ಭಾರತದ ಶ್ರೀಮಂತ ಬಿಲಿಯನೇರ್ ಉದ್ಯಮಿಗಳ ಬಗ್ಗೆ ನಿಮಗೆ ಪರಿಚಯವಿರಬಹುದು. ಆದರೆ ಬಿಲಿಯನೇರ್ಗಳ ಸಹೋದರರ ಬಗ್ಗೆ ನಿಮಗೆ ಎಷ್ಟು ತಿಳಿದಿದೆ?. ಈ ಶ್ರೀಮಂತ ಉದ್ಯಮಿಗಳ ಸಹೋದರರು ಕೂಡಾ ಶ್ರೀಮಂತರಾಗಿದ್ದಾರೆಯೇ?.
ಮುಕೇಶ್ ಅಂಬಾನಿ ಮತ್ತು ಅವರ ಸಹೋದರ ಅನಿಲ್ ಅಂಬಾನಿಯಿಂದ ಹಿಡಿದು ಗೌತಮ್ ಅದಾನಿ ಮತ್ತು ಅವರ ಸಹೋದರ ವಿನೋದ್ ಅದಾನಿಯವರೆಗೆ, ನಾವು ಯಶಸ್ವಿಯಾದ ಬಿಲಿಯನೇರ್ ಸಹೋದರರ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ, ಮುಂದೆ ಓದಿ...

ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ
ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಭಾರತದ ಪ್ರಮುಖ ಉದ್ಯಮಿಗಳು ಆಗಿದ್ದಾರೆ. ಸಹೋದರರು ಮತ್ತು ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ದಿವಂಗತ ಧೀರೂಭಾಯಿ ಅಂಬಾನಿಯವರ ಪುತ್ರರಾಗಿದ್ದಾರೆ.
ಮುಕೇಶ್ ಅಂಬಾನಿ: ಮುಕೇಶ್ ಅಂಬಾನಿ ಇಬ್ಬರು ಸಹೋದರರಲ್ಲಿ ಹಿರಿಯರಾಗಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಮತ್ತು ಅತಿದೊಡ್ಡ ಷೇರುದಾರರಾಗಿದ್ದಾರೆ. ಜಾಗತಿಕವಾಗಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
ಅನಿಲ್ ಅಂಬಾನಿ: ಅನಿಲ್ ಅಂಬಾನಿ ಮುಕೇಶ್ ಅಂಬಾನಿಯ ಕಿರಿಯ ಸಹೋದರ ಆಗಿದ್ದಾರೆ. ಬೇರೆ ಬೇರೆ ವಲಯಗಳಲ್ಲಿ ಆಸಕ್ತಿ ಹೊಂದಿರುವ ಉದ್ಯಮಿಯಾಗಿದ್ದಾರೆ. ಆದರೆ ಪ್ರಮುಖವಾಗಿ ದೂರಸಂಪರ್ಕ, ಶಕ್ತಿ ಮತ್ತು ಹಣಕಾಸು ಸೇವೆಗಳ ಮೇಲೆ ಕೇಂದ್ರೀಕರಿಸಿದ್ದಾರೆ. ಅನಿಲ್ ಅಂಬಾನಿ ಅವರು ಪ್ರಮುಖ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಪವರ್ ಯುಟಿಲಿಟಿ ಕಂಪನಿಯಾದ ರಿಲಯನ್ಸ್ ಪವರ್ ಇತರ ಉದ್ಯಮಗಳ ಅಧ್ಯಕ್ಷರಾಗಿದ್ದರು.
ಸಹೋದರರು 2005 ರಲ್ಲಿ ಉದ್ಯಮವನ್ನು ವಿಭಜನೆ ಮಾಡಿಕೊಂಡಿದ್ದಾರೆ. ಪ್ರಮುಖ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ನ ನಿಯಂತ್ರಣವನ್ನು ಮುಕೇಶ್ ಉಳಿಸಿಕೊಂಡರೆ, ಅನಿಲ್ ಪ್ರಾಥಮಿಕವಾಗಿ ದೂರಸಂಪರ್ಕ, ವಿದ್ಯುತ್ ಮತ್ತು ಮೂಲಸೌಕರ್ಯದಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳ ನಿಯಂತ್ರಣವನ್ನು ಪಡೆದರು. ವ್ಯವಹಾರಗಳಿಗೆ ಹೆಚ್ಚಿನ ಗಮನ ತರುವ ನಿಟ್ಟಿನಲ್ಲಿ ವಿಭಜನೆ ಮಾಡಲಾಗಿದೆ.
ಗೌತಮ್ ಅದಾನಿ ಮತ್ತು ವಿನೋದ್ ಅದಾನಿ
ಗೌತಮ್ ಅದಾನಿ ಮತ್ತು ವಿನೋದ್ ಅದಾನಿ ಸಹೋದರರು ಅದಾನಿ ಗ್ರೂಪ್ನೊಂದಿಗೆ ಸಂಬಂಧ ಹೊಂದಿದ್ದಾರೆ. ಇವರ ಉದ್ಯಮವು ಮೂಲಸೌಕರ್ಯ, ಲಾಜಿಸ್ಟಿಕ್ಸ್, ವಿದ್ಯುತ್ ಉತ್ಪಾದನೆ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ವಿಸ್ತರಣೆಗೊಂಡಿದೆ.
ಗೌತಮ್ ಅದಾನಿ: ಗೌತಮ್ ಅದಾನಿ ಅದಾನಿ ಸಮೂಹದ ಸಂಸ್ಥಾಪಕರು ಮತ್ತು ಅಧ್ಯಕ್ಷರು ಆಗಿದ್ದಾರೆ. 1980 ರ ದಶಕದ ಉತ್ತರಾರ್ಧದಲ್ಲಿ ಸಣ್ಣ ವ್ಯಾಪಾರ ಸಂಸ್ಥೆಯೊಂದಿಗೆ ವ್ಯವಹಾರವನ್ನು ಪ್ರಾರಂಭಿಸಿದರು. ಬಳಿಕ ಭಾರತದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿ ಅದಾನಿ ಸಂಸ್ಥೆ ಬೆಳೆದಿದೆ. ಅದಾನಿ ಸಮೂಹವು ಬಂದರುಗಳು, ಲಾಜಿಸ್ಟಿಕ್ಸ್, ವಿದ್ಯುತ್ ಉತ್ಪಾದನೆ, ಮೊದಲ ಕ್ಷೇತ್ರಗಳಲ್ಲಿ ವಿಸ್ತರಿಸಿದೆ.
ವಿನೋದ್ ಅದಾನಿ: ವಿನೋದ್ ಅದಾನಿ ಗೌತಮ್ ಅದಾನಿಯ ಹಿರಿಯ ಸಹೋದರ ಆಗಿದ್ದಾರೆ. ಕುಟುಂಬದ ವ್ಯವಹಾರದೊಂದಿಗೆ ಸಂಬಂಧ ಹೊಂದಿದ್ದಾರೆ. ಅದಾನಿ ಗ್ರೂಪ್ನ ಕಾರ್ಯಾಚರಣೆಗಳಲ್ಲಿ ತೊಡಗಿದ್ದಾರೆ. ಅದಾನಿ ಗ್ರೂಪ್ನ ಪ್ರಮುಖ ಮುಖವಾಗಿ ಗೌತಮ್ ಅದಾನಿ ಕಾಣಿಸಿಕೊಂಡರೆ, ವಿನೋದ್ ಅದಾನಿ ಕುಟುಂಬದ ವ್ಯಾಪಾರ ಉದ್ಯಮಗಳನ್ನು ಬೆಂಬಲಿಸುವಲ್ಲಿ ತೆರೆಮರೆಯ ಪಾತ್ರವನ್ನು ವಹಿಸಿದ್ದಾರೆ.
ಶಿವ ನಾಡರ್ ಮತ್ತು ಎಸ್ಎನ್ ಬಾಲಕೃಷ್ಣನ್
ಎಸ್ ಎನ್ ಬಾಲಕೃಷ್ಣನ್ ಅವರು ಶಿವ ನಾಡರ್ ವಿಶ್ವವಿದ್ಯಾನಿಲಯದ ಎರಡನೇ ಕುಲಪತಿಯಾಗಿದ್ದರು. ವಿಶ್ವವಿದ್ಯಾನಿಲಯದ ಅಪೆಕ್ಸ್ ಶಾಸನಬದ್ಧ ಸಂಸ್ಥೆಯಾದ ಎಕ್ಸಿಕ್ಯೂಟಿವ್ ಕೌನ್ಸಿಲ್ನ ಅಧ್ಯಕ್ಷರಾಗಿದ್ದರು. ಅವರ ಸಹೋದರ ಶಿವ ನಾಡಾರ್ ಪ್ರಮುಖ ಐಟಿ ಸೇವಾ ಕಂಪನಿಯಾದ ಎಚ್ಸಿಎಲ್ ಟೆಕ್ನಾಲಜೀಸ್ ಅನ್ನು ಸ್ಥಾಪಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ.
ಮಿತ್ತಲ್ ಮತ್ತು ಪ್ರಮೋದ್ ಮಿತ್ತಲ್
ಲಕ್ಷ್ಮಿ ಮಿತ್ತಲ್ ಮತ್ತು ಪ್ರಮೋದ್ ಮಿತ್ತಲ್ ಸಹೋದರರು, ಇಬ್ಬರೂ ಜಾಗತಿಕ ಉಕ್ಕು ಉದ್ಯಮವನ್ನು ನಡೆಸಿಕೊಳ್ಳುತ್ತಾ ಬಂದಿದ್ದಾರೆ.
ಲಕ್ಷ್ಮಿ ಮಿತ್ತಲ್: ಲಕ್ಷ್ಮಿ ಮಿತ್ತಲ್ ಒಬ್ಬ ಹೆಸರಾಂತ ಭಾರತೀಯ ಬಿಲಿಯನೇರ್ ಮತ್ತು ಕೈಗಾರಿಕೋದ್ಯಮಿ ಆಗಿದ್ದಾರೆ. ಸಾಮಾನ್ಯವಾಗಿ "ಸ್ಟೀಲ್ ಕಿಂಗ್" ಎಂದು ಅವರನ್ನು ಕರೆಯಲಾಗುತ್ತದೆ. ವಿಶ್ವದ ಅತಿದೊಡ್ಡ ಉಕ್ಕು ತಯಾರಿಕೆ ಕಂಪನಿಯಾದ ಆರ್ಸೆಲರ್ ಮಿತ್ತಲ್ನ ಅಧ್ಯಕ್ಷ ಮತ್ತು ಸಿಇಒ ಆಗಿದ್ದಾರೆ.
ಜೂನ್ 15, 1950 ರಂದು ಭಾರತದ ರಾಜಸ್ಥಾನದಲ್ಲಿ ಜನಿಸಿದ ಲಕ್ಷ್ಮಿ ಮಿತ್ತಲ್ ಅವರು ಉಕ್ಕಿನ ಉದ್ಯಮದಲ್ಲಿ ದೊಡ್ಡ ತಮ್ಮ ಸಾಮ್ರಾಜ್ಯವನ್ನು ನಿರ್ಮಿಸಿದರು. ಆರ್ಸೆಲರ್ ಮಿತ್ತಲ್ 60 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಪ್ರಮೋದ್ ಮಿತ್ತಲ್: ಪ್ರಮೋದ್ ಮಿತ್ತಲ್ ಲಕ್ಷ್ಮಿ ಮಿತ್ತಲ್ ಅವರ ಕಿರಿಯ ಸಹೋದರ ಆಗಿದ್ದಾರೆ. ಲಕ್ಷ್ಮಿಯಂತೆ, ಪ್ರಮೋದ್ ಸ್ಟೀಲ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರ ಉದ್ಯಮಗಳು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿವೆ. ಪ್ರಮೋದ್ ಮಿತ್ತಲ್ ಉಕ್ಕಿನ ಉತ್ಪಾದನೆಯಲ್ಲಿ ತೊಡಗಿರುವ ಗ್ಲೋಬಲ್ ಸ್ಟೀಲ್ ಹೋಲ್ಡಿಂಗ್ಸ್ ಲಿಮಿಟೆಡ್ನ ಮಾಜಿ ಅಧ್ಯಕ್ಷರೂ ಆಗಿದ್ದಾರೆ.
ಕುಮಾರ್ ಮಂಗಳಂ ಬಿರ್ಲಾ ಮತ್ತು ಯಶ್ ಬಿರ್ಲಾ
ಯಶ್ ಬಿರ್ಲಾ ಭಾರತದ ಪ್ರಮುಖ ಬಿರ್ಲಾ ಕುಟುಂಬದ ಸದಸ್ಯರಾಗಿದ್ದಾರೆ. ಅವರು ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ಆದಿತ್ಯ ಬಿರ್ಲಾ ಗ್ರೂಪ್ನ ಅಧ್ಯಕ್ಷರಾಗಿರುವ ಕುಮಾರ್ ಮಂಗಲಂ ಬಿರ್ಲಾ ಅವರ ಕಿರಿಯ ಸಹೋದರರಾಗಿದ್ದಾರೆ. ಕುಮಾರ್ ಮಂಗಳಂ ಬಿರ್ಲಾ ಅವರು ತಮ್ಮ ತಂದೆ ಆದಿತ್ಯ ವಿಕ್ರಮ್ ಬಿರ್ಲಾ ಅವರ ಮರಣದ ನಂತರ ಆದಿತ್ಯ ಬಿರ್ಲಾ ಗ್ರೂಪ್ನ ನಾಯಕತ್ವವನ್ನು ವಹಿಸಿಕೊಂಡರು.
ಯಶ್ ಬಿರ್ಲಾ ಅವರು ವಿವಿಧ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜವಳಿ, ರಾಸಾಯನಿಕಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಯಶ್ ಬಿರ್ಲಾ ಅವರ ವ್ಯಾಪಾರ ಉದ್ಯಮಗಳು ಹಣಕಾಸಿನ ತೊಂದರೆಗಳು ಮತ್ತು ಕಾನೂನು ಸಮಸ್ಯೆಗಳು ಸೇರಿದಂತೆ ಸವಾಲುಗಳನ್ನು ಎದುರಿಸುತ್ತಿವೆ. ಬಿರ್ಲಾ ಕುಟುಂಬವು ಭಾರತೀಯ ಉದ್ಯಮ ಮತ್ತು ಲೋಕೋಪಕಾರಕ್ಕೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications