ಭಾರತದಲ್ಲಿ ಸೆಲೆಬ್ರೆಟಿಗಳನ್ನು ಅತಿಯಾಗಿ ಪ್ರೀತಿಸುವವರು, ಪೂಜಿಸುವವರು ಅದೆಷ್ಟೋ ಜನರು ಇದ್ದಾರೆ. ಸೆಲೆಬ್ರೆಟಿಗಳು ದೇವರು ಎಂದು ಗುಡಿ ಕಟ್ಟಿಸಿ ದಿನ ನಿತ್ಯ ಪೂಜೆ, ಪುರಸ್ಕಾರ ಮಾಡುವವರು ಕೂಡಾ ಇದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರಿಗೆ ಗೌರವವನ್ನು ನೀಡುತ್ತಾರೆ.
ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಕ್ರಿಕೆಟಿಗನಾಗಿ ತನ್ನ 15 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಕ್ಕಾಗಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಗೆ ಉಡುಗೊರೆಯಾಗಿ 2023 ರಲ್ಲಿ ಗೌರವವನ್ನು ವಿಶೇಷ ಗೌರವವನ್ನು ನೀಡಲಾಗಿದೆ. ಗುಜರಾತ್ನ ಪ್ರಮುಖ ವಜ್ರ ತಜ್ಞ ಮತ್ತು ಉದ್ಯಮಿ ಉತ್ಪಲ್ ಮಿಸ್ತ್ರಿ ಸಿದ್ಧಪಡಿಸಿದ 1.04-ಕ್ಯಾರೆಟ್ ವಜ್ರ-ಹೊದಿಕೆಯ ಬ್ಯಾಟ್ ವಿಶೇಷ ಕೊಡುಗೆಯಾಗಿದೆ.

ಸೂರತ್ ಮೂಲದ ಉದ್ಯಮಿ ಮತ್ತು ಕೊಹ್ಲಿ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ವಿಶೇಷ ಉಡುಗೊರೆ ನೀಡುವ ಸಲುವಾಗಿ ವಿಶೇಷ ವಜ್ರದ ಬ್ಯಾಟ್ ಅನ್ನು ಆರ್ಡರ್ ಮಾಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಲ್ಯಾಬ್ ನಿರ್ಮಿತ ವಜ್ರಗಳಲ್ಲದ ನೈಸರ್ಗಿಕ ವಜ್ರಗಳನ್ನು ಹೊಂದಿದ್ದ ಬ್ಯಾಟ್ನ ಬೆಲೆ 10 ಲಕ್ಷ ರೂಪಾಯಿಗೂ ಅಧಿಕವಾಗಿದೆ.
ಬ್ಯಾಟ್ ಆರ್ಡರ್ ಮಾಡಿದ್ದ ಸೂರತ್ ಉದ್ಯಮಿ ಕೊಹ್ಲಿಗೆ ಲ್ಯಾಬ್ನಲ್ಲಿ ಬೆಳೆದ ಡೈಮಂಡ್ ಬ್ಯಾಟ್ ಬೇಡ ಬದಲಿಗೆ ನೈಸರ್ಗಿಕ ವಜ್ರದ ಬ್ಯಾಟ್ ಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಪ್ರಮುಖ ವಜ್ರ ತಂತ್ರಜ್ಞಾನ ತಜ್ಞ ಉತ್ಪಲ್ ಮಿಸ್ತ್ರಿ ಹೇಳಿದ್ದಾರೆ. ವಿರಾಟ್ ಕೊಹ್ಲಿಗೆ ಈ ವಿಶೇಷ ಡೈಮಂಡ್ ಬ್ಯಾಟ್ ಲಭ್ಯವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಉತ್ಪಲ್ ಮಿಸ್ತ್ರಿ ಯಾರು?
ಉತ್ಪಲ್ ಮಿಸ್ತ್ರಿ ಸ್ವತಃ ಉದ್ಯಮಿಯಾಗಿದ್ದು, ಅವರು ದೇಶದ ವಜ್ರ ತಂತ್ರಜ್ಞಾನದ ಪ್ರಮುಖ ತಜ್ಞರಲ್ಲಿ ಒಬ್ಬರು. ಅವರು ಲೆಕ್ಸಸ್ ಸಾಫ್ಟ್ಮ್ಯಾಕ್ ಕಂಪನಿಯ ನಿರ್ದೇಶಕರು. ಅವರ ಸಹೋದರರಾದ ಜನಕ್ ಮಿಸ್ತ್ರಿ ಮತ್ತು ಕಮಲ್ ಮಿಸ್ತ್ರಿ ಅವರು ಕಂಪನಿಯ ಸಿಇಒ ಮತ್ತು ಸಿಒಒ ಆಗಿದ್ದಾರೆ.
ಉತ್ಪಲ್ ಅವರು 22 ವರ್ಷ ವಯಸ್ಸಿನವರಾಗಿದ್ದಾಗ ವಜ್ರ ಉದ್ಯಮಕ್ಕೆ ಸೇರಿದರು. 1995 ರಲ್ಲಿ ಅವರು ಒರಟು ವಜ್ರಗಳಿಗೆ ಪ್ರೋಗ್ರಾಮ್ ಮಾಡಲಾದ ಆಕಾರವನ್ನು ನೀಡುವ ಯಂತ್ರವಾದ ಮೆಕ್ಸಿ ಕಟ್ ಅನ್ನು ವಿನ್ಯಾಸಗೊಳಿಸಿದರು. ರ್ದಾರ್ ವಲ್ಲಭಭಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SVNIT) ಯಿಂದ ಇಂಜಿನಿಯರ್ ಮತ್ತು ಚಿನ್ನದ ಪದಕ ವಿಜೇತರಾಗಿದ್ದಾರೆ. ಐಐಎಂ ಅಹಮದಾಬಾದ್ನಿಂದ ಎಂಡಿಪಿ ಮತ್ತು ಎಸ್ವಿಎನ್ಐಟಿಯಿಂದ ಎಂಟೆಕ್ ಅನ್ನು ಸಹ ಹೊಂದಿದ್ದಾರೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications