ಈ ಹಿಂದೆ ನೀವು ಅನೇಕ ಲೇಖನಗಳಲ್ಲಿ ಹಲವು ಐಐಟಿ, ಐಐಎಂ ಪದವೀಧರರು ಸ್ವಂತ ಕಂಪನಿಗಳನ್ನು ಪ್ರಾರಂಭಿಸಲು ತಮ್ಮ ಉತ್ತಮ ವೇತನದ ಕೆಲಸ ತೊರೆದ ಸ್ಟೋರಿಗಳನ್ನು ಓದಿರಬಹುದು. ಇವರು ಸ್ವಪ್ರಯತ್ನದಿಂದ ಸಾಕಷ್ಟು ಶ್ರಮ ಹಾಕಿ ಕಂಪನಿಯನ್ನು ಯಶಸ್ವಿನ ಕಡೆಗೆ ಕೊಂಡೊಯ್ಯುತ್ತಾರೆ.
ಇಂತಹ ಕೆಲವು ಸ್ಟಾರ್ಟ್ಅಪ್ಗಳಿಗೆ ಭಾರತದ ಪ್ರಮುಖ ಉದ್ಯಮಿಗಳಾದ ರತನ್ ಟಾಟಾ, ರಿತೇಶ್ ಅಗರ್ವಾಲ್ ಹೀಗೆ ಖ್ಯಾತ ಶ್ರಿಮಂತ ಉದ್ಯಮಿಗಳು ಫಂಡಿಂಗ್ ಮಾಡಿದ್ದಾರೆ. ಇದೇ ರೀತಿ ತಮ್ಮದೇ ಕಂಪನಿಯೊಂದರ ಸಹ-ಸ್ಥಾಪನೆಗಾಗಿ ತನ್ನ ಕಾರ್ಪೊರೇಟ್ ಕೆಲಸವನ್ನು ತೊರೆದ ಅಂತಹ ವ್ಯಕ್ತಿಗಳಲ್ಲಿ ವರುಣ್ ಖೈತಾನ್ ಕೂಡಾ ಒಬ್ಬರಾಗಿದ್ದಾರೆ.

ಅವರು, ಅಭಿರಾಜ್ ಭಾಲ್ ಮತ್ತು ರಾಘವ್ ಚಂದ್ರ ಅವರೊಂದಿಗೆ 2014 ರ ಸೆಪ್ಟೆಂಬರ್ ನಲ್ಲಿ ಅರ್ಬನ್ ಕಂಪನಿಯನ್ನು (ಹಿಂದೆ ಅರ್ಬನ್ಕ್ಲ್ಯಾಪ್) ಸಹ-ಸ್ಥಾಪಿಸಿದರು. ಖೈತಾನ್ ಅವರು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದು (ಸಿಒಒ) ಅವರು ಕಾರ್ಯಾಚರಣೆಗಳು ಮತ್ತು ಸೇವಾ ಪೂರೈಕೆದಾರರ ಆನ್ಬೋರ್ಡಿಂಗ್ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ವರುಣ್ ಖೈತಾನ್ ಅವರು 2009 ರಲ್ಲಿ ಐಐಟಿ ಕಾನ್ಪುರದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ತಮ್ಮದೇ ಪಾಲುದಾರಿಕೆಯಲ್ಲಿ ಯಶಸ್ವಿಯಾಗಿ ಅರ್ಬನ್ ಕಂಪನಿ ಆರಂಭಿಸುವ ಮೊದಲು ಅವರು, ಕ್ಯಾಲಿಫೋರ್ನಿಯಾದ ಕ್ವಾಲ್ಕಾಮ್ ಆರ್ಎನ್ಡಿಯಲ್ಲಿ ಕೆಲಸ ಮಾಡಿದ್ದರು. ಬಳಿಕ ನ್ಯೂಯಾರ್ಕ್ ಮತ್ತು ಇಸ್ತಾನ್ಬುಲ್ ಕಚೇರಿಗಳಲ್ಲಿ ದಿ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ಗೆ ಸಲಹೆಗಾರರಾಗಿದ್ದರು.
ಅರ್ಬನ್ ಕಂಪನಿ ರತನ್ ಟಾಟಾ ಅವರು ಬೆಂಬಲಿಸಿದ್ದು, 2015 ರ ಡಿಸೆಂಬರ್ನಲ್ಲಿ ಅವರಿಂದ ಬಹಿರಂಗಪಡಿಸದ ನಿಧಿ ಸಂಗ್ರಹಿಸಿದೆ. ಅದರ ಇತರ ಹೂಡಿಕೆದಾರರಲ್ಲಿ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಮತ್ತು ಝೊಮಾಟೊ ಸಿಇಒ ದೀಪಿಂದರ್ ಗೋಯಲ್ ಕೂಡಾ ಒಳಗೊಂಡಿದ್ದಾರೆ.
ಅರ್ಬನ್ ಕಂಪನಿಯು ಗುರ್ಗಾಂವ್ ಮೂಲದ ಟೆಕ್ನಾಲಜಿ ಬೇಸ್ ಪ್ಲ್ಯಾ ಟ್ಪಾರ್ಮ್ ಆಗಿದ್ದು, ಮನೆಗೆ ಸಂಬಂಧಿತ ವಿವಿಧ ಸೇವೆಗಳನ್ನು ನೀಡುತ್ತದೆ. ಅಂದರೆ ತನ್ನ ಅಪ್ಲಿಕೇಶನ್ ಮತ್ತು ವೆಬ್ಸೈಟ್ನ ಮೂಲಕ ಬ್ಯೂಟಿ ಮತ್ತು ಸ್ಪಾ ಅಟ್ ಹೋಮ್, ಕಾರ್ಪೆಂಟ್ರಿ, ಪ್ಲಂಬಿಂಗ್, ಕ್ಲೀನಿಂಗ್, ಪೇಂಟಿಂಗ್, ಅಪ್ಲೈಯನ್ಸ್ ರಿಪೇರಿ ಮುಂತಾದ ಸೇವೆಗಳನ್ನು ಒದಗಿಸುತ್ತದೆ.
ಕಂಪನಿಯ ವೆಬ್ಸೈಟ್ನಲ್ಲಿ ಪ್ರಕಟವಾದ ವಾರ್ಷಿಕ ವರದಿಯ ಪ್ರಕಾರ, ಹಣಕಾಸು ವರ್ಷ 2023 ರ ಅವಧಿಯಲ್ಲಿ ಕಂಪನಿಯ ಆದಾಯದಲ್ಲಿ ಶೇಕಡ 45.4 ರಷ್ಟು ಹೆಚ್ಚಳವಾಗಿದ್ದು, 637 ಕೋಟಿ ರೂಪಾಯಿ ಆಗಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications