Krushi Aranya Protsaha Yojane: ಏನಿದು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಯಾರಿಗೆ ಲಾಭ?

ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳು ಇರುವಂತೆಯೇ ಕರ್ನಾಟಕದ ರೈತರಿಗಾಗಿಯೂ ಯೋಜನೆಗಳು ಇದೆ. ಈ ಪೈಕಿ ಕರ್ನಾಟಕ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಕೂಡಾ ಒಂದಾಗಿದೆ. ಇದನ್ನು 2011 ರಲ್ಲಿ ಪ್ರಾರಂಭಿಸಲಾಗಿದೆ. ಕರ್ನಾಟಕ ಅರಣ್ಯ ಇಲಾಖೆಯು ಈ ಯೋಜನೆಯ ನಿರ್ವಹಣೆಯನ್ನು ಮಾಡುತ್ತದೆ. ಮರಗಳನ್ನು ನೆಡಲು ಮತ್ತು ಅರಣ್ಯವನ್ನು ಹೆಚ್ಚಿಸಲು ರೈತರನ್ನು ಉತ್ತೇಜಿಸುವುದು ಈ ಯೋಜನೆಯನ್ನು ಪ್ರಾರಂಭ ಮಾಡಿರುವುದರ ಹಿಂದಿನಿ ಪ್ರಮುಖ ಉದ್ದೇಶವಾಗಿದೆ.

ಕರ್ನಾಟಕ ರಾಜ್ಯದ ಎಲ್ಲಾ ರೈತರು ಕರ್ನಾಟಕ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಈ ಯೋಜನೆಯು ರೈತರಿಗೆ ಆದಾಯವನ್ನು ಹೆಚ್ಚಿಸಲು ಸಹಾಯಕವಾಗಿದೆ. ಕೇವಲ 3 ವರ್ಷಗಳ ಕಾಲ ಮರವನ್ನು ನೆಡಲು ಮತ್ತು ಪೋಷಿಸಲು ಆರ್ಥಿಕ ಸಹಾಯವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ. ಹಣ್ಣುಗಳು, ಬೀಜಗಳು, ಮೇವು, ಉರುವಲು, ಕಂಬ, ಮರ ಇತ್ಯಾದಿಗಳಂತಹ ಮರದ ಅಂತಿಮ ಉತ್ಪನ್ನದಿಂದಲೂ ರೈತರು ಹಣವನ್ನು ಗಳಿಸಬಹುದು. ನರ್ಸರಿಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ನೀಡುವ ಸಸಿಗಳನ್ನು ರೈತರೇ ಖರೀದಿಸುತ್ತಾರೆ.

ಏನಿದು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಯಾರಿಗೆ ಲಾಭ?


ಸಸಿಗಳಿಗೆ ಸಬ್ಸಿಡಿ ದರಗಳು ಈ ಕೆಳಗಿನಂತಿವೆ:-

5×8 ಮತ್ತು 6×9 ಗಾತ್ರದ ಸಸಿ: ಪ್ರತಿ ಸಸಿಗೆ ಒಂದು ರೂಪಾಯಿ
8×12 ಗಾತ್ರದ ಸಸಿ: ಪ್ರತಿ ಸಸಿಗೆ 3 ರೂಪಾಯಿ
10×16 ಮತ್ತು 14×20 ಗಾತ್ರದ ಸಸಿ: ಪ್ರತಿ ಸಸಿಗೆ 5 ರೂಪಾಯಿ

ಮೊಳಕೆ ಗಾತ್ರ ಮತ್ತು ಜಾತಿಯ ಆಧಾರದ ಮೇಲೆ ರೈತರು ಯಾವುದೇ ಗಾತ್ರವನ್ನು ಆಯ್ಕೆ ಮಾಡಬಹುದು. ರೈತರು ನೋಂದಣಿ ಮಾಡಿಕೊಳ್ಳುವಾಗ 10 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಮಳೆಗಾಲ ಆರಂಭಕ್ಕೂ ಮುನ್ನ ಅರ್ಜಿ ಸಲ್ಲಿಸುವುದು ಕಡ್ಡಾಯ. ಅಂದರೆ ಮೇ ಅಂತ್ಯದ ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಆದ್ದರಿಂದಾಗಿ ನೀವು ಇನ್ನು ನೀವು ಮುಂದಿನ ವರ್ಷದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಬ್ಬ ರೈತ ತನ್ನ ಜಮೀನಿನಲ್ಲಿ ಹೆಕ್ಟೇರಿಗೆ 400 ಅರಣ್ಯ ಮರಗಳನ್ನು ಬೆಳೆಸಬಹುದು.

ಈ ಕೆಳಗಿನ ಜಾತಿಯ ಮರಗಳನ್ನು ರೈತರು ತಮ್ಮ ಜಮೀನಿನಲ್ಲಿ ನೆಡಬಹುದು:-

ಹೆಬ್ಬೇವು
ಶ್ರೀಗಂಧ
ತೇಗ
ಸಿಲ್ವರ್ ಓಕ್

ಯೋಜನೆಯ ಅರ್ಹತೆ

* ಕರ್ನಾಟಕದ ರೈತರು
* ಜಮೀನು ಹೊಂದಿರುವ ರೈತರು

ಯೋಜನೆಯ ಪ್ರಯೋಜನ

* ಸಸಿಗೆ ಮೊದಲ ವರ್ಷದಲ್ಲಿ 35 ರೂಪಾಯಿ ಪಾವತಿಸಲಾಗುವುದು.
* ಸಸಿಗೆ ಎರಡನೇ ವರ್ಷದಲ್ಲಿ 40 ರೂಪಾಯಿ ಪಾವತಿಸಲಾಗುವುದು.
* ಸಸಿಗೆ ಮೂರನೇ ವರ್ಷದಲ್ಲಿ 50 ರೂಪಾಯಿ ಪಾವತಿಸಲಾಗುವುದು.

ಬೇಕಾದ ದಾಖಲೆಗಳು ಯಾವುದು?

* ನಿವಾಸ ಪುರಾವೆ.
* ಜಾತಿ ಪ್ರಮಾಣ ಪತ್ರ. (ಅನ್ವಯವಾದಲ್ಲಿ).
* ಆಧಾರ್ ಕಾರ್ಡ್.
* ಪಾಸ್‌ಪೋರ್ಟ್ ಗಾತ್ರದ ಫೋಟೋ.
* ಸಸಿಗಳ ವಿವರಗಳು.
* ಬ್ಯಾಂಕ್ ಖಾತೆ ವಿವರಗಳು.
* ಜಮೀನಿನ ವಿವರಗಳು/ ಜಮೀನಿನ ಪಹಣಿ.

ಯಾವೆಲ್ಲ ಸಸಿಗಳು ಈ ಯೋಜನೆಗೆ ಅರ್ಹವಲ್ಲ

* ನೀಲಗಿರಿ
* ಅಕೇಶಿಯ
* ಸಿಲ್ವರ್ ಓಕ್
* ಕ್ಯಾಸುರಿನಾ
* ಕ್ಯಾಸ್ಸಿ ಸಿಯಾಮಿಯಾ
* ಗ್ಲಿರಿಸಿಡಿಯಾ
* ಸೆಸ್ಬೇನಿಯಾ
* ಎರಿಥ್ರಿನಾ
* ರಬ್ಬರ್
* ಸುಬಾಬುಲ್
* ತೆಂಗಿನ ಕಾಯಿ
* ಅಡಿಕೆ
* ಕಿತ್ತಳೆ
* ಸಿಟ್ರಸ್ ಜಾತಿಗಳು
* ನಾಟಿ ಮಾವು

ಹೇಗೆ ಅರ್ಜಿ ಸಲ್ಲಿಸುವುದು?

ಹಂತ 1: ಕರ್ನಾಟಕ ಕೃಷಿ ಅರಣ್ಯ ಪ್ರೊತ್ಸಾಹ ಯೋಜನೆಗೆ ಅರ್ಜಿ ಸಲ್ಲಿಸಲು, ರೈತರು ತಮ್ಮ ಹತ್ತಿರದ ಅರಣ್ಯ ವ್ಯಾಪ್ತಿಯ ಕಚೇರಿಗೆ ಭೇಟಿ ನೀಡಬೇಕು.
ಹಂತ 2: ಆ ಕಛೇರಿಯಿಂದ ಉಚಿತವಾಗಿ ಅರ್ಜಿ ನಮೂನೆಯನ್ನು ಪಡೆಯಿರಿ.
ಹಂತ 3: ಅದನ್ನು ಸರಿಯಾಗಿ ಭರ್ತಿ ಮಾಡಿಕೊಳ್ಳಿ, ಅಗತ್ಯ ದಾಖಲೆಗಳನ್ನು ಅಟೆಸ್ಟ್ ಮಾಡಲಾಗುತ್ತದೆ.
ಹಂತ 4: ನೋಂದಣಿ ಶುಲ್ಕ ರೂಪಾಯಿ 10 ಅನ್ನು ನೀಡಬೇಕಾಗುತ್ತದೆ.
ಹಂತ 5: ನಂತರ ಅರಣ್ಯಾಧಿಕಾರಿಗಳು ರೈತರಿಗೆ ಗಿಡಗಳನ್ನು ವಿತರಣೆ ಮಾಡುತ್ತಾರೆ.
ಹಂತ 6: ಪ್ರತಿ ವರ್ಷ ಅರಣ್ಯ ಅಧಿಕಾರಿಗಳು ಸಸಿಗಳನ್ನು ನೆಟ್ಟ ರೈತರ ಜಮೀನಿಗೆ ಭೇಟಿ ನೀಡುತ್ತಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+