ದೇಶದ ಅತೀ ದೊಡ್ಡ ಉದ್ಯಮಿ ಮತ್ತು ಅದಾನಿ ಗ್ರೂಪ್ನ ಚೇರ್ಮನ್ ಆದ ಗೌತಮ್ ಅದಾನಿಯ ಕಿರಿಯ ಪುತ್ರ ಜೀತ್ ಅದಾನಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಡೈಮಂಡ್ ಉದ್ಯಮ ನಡೆಸುವ ಜೈಮಿನ್ ಶಾ ಪುತ್ರಿಯಾದ ದಿವಾ ಜೈಮಿನ್ ಶಾ ಜೊತೆ ಗೌತಮ್ ಅದಾನಿ ಪುತ್ರ ಜೀತ್ ಅದಾನಿ ಮಾರ್ಚ್ 12ರಂದು ಅಹಮದಾಬಾದ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ನಿಶ್ಚಿತಾರ್ಥವನ್ನು ಸರಳವಾಗಿ ನಡೆಸಲಾಗಿದ್ದು, ಸಮೀಪದ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ. ಗೌತಮ್ ಅದಾನಿಯ ಕಿರಿಯ ಸೊಸೆಯಾಗಲಿರುವ ದಿವಾ ಬಗ್ಗೆ ಅಧಿಕ ಮಾಹಿತಿ ಲಭ್ಯವಾಗಿಲ್ಲ. ಜೀತ್ ಅದಾನಿ ಪ್ರಸ್ತುತ ಅದಾನಿ ಗ್ರೂಪ್ನ ಹಣಕಾಸು ಘಟಕದ ಉಪಾಧ್ಯಕ್ಷರು ಆಗಿದ್ದಾರೆ. ಇನ್ನು ಜೀತ್ ಅದಾನಿಯು ಗೌತಮ್ ಅದಾನಿಯ ಹಿರಿಯ ಪುತ್ರ ಕರಣ್ ಅದಾನಿಗಿಂತ 10 ವರ್ಷ ಸಣ್ಣವರಾಗಿದ್ದಾರೆ.

ಜೀತ್ ಅದಾನಿ ಬಗ್ಗೆ ಅಧಿಕ ಮಾಹಿತಿ ತಿಳಿಯಿರಿ
ಸಾಮಾನ್ಯವಾಗಿ ಜೀತ್ ಅದಾನಿ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಅಧಿಕವಾಗಿ ಆಕ್ಟಿವ್ ಆಗಿಲ್ಲ, ಟ್ವಿಟ್ಟರ್ನಲ್ಲೂ ಸಕ್ರಿಯರಾಗಿಲ್ಲ. ಆದರೆ ತನ್ನ ಟೈಮ್ಲೈನ್ನಲ್ಲಿ ತಾನು ವಿಮಾನಯಾನ ಮಾಡುವ ಚಿತ್ರದೊಂದಿಗೆ ಜೀತ್ ಅದಾನಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ಜೀತ್ ಅದಾನಿ ಉತ್ಸಾಹಿ ಪೈಲೆಟ್ ಎಂಬುವುದು ತಿಳಿದುಬರುತ್ತದೆ.
ಅದಾನಿ ಗ್ರೂಪ್ನ ವೆಬ್ಸೈಟ್ ಪ್ರಕಾರ ಜೀತ್ ಅದಾನಿ ತನ್ನ ವಿದ್ಯಾಭ್ಯಾಸವನ್ನು ಯೂನಿವರ್ಸಿಟಿ ಆಫ್ ಪೆನ್ನಿಸಿಲ್ವಾನಿಯಾ ಆಫ್ ಇಂಜಿಯರಿಂಗ್ ಆಂಡ್ ಅಪ್ಲೈಡ್ ಸೈನ್ಸ್ನಲ್ಲಿ ನಿರ್ವಹಣೆ ಮಾಡಿದ್ದಾರೆ. ತನ್ನ ವಿದ್ಯಾಭ್ಯಾಸದ ಬಳಿಕ ಜೀತ್ ಅದಾನಿ 2019ರಲ್ಲಿ ಅದಾನಿ ಗ್ರೂಪ್ನಲ್ಲಿ ಕಾರ್ಯ ಆರಂಭ ಮಾಡಿದ್ದಾರೆ. ಪ್ರಸ್ತುತ ಅದಾನಿ ಗ್ರೂಪ್ನ ಹಣಕಾಸು ಘಟಕದ ಉಪಾಧ್ಯಕ್ಷರಾಗಿದ್ದಾರೆ.
ಜೀತ್ ಅದಾನಿ ತನ್ನ ವೃತ್ತಿ ಜೀವನವನ್ನು ಅದಾನಿ ಗ್ರೂಪ್ ಸಿಎಫ್ಒ ಕಚೇರಿಯಲ್ಲಿ ಆರಂಭಿಸಿದ್ದಾರೆ. ಇಲ್ಲಿ ಹಣಕಾಸು ತಂತ್ರ, ಬಂಡವಾಳ ಮಾರುಕಟ್ಟೆ ಮತ್ತು ಅಪಾಯ & ಪಾಲಿಸಿ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು. ಹಾಗೆಯೇ ಅದಾನಿ ಏರ್ಪೋರ್ಟ್ ವಹಿವಾಟನ್ನು ಕೂಡಾ ನಿರ್ವಹಣೆ ಮಾಡಿದ್ದಾರೆ. ಹಾಗೆಯೇ ಅದಾನಿ ಡಿಜಿಟಲ್ ಲ್ಯಾಬ್ ಕೂಡಾ ನಿರ್ವಹಿಸಿದ್ದಾರೆ.
ಇನ್ನು ಗೌತಮ್ ಅದಾನಿಗೆ ಇಬ್ಬರು ಪುತ್ರರಿದ್ದು ಹಿರಿಯ ಮಗ ಕರಣ್ ಎರಡನೇ ಮಗ ಜೀತ್ ಆಗಿದ್ದಾರೆ. ಕರಣ್ ಅದಾನಿ ಅದಾನಿ ಪೋರ್ಟ್ಸ್ ಆಂಡ್ ಎಸ್ಇಝೆಡ್ ಲಿಮಿಟೆಡ್ನ ಸಿಇಒ ಆಗಿದ್ದು ಪರಿಧಿ ಶ್ರಾಫ್ರನ್ನು ವಿವಾಹವಾಗಿದ್ದಾರೆ. ಪರಿಧಿ ಶ್ರಾಫ್, ಸಿರಿಲ್ ಅಮರ್ಚಂದ್ ಮಂಗಳ್ದಾಸ್ ಸಂಸ್ಥೆಯ ಪಾಲುದಾರರಾದ ಸಿರಿಲ್ ಶ್ರಾಫ್ರ ಪುತ್ರಿಯಾಗಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications