ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ವಿಶ್ವಕಪ್ ಫೈನಲ್ನಲ್ಲಿ ಭಾರತ ಸೋಲುವ ಮೂಲಕ ಅಸಂಖ್ಯ ಭಾರತೀಯ ಕ್ರೀಡಾಭಿಮಾನಿಗಳಿಗೆ ನಿರಾಶೆಯುಂಟು ಮಾಡಿದೆ. ಈ ಪಂದ್ಯ ಒಂದು ದಿನದ ಬಳಿಕ ಭಾರತ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಅವರ ಮ್ಯಾನೇಜರ್ ಬಂಟಿ ಸಜ್ದೇಹ್ ಅವರ ನಡುವಿನ ದೀರ್ಘಾವಧಿಯ ಪಾಲುದಾರಿಕೆ ಕೊನೆಗೊಂಡಿದೆ ಎಂದು ವರದಿಯಾಗಿದೆ.
ಆದರೆ, ಇಬ್ಬರ ನಡುವಿನ ಈ ಪಾಲುದಾರಿಕೆ ಬ್ರೇಕಪ್ ಆಗುವುದಕ್ಕೆ ಕಾರಣವೇನು ಎನ್ನುವುದು ಇನ್ನು ಕೂಡ ಬಹಿರಂಗವಾಗಿಲ್ಲ. ವರದಿಗಳ ಪ್ರಕಾರ, ಕೊಹ್ಲಿ ತಮ್ಮದೇ ಆದ ಕಂಪನಿಯನ್ನು ಸ್ಥಾಪಿಸುವುದಕ್ಕೆ ಮುಂದಾಗಿದ್ದಾರೆ. ಬಂಟಿ ಸಜ್ದೇಹ್ ಅವರು ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಯಾದ ಕಾರ್ನರ್ಸ್ಟೋನ್ನ ಸಿಇಒ ಹಾಗೂ ಸಂಸ್ಥಾಪಕರಾಗಿದ್ದಾರೆ.

ಕೊಹ್ಲಿ ಅವರು ಒಂದು ದಶಕದ ಹಿಂದೆ ಕಾರ್ನರ್ಸ್ಟೋನ್ಗೆ ಸೇರಿದ್ದರು. ಅಂದಿನಿಂದ ಭಾರತದ ಈ ಮಾಜಿ ನಾಯಕ ಕಂಪನಿಯಲ್ಲಿ ತೊಡಗಿಸಿಕೊಂಡಿದ್ದರು. ಹಾಗಾದರೆ ಬಂಟಿ ಸಜ್ದೇಹ್ ಯಾರು?
ಬಂಟಿ ಸಜ್ದೇಹ್ ಅವರು ಕ್ರೀಡಾ ಬಳಗದಲ್ಲಿ ಮಾತ್ರವಲ್ಲ ಬಾಲಿವುಡ್ನ ಸೆಲೆಬ್ರಿಟಿಗಳ ನಡುವೆಯೂ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಮ್ಯಾನೇಜರ್ ಅನ್ನುವುದಕ್ಕಿಂತ ಹೆಚ್ಚಾಗಿ ಬಂಟಿ ಅವರು ಕೊಹ್ಲಿಯ ಆತ್ಮೀಯ ಸ್ನೇಹಿತರು ಎಂಬುದು ಗೊತ್ತಾಗಿದೆ. ಯಾವುದೇ ಕ್ರಿಕೆಟ್ನ ಪ್ರಮುಖ ಕಾರ್ಯಕ್ರಮಗಳಲ್ಲಿ ಬಂಟಿ ಅವರು ಕೊಹ್ಲಿ ಅವರ ಪಕ್ಕದಲ್ಲಿ ಕಾಣಿಸುತಾತರೆ.
ಬಂಟಿ ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನಲ್ಲಿ ಮುಗಿಸಿದ್ದಾರೆ. ಬಳಿಕ ತಮ್ಮ ಉನ್ನತ ಅಧ್ಯಯನವನ್ನು ಆಸ್ಟ್ರೇಲಿಯಾದ ಬಾಂಡ್ ವಿಶ್ವವಿದ್ಯಾಲಯದಲ್ಲಿ ಮತ್ತು ಮುಂಬೈನ ಎಚ್ಆರ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಕನಾಮಿಕ್ಸ್ನಲ್ಲಿ ಪಡೆದುಕೊಂಡರು. ಅವರು ಪರ್ಸೆಪ್ಟ್ ಎಂಟರ್ಟೈನ್ಮೆಂಟ್ನಲ್ಲಿ ಟಾಲೆಂಟ್ ಅಕ್ವಿಶಿಷನ್ ಸಲಹೆಗಾರರಾಗಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದ್ದರು.
ಈ ಜೋಡಿಯು ಪೂಮಾ ಜತೆಗಿನ 100 ಕೋಟಿ ರೂ. ಸೇರಿದಂತೆ ಹಲವು ಟಾಪ್ ಕಂಪನಿಗಳ ಜತೆಗೆ ಜಾಹೀರಾತು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. 2020ರಲ್ಲಿ ಕರಣ್ ಜೋಹರ್ ಅವರ ಧರ್ಮ ಪ್ರೊಡೆಕ್ಷನ್ಸ್ ಕಾರ್ನರ್ಸ್ಟೋನ್ನೊಂದಿಗೆ ಪಾಲುದಾರಿಕೆ ಹೊಂದಿ ಧರ್ಮ ಕಾರ್ನರ್ ಸ್ಟೋನ್ ಏಜೆನ್ಸಿ ಅನ್ನು ಸ್ಥಾಪಿಸಿದ್ದಾರೆ.
ಈ ನಡುವೆ ಕಾರ್ನರ್ಸ್ಟೋನ್ನೊಂದಿಗಿನ ಕ್ರಿಕೆಟಿಗನ ಸಂಬಂಧವು ಜಂಟಿ ಉದ್ಯಮದಿಂದ ಬೇರೆಯಾಗಿಯೇ ಉಳಿದುಕೊಂಡಿದೆ. ಬಂಟಿಗೆ ಟೀಂ ಇಂಡಿಯಾದವರ ಜತೆಗೂ ಸಂಬಂಧವಿದೆ. ಅವರ ಸಹೋದರಿಯು ಭಾರತದ ಸ್ಟಾರ್ ಕ್ರಿಕೆಟರ್ ಪತ್ನಿ ಕೂಡ ಆಗಿದ್ದಾರೆ. ಅವರು ಕೂಡ ಕಾರ್ನರ್ಸ್ಟೋನ್ ಸೇರಿಕೊಂಡಿದ್ದು, ಸ್ಪೋರ್ಟ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications