ನಮ್ಮ ದೇಶದಲ್ಲಿ ಐಐಟಿಗಳು ನೂರಾರು ಉದ್ಯಮಿಗಳನ್ನು ಮತ್ತು ನಾಯಕರನ್ನು ಉತ್ಪಾದನೆ ಮಾಡಿದೆ. ಇಂತಹ ಐಐಟಿಯನ್ನರು ಉದ್ಯಮಿಗಳಾಗಿ, ನಾಯಕರಾಗಿ ಇಂದು ನೂರಾರು ಬಿಲಿಯನ್ ಡಾಲರ್ ಮೌಲ್ಯದ ಕಂಪನಿಗಳನ್ನು ಮತ್ತು ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ಭಾರತದ ಐಐಟಿಯನ್ನರು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ.
ಐಐಟಿಯಿಂದ ಹೊರಬಂದ ನಂತರ ಅದರ ಘನತೆ ಹೆಚ್ಚಿಸಿದವರಲ್ಲಿ ಒಬ್ಬರಾಗಿರುವ, ಉದ್ಯಮಿ ನಂದನ್ ಮೋಹನರಾವ್ ನಿಲೇಕಣಿ ಸ್ಪೂರ್ತಿದಾಯಕ ಜೀವನಗಾಥೆ ಹೊಂದಿದ್ದಾರೆ. ಐಐಟಿಯನ್ನರಾಗಿರುವ ನಂದನ್ ಮೋಹನರಾವ್ ನಿಲೇಕಣಿ ಅವರು ರೂಪಾಯಿ 5.97 ಟ್ರಿಲಿಯನ್ ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತದ ಉನ್ನತ ಟೆಕ್ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ನ ಸಹ- ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದಾರೆ.

ನಂದನ್ ಮೋಹನರಾವ್ ನಿಲೇಕಣಿ ವೃತ್ತಿ ಜೀವನ
ಬೆಂಗಳೂರಿನಲ್ಲಿ ಜನಿಸಿದ ನಂದನ್ ಅವರು ಧಾರವಾಡದಲ್ಲಿ ಶಾಲಾ ಶಿಕ್ಷಣ ಪಡೆದರು. ಐಐಟಿ ಬಾಂಬೆ ಹಳೆಯ ವಿದ್ಯಾರ್ಥಿಯಾಗಿರುವ ಇವರ ಯಶಸ್ವಿನ ಪಯಣ 1978 ರಲ್ಲಿ ಮುಂಬೈನ "ಪಟ್ನಿ ಕಂಪ್ಯೂಟರ್ ಸಿಸ್ಟಮ್ಸ್" ಮೂಲಕ ಪ್ರಾರಂಭವಾಯಿತು. ಇದೇ ಐಟಿ ಸಂಸ್ಥೆಯಲ್ಲಿ ಎನ್.ಆರ್. ನಾರಾಯಣ ಮೂರ್ತಿ ಅವರ ಭೇಟಿಯಾಯಿತು. ಸುಮಾರು 3 ವರ್ಷಗಳ ಕಾಲ ಪಟ್ನಿ ಸಂಸ್ಥೆಯಲ್ಲಿ ಕೆಲಸ ಮಾಡಿದ ಬಳಿಕ ನಿಲೇಕಣಿ, ಮೂರ್ತಿ ಮತ್ತು ಇತರ ಐವರು ಪಟ್ನಿಯನ್ನು ತೊರೆದರು. ಆ ಬಳಿಕ ಹಿಂತಿರುಗಿ ನೋಡದ ಅವರು ಇನ್ಫೋಸಿಸ್ನ ಹುಟ್ಟು ಹಾಕಿದರು.
ನಿಲೇಕಣಿ ಅವರು ಮಾರ್ಚ್ 2002 ರಲ್ಲಿ ಇನ್ಫೋಸಿಸ್ ಸಿಇಒ ಆಗಿ ನೇಮಕಗೊಳ್ಳುವ ಮೊದಲು ಇನ್ಫೋಸಿಸ್ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್, ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. 2007 ರ ಏಪ್ರಿಲ್ ರವರೆಗೆ ಕಂಪನಿಯನ್ನು ಮುನ್ನಡೆಸಿದರು. ಸಿಇಒ ಆಗಿದ್ದ ಅವರ ಅಧಿಕಾರಾವಧಿಯಲ್ಲಿ ಇನ್ಫೋಸಿಸ್ ಕಂಪನಿಯ ಟಾಪ್ಲೈನ್ ಆರು ಪಟ್ಟು ಬೆಳೆದು 3 ಬಿಲಿಯನ್ ಡಾಲರ್ಗೆ ತಲುಪಿತು. ಇದೇ ಅವಧಿಯಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಅವರಿಗೆ ಒಲಿದುಬಂತು.
2009 ರಲ್ಲಿ, ನಿಲೇಕಣಿ ಅವರನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಆಹ್ವಾನಿಸಿದರು. ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನಕ್ಕೆ ಸಮನಾದ ಯುಐಡಿಎಐನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ಆಧಾರ್ ಕಾರ್ಡ್ ಅನ್ನು ಜಗತ್ತಿಗೆ ಪರಿಚಯಿಸಿದರು. ಪ್ರಸ್ತುತ ಭಾರತದ 1 ಬಿಲಿಯನ್ಗಿಂತಲೂ ಹೆಚ್ಚು ನಾಗರಿಕರು ತಮ್ಮ ಪ್ರಾಥಮಿಕ ಗುರುತಿನ ಪ್ರಮಾಣಪತ್ರವಾಗಿ ಆಧಾರ್ ನ್ನು ಅವಲಂಬಿಸಿದ್ದಾರೆ.
ನಿಲೇಕಣಿ ಅವರು ಶಾಪ್ಎಕ್ಸ್, ಜಗ್ಗರ್ನಾಟ್, ಮಬಲ್ ನೆಟ್ವರ್ಕ್ಗಳು, ಫೋರ್ಟಿಗೋ, ಪಿ2ಎಸ್ಎಂಇ, ರೈಲ್ಯಾತ್ರಿ, Tracxn ಸೇರಿದಂತೆ 12 ಸ್ಟಾರ್ಟ್- ಅಪ್ಗಳಲ್ಲಿ ಸರಣಿ ಹೂಡಿಕೆದಾರರಾಗಿದ್ದಾರೆ. ನಂದನ್ ಮತ್ತು ಅವರ ಪತ್ನಿ ರೋಹಿಣಿ ಅವರು ತಮ್ಮ ಅರ್ಧದಷ್ಟು ಸಂಪತ್ತನ್ನು ಬಿಲ್ ಗೇಟ್ಸ್ ಆಯೋಜಿಸಿರುವ ಗಿವಿಂಗ್ ಪ್ಲೆಡ್ಜ್ಗೆ ದಾನ ಮಾಡಲು ನಿರ್ಧರಿಸಿದ್ದಾರೆ.
More From GoodReturns

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Silver Rate Today: ಭಾರತದಲ್ಲಿ ಪಾತಾಳಕ್ಕಿಳಿದ ಬೆಳ್ಳಿ; ಎಷ್ಟಿದೆ ಗೊತ್ತಾ ಇಂದಿನ ದರ?

LPG Crisis: ಭಯಪಡಬೇಡಿ, ಅವಸರದಲ್ಲಿ ಬುಕ್ ಮಾಡ್ಬೇಡಿ; ಗೃಹಬಳಕೆಯ ಎಲ್ಪಿಜಿ ಬಳಕೆದಾರರಿಗೆ ಕೇಂದ್ರ ಭರವಸೆ

LPG E-KYC: ಎಲ್ಪಿಜಿ ಸಿಗಬೇಕೆಂದರೆ ಈ ಕೆಲಸ ಮಾಡಲೇಬೇಕು! ಕೇಂದ್ರದ ಖಡಕ್ ಸೂಚನೆ

Gold-Silver Rate Live Updates: ಇಂದು ಚಿನ್ನ, ಬೆಳ್ಳಿ ದರ ಇಳಿಕೆಯೋ, ಏರಿಕೆಯೋ? ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

YES Bank Rules: ಯೆಸ್ ಬ್ಯಾಂಕ್ ಗ್ರಾಹಕರೇ ಇಲ್ಲಿ ಗಮನಿಸಿ; ಏಪ್ರಿಲ್ 1 ರಿಂದ ಬದಲಾಗಲಿದೆ ನಿಯಮ

IndiGo Price Hike: ವಿಮಾನ ಪ್ರಯಾಣಿಕರಿಗೆ ಶಾಕ್! ಇಂಡಿಗೋ ಪ್ರಯಾಣ ದರ ಮತ್ತಷ್ಟು ಹೆಚ್ಚಳ

Fixed Deposits vs NSC: ತೆರಿಗೆ ಉಳಿತಾಯಕ್ಕಾಗಿ ಎಫ್ಡಿ vs ಎನ್ಎಸ್ಸಿ; ಯಾವುದು ಬೆಸ್ಟ್?

Fixed Deposit: 8.3% ಲಾಭದೊಂದಿಗೆ ಪ್ರವಾಸ ನಿಧಿ ಕಟ್ಟಿ, ಪ್ರವಾಸದ ಕನಸು ನನಸಾಗಿಸಲು 5 ಸರಳ ಮಾರ್ಗ

Adani Total Gas SHareಷೇರು ಮಾರುಕಟ್ಟೆ ಕುಸಿದರೂ, ನಷ್ಟ ಕಾಣದ ಷೇರು ಇದು; ಯಾವುದು ಗೊತ್ತಾ?



Click it and Unblock the Notifications