋವಾ ಗೋಕರ್ಣವಾಗಿದೆ. ಇದು ಬೀಚ್ ಮತ್ತು ರೆಸಾರ್ಟ್ಗಳಿಗೆ ಫೇಮಸ್ ಆಗಿದೆ. ನಗರದಲ್ಲಿ ಮಹಬಲೇಶ್ವರ ದೇವಾಲಯವಿದೆ. ಮಹಾಗಣಪತಿ ದೇವಾಲಯವು ಕೂಡಾ ಇಲ್ಲಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ



Click it and Unblock the Notifications