ಭಾರತದಲ್ಲಿ ಹಲವಾರು ಉದ್ಯಮಿಗಳು ತಾವು ಸೇರಿಕೊಂಡ ಕಂಪನಿಗಳಲ್ಲಿ ಸುದೀರ್ಘ ಅವಧಿಗೆ ಸೇವೆಯನ್ನು ಸಲ್ಲಿಸುವ ಮೂಲಕ ಆ ಸಂಸ್ಥೆಯ ಯಶಸ್ವಿಗೆ ಕಾರಣಕರ್ತರಾಗಿದ್ದಾರೆ. ಸಣ್ಣ ಹುದ್ದೆಗೆ ಕೆಲಸಕ್ಕೆ ಸೇರಿಕೊಂಡು ಬಳಿಕ ತಮ್ಮ ಪ್ರತಿಭೆ ಹಾಗೂ ಉದ್ಯಮ ಕೌಶಲ್ಯತೆಗಳಿಂದಾಗಿ ಉನ್ನತ ಹುದ್ದೆಗೆ ಏರಿದ ಹಲವು ಯಶೋಗಾಥೆಗಳಿವೆ.
ಅಂಥವರ ಸಾಲಿನಲ್ಲಿ ಆರ್ ಹರೀಶ್ ಭಟ್ ಕೂಡ ಸೇರಿದ್ದಾರೆ. ಅವರು ಟಾಟಾ ಸನ್ಸ್ನಲ್ಲಿ ಬ್ರಾಂಡ್ ಕಸ್ಟೋಡಿಯನ್ ಆಗಿರುವ ಜತೆಗೆ ಟಾಟಾ ಕಾಫಿ ಲಿಮಿಟೆಡ್ಗೆ ಅಧ್ಯಕ್ಷರಾಗಿದ್ದಾರೆ. ಹರೀಶ್ ಭಟ್ ಅವರು ಟಾಟಾ ಗ್ರೂಪ್ಗೆ 1987 ರಲ್ಲಿ ಸೇರಿದ್ದು, ಅವರು ಅಧಿಕಾರಿಯಾಗಿ ಟಾಟಾ ಅಡ್ಮಿನಿಸ್ಟ್ರೇಟೀವ್ ಸರ್ವೀಸ್(ಟಿಎಎಸ್)ನಲ್ಲಿ ಇದ್ದರು.

5,025 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯ
ಭಟ್ ಅವರು ತಮ್ಮ ಎಂಜಿನಿಯರಿಂಗ್ ಪದವಿಯನ್ನು ಬಿಐಟಿಎಸ್ ಪಿಲಾನಿಯಲ್ಲಿ 1985ರಲ್ಲಿ ಮಾಡಿದ್ದಾರೆ. ಜತೆಗೆ, ಭಟ್ ಅವರು ಅಹಮದಾಬಾದ್ನ ಐಐಎಂನ ಹಳೇ ವಿದ್ಯಾರ್ಥಿಯಾಗಿದ್ದು, ಅವರು 1985-87ರ ಅವಧಿಯಲ್ಲಿ ಅಲ್ಲಿ ಪಿಜಿಡಿಎಂ ಪದವಿ ಮಾಡಿದ್ದಾರೆ. ಹರೀಶ್ ಭಟ್ ಅವರು 2014 ರಿಂದ ಟಾಟಾ ಕಾಫಿಯ ಅಧ್ಯಕ್ಷರಾಗಿದ್ದಾರೆ. ಟಾಟಾ ಕಾಫಿ ಕಂಪನಿಯು 2023ರ ನವೆಂಬರ್ 8 ರ ಪ್ರಕಾರ, 5,025 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಭಟ್ ಅವರು ಕಳೆದ 35 ವರ್ಷಗಳ ಸುಧೀರ್ಘ ಸೇವಾವಧಿಯಲ್ಲಿ ಹಲವು ಹಿರಿಯ ಸ್ತರದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವುಗಳಲ್ಲಿ ಟಾಟಾ ಗ್ಲೋಬಲ್ ಬಿವರೇಜಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಟೈಟಾನ್ ಕಂಪನಿಯ ವಾಚಸ್ ಅಂಡ್ ಜ್ಯುವೆಲ್ಲರಿ ಬಿಸಿನೆಸ್ ವಿಭಾಗದ ಸಿಇಒ ಕೂಡ ಆಗಿದ್ದರು.
ಪ್ರಸ್ತುತ ಭಟ್ ಅವರು ಟಾಟಾ ಗ್ರೂಪ್ನ ಹಲವು ಕಂಪನಿಗಳ ಆಡಳಿತ ಮಂಡಳಿಯಲ್ಲಿ ಇದ್ದಾರೆ. ಟ್ರೆಂಟ್ ಲಿಮಿಟೆಡ್, ಟಾಟಾ ಸ್ಟಾರ್ಬಕ್ಸ್ ಪ್ರೈವೆಟ್ ಲಿಮಿಟೆಡ್, ಇನ್ಫಿನಿಟಿ ರಿಟೇಲ್ ಲಿಮಿಟೆಡ್ ಹಾಗೂ ಟಾಟಾ ಎಐಎ ಲೈಫ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ನಲ್ಲಿಯೂ ಇದ್ದಾರೆ.
ಅಲ್ಲದೆ ಅವರು ಕಳೆದ ಎರಡು ದಶಕದಲ್ಲಿ ಟಾಟಾ ಗ್ರೂಪ್ನ ಅನೇಕ ಐಕಾನಿಕ್ ಬ್ರಾಂಡ್ಗಳ ಬೆಳವಣಿಗೆ, ಜ್ಯುವೆಲ್ಲರಿ ವ್ಯವಹಾರದ ಯಶಸ್ಸು, ಟೆಟ್ಲಿ ಸೇರಿದಂತೆ ಹಲವು ಸ್ವಾಧೀನ ಪ್ರಕ್ರಿಯೆಗಳ ಕಾರ್ಯತಂತ್ರದಲ್ಲಿ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹರೀಶ್ ಭಟ್ ಅವರು ಲೇಖಕರು ಕೂಡ ಆಗಿದ್ದು, ಹಲವು ರಾಷ್ಟ್ರ ಮಟ್ಟದ ನಿಯತಕಾಲಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ಜತೆಗೆ ಅವರು ನಾಲ್ಕು ಪುಸ್ತಕಗಳನ್ನು ಕೂಡ ಬರೆದಿದ್ದು, ಟಾಟಾ ಗ್ರೂಪ್ನ 40 ಸ್ಫೂರ್ತಿದಾಯಕ ಕಥೆಗಳನ್ನು ಒಳಗೊಂಡ ʼ#ಟಾಟಾ ಸ್ಟೋರೀಸ್ʼ ಎಂಬ ಪುಸ್ತಕವನ್ನು ಕೂಡ ಬರೆದಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications