ಇನ್ನು ಮುಂದಿನ ಕೆಲ ವಾರಗಳಲ್ಲೇ ದೇಶದಾದ್ಯಂತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಕೇಂದ್ರಗಳು ಸೇರಿದಂತೆ ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಪ್ಲೇಸ್ಮೆಂಟ್ ಸೀಸನ್ ಪ್ರಾರಂಭವಾಗಲಿದೆ.
ಈ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಕಂಪನಿಗಳಲ್ಲಿ ಒಳ್ಳೆಯ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಲು ಸಂದರ್ಶನಗಳಿಗೆ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯ ಐಐಟಿ ರಿಸರ್ಚ್ ಇಂಟರ್ನ್ ಮಾಡಿರುವ ಎಕ್ಸ್ ಪೋಸ್ಟ್ ಈಗ ವೈರಲ್ ಆಗಿದೆ.

ರಿಸರ್ಚ್ ಇಂಟರ್ನ್, ಹೃತಿಕ್ ತಲ್ವಾರ್ ಅವರು ಮಾಡಿರುವ ಪೋಸ್ಟ್ ಇದಾಗಿದ್ದು, "ತನಗೆ ಜ್ಯೊಮಾಟೊದಲ್ಲಿ ಉದ್ಯೋಗವನ್ನು ಹೇಗೆ ನೀಡಲಾಯಿತು ಮತ್ತು ಇದಾದ ಬಳಿಕ ಉದ್ಯೋಗದ ಪ್ರಸ್ತಾಪವನ್ನು ಯಾವ ರೀತಿ ಹಿಂತೆಗೆದುಕೊಳ್ಳಲಾಯಿತು," ಎಂದು ಬರೆದುಕೊಂಡಿದ್ದಾರೆ.
ಹೃತಿಕ್ ತಲ್ವಾರ್ ಅವರ ಪೋಸ್ಟ್ ಪ್ರಕಾರ, ಜೊಮ್ಯಾಟೊದ ಕಾರ್ಯನಿರ್ವಾಹಕರು ಐಐಟಿ ದೆಹಲಿ ಕ್ಯಾಂಪಸ್ಗೆ ಭೇಟಿ ನೀಡಿ ಸಂದರ್ಶನದ ಬಳಿಕ ಅವರಿಗೆ 1.6 ಕೋಟಿ ರೂಪಾಯಿಗಳ ಪ್ಯಾಕೇಜ್ನೊಂದಿಗೆ ಅಲ್ಗಾರಿದಮ್ ಇಂಜಿನಿಯರ್ ಹುದ್ದೆಯ ಉದ್ಯೋಗದ ಆಫರ್ ನೀಡಿದರು. ಆದರೆ ಉದ್ಯೋಗ ಸಿಕ್ಕ ಖುಷಿ ಕೇವಲ ಅಲ್ಪಕಾಲಿಕವಾಗಿತ್ತು ಎಂದಿದ್ದಾರೆ.
ಆಫರ್ ಹಿಂಪಡೆದುಕೊಂಡಿದ್ದು ಯಾಕೆ?
ಕಂಪನಿಯ ನಿರ್ಬಂಧಗಳನ್ನು ಉಲ್ಲೇಖಿಸಿ ಜೊಮ್ಯಾಟೊ ನಂತರ ಉದ್ಯೋಗ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತು. ಹೃತಿಕ್ ಅವರ ಪೋಸ್ಟ್ ಹಲವಾರು ರೀಟ್ವೀಟ್ಗಳು ಮತ್ತು ಕಾಮೆಂಟ್ಗಳನ್ನು ಬಂದಿದ್ದು, ನೆಟ್ಟಿಗರು ಸಂದೇಹ ಮತ್ತು ಕುತೂಹಲವನ್ನು ತಮ್ಮ ಕಾಮೆಂಟ್ ನಲ್ಲಿ ವ್ಯಕ್ತಪಡಿಸಿದ್ದಾರೆ.
ವರದಿ ಮಾಡಿರುವ 1.6 ಕೋಟಿ ರೂಪಾಯಿ ಆಫರ್ ನಿಖರವಾಗಿದೆಯೇ ಅಥವಾ ತಪ್ಪಾಗಿ ಟೈಪ್ ಮಾಡಲಾಗಿದೆಯೇ ಎಂದು ಕೆಲವು ಬಳಕೆದಾರರು ಪ್ರಶ್ನಿಸಿದ್ದಾರೆ. ಇದು 16 ಲಕ್ಷದ ಹೆಚ್ಚು ತೋರಿಕೆಯ ಅಂಕಿಅಂಶವನ್ನು ಸೂಚಿಸುತ್ತದೆ. ಅವರಿಗೆ ನಿಜವಾಗಿ ಜೊಮ್ಯಾಟೊದಿಂದ ರೂ 1.6 ಕೋಟಿ ಆಫರ್ ನೀಡಲಾಗಿದೆಯೇ ಅಥವಾ ಇಲ್ಲವೇ ಎಂದು ಕೇಳಿದರು.
"ಇದು 16 ಲಕ್ಷ ರೂಪಾಯಿ ಆಗಿದ್ದು, 1.6 crore ಎಂದು ತಪ್ಪಾಗಿ ಟೈಪ್ ಮಾಡಲಾಗಿದೆಯೇ," ಎಂದು ಕೆಲವು ಬಳಕೆದಾರರು ಪ್ರಶ್ನಿಸಿದ್ದಾರೆ. "ನಾನು ಸುದ್ದಿಯನ್ನು ಓದಿದ ಕ್ಷಣದಲ್ಲಿ ಇದು ಮಾರ್ಕೆಟಿಂಗ್ ತಂತ್ರ ಎಂದು ನನಗೆ ಅನಿಸಿತು. ಜೊಮ್ಯಾಟೊದಂತಹ ಕಂಪನಿಯು ಫ್ರೆಶರ್ಗೆ 1.6 ಕೋಟಿ ನೀಡಲು ಸಾಧ್ಯವಿಲ್ಲ," ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಘಟನೆಯು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಪ್ರಕ್ರಿಯೆಯ ಅನಿರೀಕ್ಷಿತ ಸ್ವರೂಪದ ಮೇಲೆ ಬೆಳಕು ಚೆಲ್ಲುವುದು ಖಂಡಿತಾ. ಮಾತ್ರವಲ್ಲದೇ ಇದು ಉದ್ಯೋಗ ನೇಮಕಾತಿ ಮಾಡುವವರು ಮತ್ತು ಅಭ್ಯರ್ಥಿಗಳ ನಡುವಿನ ಮಾತುಕತೆಯ ನಡುವಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಜೊತೆಗೆ ಇಂತಹ ವಹಿವಾಟುಗಳಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications