ರಿಟೇಲ್ ಚೈನ್ ಸುಭಿಕ್ಷಾ ಸಂಸ್ಥಾಪಕ ಮತ್ತು ಐಐಟಿ ಹಳೆಯ ವಿದ್ಯಾರ್ಥಿ ಆರ್ ಸುಬ್ರಮಣಿಯನ್ ಹೂಡಿಕೆದಾರರನ್ನು ವಂಚಿಸಿದ ಆರೋಪದ ಮೇಲೆ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ನವೆಂಬರ್ 20, 2023 ರ ನ್ಯಾಯಾಲಯದ ತೀರ್ಪಿನ ಪ್ರಕಾರ, ನೂರಾರು ಹೂಡಿಕೆದಾರರನ್ನು ವಂಚಿಸುವ ಅತ್ಯಾಧುನಿಕ ವಂಚನೆಯನ್ನು ರೂಪಿಸಿದ್ದಕ್ಕಾಗಿ ಸುಬ್ರಮಣಿಯನ್, ತಮಿಳುನಾಡು ಠೇವಣಿದಾರರ ಹಿತಾಸಕ್ತಿಗಳ (TNPID) ಕಾಯಿದೆಯಡಿಯಲ್ಲಿ ಚೆನ್ನೈನ ವಿಶೇಷ ನ್ಯಾಯಾಲಯವು ಸುಬ್ರಮಣಿಯನ್ ಮತ್ತು ಅವರ ಸಹಚರರನ್ನು ತಪ್ಪಿತಸ್ಥರೆಂದು ಘೋಷಿಸಿದೆ.

ತೀರ್ಪಿನ ಪ್ರಕಾರ, ಸುಬ್ರಮಣಿಯನ್ ಮತ್ತು ಇತರರು ಪ್ರಚಾರ ಮಾಡಿದ ನಾಲ್ಕು ಯೋಜನೆಗಳ ಮೂಲಕ ಠೇವಣಿ ಸಂಗ್ರಹಿಸಿ ಹಣ ಹಿಂತಿರುಗಿಸದೇ ವಂಚನೆ ಎಸಗಿದ್ದಾರೆ. ಐಐಟಿಯ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿ ಮತ್ತು ಐಐಎಂನ ಪದವೀಧರ, ಐಐಟಿ ಮದ್ರಾಸ್ನಿಂದ ಚಿನ್ನದ ಪದಕ ವಿಜೇತ ಎಂಜಿನಿಯರ್ ಆಗಿರುವ ಸುಬ್ರಮಣಿಯನ್ ಅವರು 1991 ರಲ್ಲಿ ವಿಶ್ವಪ್ರಿಯ ಇಂಡಿಯಾ ಲಿಮಿಟೆಡ್ ಅನ್ನು ಸ್ಥಾಪಿಸಿದರು.
ಈ ಹಣಕಾಸು ಸೇವಾ ಕಂಪನಿ ಪ್ರೈಮ್ ಇನ್ವೆಸ್ಟ್, ಅಸೆಟ್ ಬ್ಯಾಕ್ಡ್ ಸೆಕ್ಯುರಿಟಿ ಬಾಂಡ್, ಲಿಕ್ವಿಡ್ ಪ್ಲಸ್ ಮತ್ತು ಸೇಫ್ಟಿ ಪ್ಲಸ್-ಯೋಜನೆಗಳ ಮೂಲಕ ಲಾಭದಾಯಕ ಆದಾಯವನ್ನು ಭರವಸೆ ನೀಡಿ ಹೂಡಿಕೆದಾರರಿಗೆ ಆಮಿಷ ಒಡ್ಡಿದ್ದರು.
ಯೋಜನೆ ಮುಕ್ತಾಯದ ಬಳಿಕ ಮತ್ತೆ ಠೇವಣಿದಾರರನ್ನು ವಂಚಿಸಿ ಹಣ ವಾಪಾಸ್ ನೀಡದೆ, ಹೆಚ್ಚಿನ ಅಲ್ಪಾವಧಿಯ ಆದಾಯವನ್ನು ಭರವಸೆ ನೀಡುವ ಹೊಸ ಯೋಜನೆಗಳಲ್ಲಿ ಮರುಹೂಡಿಕೆ ಮಾಡಲು ಅವರಿಗೆ ಮನವೊಲಿಸಿದರು. ಆದರೆ ಆರೋಪಿಗಳು ಮೆಚ್ಯೂರ್ಡ್ ಮೊತ್ತವನ್ನು ಹಿಂದಿರುಗಿಸಲು ವಿಫಲವಾಗಿ ಠೇವಣಿದಾರರಿಗೆ ಮೋಸ ಮಾಡಿದ್ದಾರೆ.
ವಿಶ್ವಪ್ರಿಯ, ಸುಬ್ರಮಣಿಯನ್ ಅವರ ಮೊದಲ ಉದ್ಯಮವಾಗಿದ್ದು, ಮೇ 1991 ರಲ್ಲಿ ಇದನ್ನು ಹಣಕಾಸು ಸೇವೆಗಳ ಕಂಪನಿಯಾಗಿ ಸ್ಥಾಪಿಸಲಾಯಿತು. 1997 ರಲ್ಲಿ ಅವರು ಸುಭಿಕ್ಷಾವನ್ನು ಪ್ರಾರಂಭಿಸಿದರು. ಅನೇಕ ಹೂಡಿಕೆದಾರರು ವಿಶ್ವಪ್ರಿಯ ಸಂಸ್ಥೆಯ ಯೋಜನೆ ಆಕರ್ಷಣೆಗೊಂಡು ಹಣ ಹೂಡಿಕೆ ಮಾಡಿದರು.
ಆದರೆ ಹತ್ತು ವರ್ಷಗಳಿಂದ ಸ್ವಯಂಪ್ರೇರಣೆಯಿಂದ ಯಾವುದೇ ಹಣವನ್ನು ಠೇವಣಿ ಮಾಡಿಕೊಂಡಿರಲಿಲ್ಲ. ಆದರೆ ಹಣ ಹೂಡಿಕೆ ಮಾಡಿದ 587 ಮಂದಿ ಈವರೆಗೆ ತಮ್ಮ ಹಣವನ್ನು ಮರಳಿ ಪಡೆಯದೆ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಠೇವಣಿದಾರರಿಗೆ 137 ಕೋಟಿ ರೂ. ಅಧಿಕ ಮೊತ್ತವನ್ನು ಹಿಂದಿರುಗಿಸುವುದು ಬಾಕಿ ಇದೆ.
ಸುಬ್ರಮಣಿಯನ್ ಅವರಿಗೆ ನ್ಯಾಯಾಲಯ 8.92 ಕೋಟಿ ರೂಪಾಯಿ ದಂಡ ವಿಧಿಸಿದ್ದು, ಅಪರಾಧಿ ಸಂಸ್ಥೆಗೆ 191.98 ಕೋಟಿ ರೂಪಾಯಿ ದಂಡ ವಿಧಿಸಿದೆ. ಈ ಮೊತ್ತದಲ್ಲಿ 180 ಕೋಟಿ ರೂಪಾಯಿಗಳನ್ನು ಠೇವಣಿದಾರರ ಪರಿಹಾರಕ್ಕಾಗಿ ನಿಗದಿಪಡಿಸಲಾಗಿದೆ. ನ್ಯಾಯಾಲಯದ ತೀರ್ಪಿನ ಅನುಗುಣವಾಗಿ, ಪರಿಹಾರದ ಹಣವನ್ನುಸಕ್ಷಮ ಪ್ರಾಧಿಕಾರಕ್ಕೆ ವರ್ಗಾಯಿಸಬೇಕು. ಇದು ಸಂತ್ರಸ್ತ ಹೂಡಿಕೆದಾರರ ದಾಖಲೆಗಳನ್ನು ಪರಿಶೀಲಿಸಿದ ನಂತರ ಹಣವನ್ನು ವಿತರಿಸುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications