ಉದ್ಯಮಿ ಸುಪಮ್ ಮಹೇಶ್ವರಿ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯಮ ಸಂಸ್ಥಾಪಕರು ಎಂದು ವರದಿಯಾಗಿದೆ. ಇವರು 2,00,00,00,000 ರೂಪಾಯಿಗಿಂತ ಹೆಚ್ಚು ವಾರ್ಷಿಕ ಸಂಭಾವನೆ ಪಡೆಯುವ ಮೂಲಕ "ಅತಿ ಹೆಚ್ಚು ವೇತನ ಪಡೆಯುವ ಸಂಸ್ಥಾಪಕರು" ಎಂದು ತಿಳಿದುಬಂದಿದೆ.
Inc42 ನ ಸ್ಟಾರ್ಟ್ಅಪ್ ಫೌಂಡರ್ ಸ್ಯಾಲರೀಸ್ ಹಣಕಾಸು ವರ್ಷ 2023 ಟ್ರ್ಯಾಕರ್ನ ವರದಿಯ ಪ್ರಕಾರ, ಸುಪಮ್ ಮಹೇಶ್ವರಿ 2023 ರಲ್ಲಿ ಅತಿ ಹೆಚ್ಚು ಗಳಿಸಿದ ಸಂಸ್ಥಾಪಕರಾಗಿದ್ದಾರೆ. ಟ್ಯಾಲೆಂಟ್ , ಸೃಜನಶೀಲತೆಗೆ ಜೊತೆಗೆ ಸಂಪೂರ್ಣ ಸಮರ್ಪಣೆ ಮೂಲಕ ವ್ಯಾಪಾರ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಸುಪಮ್ ಮಹೇಶ್ವರಿ ಅವರು ಇಂದಿನ ಯುವಜನತೆಗೆ ದಾರ್ಶನಿಕರಾಗಿದ್ದಾರೆ.

ತಾಯಿ ಮತ್ತು ಮಗುವಿನ ಆರೈಕೆ ಉತ್ಪನ್ನಗಳಲ್ಲಿ ಭಾರತದ ಅತಿದೊಡ್ಡ ಮಾರಾಟ ಸಂಸ್ಥೆಯಾದ ಫಸ್ಟ್ಕ್ರೈ (FirstCry) ನ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವಾಗ ಮಹೇಶ್ವರಿ ಅವರು ಇ-ಕಾಮರ್ಸ್ ಕ್ರಾಂತಿಯನ್ನು ಹರಿಕಾರರಾಗಿದ್ದಾರೆ. ತಮ್ಮ ಸ್ವಂತ ಮಗುವಿಗೆ ಉತ್ತಮ ಗುಣಮಟ್ಟದ ಬೇಬಿ ಕೇರ್ ಉತ್ಪನ್ನಗಳನ್ನು ಹುಡುಕುತ್ತಿರುವ ಪೋಷಕರಂತೆ ಸುಪಮ್ ಮಹೇಶ್ವರಿ ಅವರು ಕೂಡಾ ಉತ್ತಮ ಗುಣಮಟ್ಟದ ಉತ್ಪನ್ನಗಳ ಹುಡುಕಾಟದ ಸಂದರ್ಭ, ಫಸ್ಟ್ಕ್ರೈ ಅನ್ನು ಪ್ರಾರಂಭಿಸುವ ಆಲೋಚನೆಯನ್ನು ಹುಟ್ಟಿಕೊಂಡಿತು.
ಗುಣಮಟ್ಟದ ಉತ್ಪನ್ನಗಳ ಕೊರತೆ ಹಾಗೂ ಅವರು ಪೋಷಕರು ತಮ್ಮ ಮಕ್ಕಳಿಗೆ ಶಾಪಿಂಗ್ ಮಾಡುವಾಗ ಆಗುವ ಸಮಸ್ಯೆಯನ್ನು ಅವರು ಅವಕಾಶವಾಗಿ ಪರಿವರ್ತಿಸಿಕೊಂಡರು. ಇದಕ್ಕಾಗಿ ಅವರು ಬ್ರೈನ್ಬೀಸ್ ಸೊಲ್ಯೂಷನ್ಸ್ ಮತ್ತು ಅದರ ಪ್ರಮುಖ ಬ್ರ್ಯಾಂಡ್, ಬೇಬಿಕೇರ್ ಕಂಪನಿ ಫಸ್ಟ್ಕ್ರೈ ಅನ್ನು 2010 ರಲ್ಲಿ ಅಮಿತವಾ ಶಾ ಜೊತೆಗೂಡಿ ಸ್ಥಾಪಿಸಿದರು.
ಫಸ್ಟ್ಕ್ರೈ ಮೊದಲಿಗೆ ಮಗುವಿನ ಆರೈಕೆ ಉತ್ಪನ್ನಗಳನ್ನು ಆನ್ಲೈನ್ ಮಾರಾಟ ಮಾಡುವ ಮೂಲಕ ಪ್ರಾರಂಭವಾಯಿತು, ಆದರೆ ಬಳಿಕ ರಾಷ್ಟ್ರದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಮಳಿಗೆಗಳನ್ನು ತೆರೆಯುವ ಮೂಲಕ ತ್ವರಿತವಾಗಿ ಬೆಳೆದುನಿಂತಿತು. ಸುಪಮ್ ಮಹೇಶ್ವರಿ ಅವರು ಆರಂಭದಲ್ಲಿ ಬ್ರೈನ್ವಿಸಾ ಟೆಕ್ನಾಲಜೀಸ್ ಅನ್ನು ಅಮಿತವ ಶಾ ಅವರೊಂದಿಗೆ ಸಹ-ಸ್ಥಾಪಿಸಿದರು. ಆದರೆ ಈ ಉದ್ಯಮ ಮಾರಾಟ ಮಾಡಿದ ನಂತರ, ಅವರು ಫಸ್ಟ್ಕ್ರೈ ಅನ್ನು ಪ್ರಾರಂಭಿಸಲು ಬ್ರೇನ್ಬೀಸ್ ಅನ್ನು ಬಳಸಿದರು.
ಮಹೇಶ್ವರಿ ಅವರು ತಮ್ಮ ಶಿಕ್ಷಣವನ್ನು ಅಪೀಜಯ್ ಶಾಲೆಯಲ್ಲಿ ಪಡೆದಿದ್ದು ಆ ಬಳಿಕ ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಅದರ ನಂತರ, ಅವರು ಪಿಜಿಡಿಎಂ ಗಳಿಸಲು ಐಐಎಂ-ಅಹಮದಾಬಾದ್ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು. ವರದಿಗಗಳ ಪ್ರಕಾರ ಅವರು 1577 ಕೋಟಿ ರೂಪಾಯಿಗಿಂತ ನಿವ್ವಳ ಸಂಪತ್ತನ್ನು ಹೊಂದಿದ್ದಾರೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications