ಇತ್ತೀಚಿನ ದಿನಗಳಲ್ಲಿಉದ್ಯೋಗವೊಂದನ್ನೇ ನಂಬದೇ, ಇತರ ಆದಾಯ ಮೂಲಗಳಿಗಾಗಿ ಬೇರೆ ಬೇರೆ ಉದ್ಯಮ, ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ಯುವಕರನ್ನು ನೋಡಬಹುದಾಗಿದೆ. ಇಂದು ಉತ್ತಮ ಉದ್ಯೋಗವೊಂದೇ ಜೀವನೋಪಾಯಕ್ಕೆ ದಾರಿಯಾಗಿ ಉಳಿದಿಲ್ಲ. ಅಲ್ಪಾವಧಿಯಲ್ಲಿ, ಉದ್ಯಮ ಪ್ರಾರಂಭಿಸಿ ಅದು ಆದಾಯದ ವಿಶ್ವಾಸಾರ್ಹ ಮೂಲವಾಗುವುದನ್ನು ನೋಡಿದ್ದೇವೆ.
ಇದಕ್ಕೆ ತಾಜಾ ಉದಾಹರಣೆಯಾಗಿ ನಿಲ್ಲುತ್ತಾರೆ ಗುರ್ಲೀನ್ ಚಾವ್ಲಾ. ಉತ್ತರ ಪ್ರದೇಶದ ಝಾನ್ಸಿ ನಿವಾಸಿಯಾಗಿರುವ ಚಾವ್ಲಾ ಅವರು ಬಂಜರು ಭೂಮಿಯಲ್ಲಿ ಸ್ಟ್ರಾಬೆರಿ ಬೆಳೆಯುವ ಮೂಲಕ ಲಕ್ಷಾಂತರ ರೂ. ಸಂಪಾದಿಸುತ್ತಿದ್ದಾರೆ. ಹಾಗೆಂದು ಚಾವ್ಲಾ ಅವರು ಮೂಲತಃ ಕೃಷಿಕರಲ್ಲ. ಕಾನೂನು ಪದವೀಧರೆಯಾಗಿರುವ ಇವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪುಣೆಯ ಇಂಡಿಯನ್ ಲಾ ಸೊಸೈಟಿಯಿಂದ ಕಾನೂನು ಪದವಿ ಪಡೆದಿರುವ ಚಾವ್ಲಾ, ತಮ್ಮ ಅಧ್ಯಯನ ಪೂರ್ಣಗೊಳಿಸುತ್ತಿರುವಂತೆಯೇ, ಹೊಸದೇನಾದರೂ ಮಾಡಬೇಕು ಎನ್ನುವ ಕನಸು ಕಂಡರು. ಇದೇ ವೇಳೆ ಸ್ಟ್ರಾಬೆರಿ ಬೆಳೆಯುವ ಯೋಚನೆ ಚಾವ್ಲಾ ಅವರಿಗೆ ಬಂತು. ಹೀಗಾಗಿ ಝಾನ್ಸಿಯಲ್ಲಿದ್ದ ಭೂಮಿಯಲ್ಲಿ ಸ್ಟ್ರಾಬೆರಿ ಬೆಳೆಯಲು ಮುಂದಾದರು.
ಸ್ಟ್ರಾಬೆರಿ ಬೆಳೆಯುವ ಯೋಚನೆ ಬಂದಿದ್ದು ಹೇಗೆ?
ಕೊವೀಡ್ ಸಾಂಕ್ರಮಿದ ಸಮಯದಲ್ಲಿ ಲಾಕ್ ಡೌನ್ ಕಾರಣದಿಂದ ಗುರ್ಲೀನ್ ಝಾನ್ಸಿಯಲ್ಲಿರುವ ಮನೆಗೆ ಹಿಂತಿರುಗಬೇಕಾಯಿತು. ಪ್ರಾರಂಭದಲ್ಲಿ ಅವರು ಮನೆಯಲ್ಲೇ ಸ್ಟ್ರಾಬೆರಿ ಬೆಳೆಯಲು ಪ್ರಾರಂಭಿಸಿದರು. ಇದರಿಂದ ಉತ್ತಮ ಫಸಲು ಬರಲು ಪ್ರಾರಂಭವಾಯಿತು. ಇದರಿಂದ ಮತ್ತಷ್ಟು ಉತ್ತೇಜನಗೊಂಡ ಗುರ್ಲೀನ್ ತಮ್ಮ ತಂದೆಯ ಫಾರ್ಮ್ ಹೌಸ್ ನಲ್ಲಿ ಸ್ಟ್ರಾಬೆರಿ ಬೆಳೆಯುವ ನಿರ್ಧಾರ ಕೈಗೊಂಡರು. ಸುಮಾರು 1.5 ಎಕರೆ ಇದ್ದ ಭೂಮಿಯಲ್ಲಿ ಗುರ್ಲೀನ್ ಸ್ಟ್ರಾಬೆರಿ ಕೃಷಿ ಆರಂಭಿಸಿದರು.
ಗುರ್ಲೀನ್ ಅವರು ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ಸ್ಟ್ರಾಬೆರಿ ಕೃಷಿಯನ್ನು ಮಾಹಿತಿ ಪಡೆದರು. ಜೊತೆಗೆ ಈ ಕೃಷಿಗಾಗಿ ಸಾಕಷ್ಟು ಶ್ರಮಿಸಿದರು. ಈ ಕಾರ್ಯದಲ್ಲಿ ಗುರ್ಲೀನ್ ಅವರಿಗೆ ಅವರ ತಂದೆ ಕೂಡ ಸಾಕಷ್ಟು ಬೆಂಬಲ ನೀಡಿದರು. ಇನ್ನು ಗುರ್ಲೀನ್ 'ಝಾನ್ಸಿ ಆರ್ಗನಿಕ್ಸ್' ಎಂಬ ವೆಬ್ ಸೈಟ್ ಕೂಡ ರೂಪಿಸಿದರು. ಜನರು ವೆಬ್ ಸೈಟ್ ನಿಂದ ನೇರವಾಗಿ ಸ್ಟ್ರಾಬೆರಿ ಖರೀದಿಸಬಹುದು.
ವರದಿಗಳ ಪ್ರಕಾರ, ಗುರ್ಲೀನ್ ಪ್ರತಿದಿನ ಸುಮಾರು 70 ಕೆಜಿ ಸ್ಟ್ರಾಬೆರಿಗಳನ್ನು ಮಾರಾಟ ಮಾಡುವ ಮೂಲಕ ಸುಮಾರು 30,000 ರೂಪಾಯಿ ಆದಾಯ ಗಳಿಸುತ್ತಾರೆ. ಅವರ ಈ ಪರಿಶ್ರಮವನ್ನು ಪ್ರಧಾನಿ ನರೇಂದ್ರ ಮೋದಿ ರೇಡಿಯೋ ಕಾರ್ಯಕ್ರಮ್ 'ಮಾನ್ ಕಿ ಬಾತ್' ನಲ್ಲಿ ಶ್ಲಾಘಿಸಿದ್ದಾರೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications