ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಹಿನ್ನಲೆ ನೋಡಿದಾಗ ಅವರು ಅದಕ್ಕಾಗಿ ಪಟ್ಟ ಶ್ರಮ ಬಹಳ ದೀರ್ಘಾವಧಿಯಾಗಿರುತ್ತದೆ. ಆದರೆ ಉದ್ಯಮಿ ಸಾಗರ್ ಗುಪ್ತಾ ಅವರು ಅಲ್ಪಾವಧಿಯಲ್ಲಿ ಸಾಧಿಸಿ ತೋರಿಸಿರುವುದು ಅನೇಕರು ಕಷ್ಟಸಾಧ್ಯ.
ಸಿಎ ಆಗಬೇಕೆಂದು ಬಯಸಿದ್ದ ಸಾಗರ್ ಗುಪ್ತಾ ದೆಹಲಿ ವಿಶ್ವವಿದ್ಯಾನಿಲಯದಿಂದ ಬಿ.ಕಾಂ ಪೂರ್ಣಗೊಳಿಸಿದ ಒಂದು ವರ್ಷದ ಬಳಿಕ, ಅವರು ತಮ್ಮ ತಂದೆಯೊಂದಿಗೆ ವ್ಯವಹಾರದಲ್ಲಿ ಕೈ ಜೋಡಿಸಿದರು. ಸಾಗರ್ ಗುಪ್ತಾ ಅವರ ತಂದೆ ಸಿಪಿ ಗುಪ್ತಾ ಮೂರು ದಶಕಗಳ ಕಾಲ ಸೆಮಿಕಂಡಕ್ಟರ್ ವ್ಯವಹಾರದಲ್ಲಿ ತೊಡಗಿದ್ದು 2017 ರಲ್ಲಿ ಇದನ್ನು ಸಂಪೂರ್ಣವಾಗಿ ಬದಲಾಯಿಸಿ ಎಲ್ಇಡಿ ಟೆಲಿವಿಷನ್ ಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದರು.

ಸಾಗರ್ ಅವರು ಉತ್ಪಾದನಾ ಉದ್ಯಮಕ್ಕೆ ಬರಲು ಬಯಸಿದ್ದು, ಅವರ ತಂದೆ ಕಂಪನಿ ಆರಂಭಿಸಿದಾಗ ಅವರು ಬಯಸಿದಂತೆ ಸುವರ್ಣಾವಕಾಶ ಒದಗಿಬಂತು. 2019 ರಲ್ಲಿ, ಅವರು ತಮ್ಮ ಕಂಪನಿಯನ್ನು ನೋಯ್ಡಾದಲ್ಲಿ ಪ್ರಾರಂಭಿಸಿದರು. ಆದರೆ ಇದುಅವರಂದುಕೊಂಡಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ತಂದೆಗೆ ಉದ್ಯಮದಲ್ಲಿ ಒಂದಷ್ಟು ಜನರ ಸಂಪರ್ಕವಿದ್ದದ್ದು ಅವರಿಗೆ ಸಹಾಯ ಮಾಡಿತು.
ಹೀಗಾಗಿ ಅವರು Samsung, Toshiba ಮತ್ತು Sony ನಂತಹ ಬ್ರ್ಯಾಂಡ್ಗಳಿಗೆ ಎಲ್ಇಡಿ ಟೆಲಿವಿಷನ್ ಗಳ ಉತ್ಪಾದನೆಯನ್ನು ಪ್ರಾರಂಭಿಸಿದರು. ಎಲ್ಇಡಿ ಉತ್ಪಾದನಾ ಉದ್ಯಮವೆಂದರೇ ಹೇಳಬೇಕೆ, ಯಾಕೆಂದರೆ ಹಿಂದಿನಿಂದ ಈ ಕ್ಷೇತ್ರದಲ್ಲಿ ಚೀನಾ ದೇಶ ಪ್ರಾಬಲ್ಯವನ್ನು ಹೊಂದಿತ್ತು. ಆದರೆ ಈ ಕ್ಷೇತ್ರದಲ್ಲಿ ಭಾರತದಲ್ಲಿ ಬಲಪಡಿಸುತ್ತಿದ್ದಾರೆ ಸಾಗರ್ ಗುಪ್ತಾ.
ಇವರ ಸಂಸ್ಥೆಯೂ ಸುಮಾರು 100 ಕಂಪನಿಗಳಿಗೆ 24ರಿಂದ 60 ಇಂಚುಗಳವರೆಗೆ ಎಲ್ಸಿಡಿ ಟಿವಿ, ಎಲ್ಇಡಿ ಟಿವಿ ಮತ್ತು ಹೈ-ಎಂಡ್ ಟಿವಿಗಳನ್ನು ತಯಾರಿಸುತ್ತದೆ. ತಿಂಗಳಿಗೆ ಸುಮಾರು 1 ಲಕ್ಷ ಟಿವಿಯನ್ನು ತಯಾರಿಸುತ್ತಿದ್ದು ಕೆಲವೇ ವರ್ಷಗಳಲ್ಲಿ ಲಕ್ಷಾಂತರ ದೂರದರ್ಶನಗಳನ್ನು ಮಾರಾಟ ಮಾಡಿದೆ.
"ವೆಚ್ಚಗಳು ಮತ್ತಷ್ಟು ತಗ್ಗಿಸಿ ಟಿವಿಗಳನ್ನು ಜಗತ್ತಿಗೆ ತಲುಪಿಸುವುದು ತಮ್ಮ ಗುರಿಯಾಗಿದೆ" ಎಂದು ಸಾಗರ್ ಅವರು ಯುವರ್ ಸ್ಟೋರಿಗೆ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಿದ್ದರು. ಟೈರ್-2 ಮತ್ತು ಟೈರ್-3 ನಗರಗಳು ಅವರ ದೊಡ್ಡ ಮಾರುಕಟ್ಟೆಯಾಗಿದ್ದು 2022-23ರಲ್ಲಿ ಅವರ ಕಂಪನಿಯ ಆದಾಯ 600 ಕೋಟಿ ರೂಪಾಯಿ ಗಳಿಸಿದೆ.
ಟಿವಿ ಕ್ಷೇತ್ರದಲ್ಲಿ ಮಾತ್ರವಲ್ಲದೇ ಕಂಪನಿಯು ವಾಷಿಂಗ್ ಮೆಷಿನ್ಗಳು, ಸ್ಪೀಕರ್ಗಳು ಮತ್ತು ಸ್ಮಾರ್ಟ್ ವಾಚ್ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸಲು ಬಯಸುತ್ತದೆ. ವರದಿಗಳ ಪ್ರಕಾರ, ಈ ಉದ್ದೇಶಕ್ಕಾಗಿ ನೋಯ್ಡಾದಲ್ಲಿ 1,000 ಕೋಟಿ ರೂ. ಇನ್ವೆಸ್ಟ್ ಮಾಡಲು ಬಯಸಿದ್ದು, ಅದಕ್ಕಾಗಿ ಮೊದಲು ಜಮೀನು, ಇಕ್ವಿಪ್ಮೆಂಟ್ ಮತ್ತು ಸೌಲಭ್ಯಗಗಳಿಗಾಗಿಯೇ ಖರೀದಿಸಲು 400 ಕೋಟಿ ರೂ.ಇನ್ವೆಸ್ಟ್ ಮಾಡಲಿದೆ.
ಪ್ರಸ್ತುತ ಸಾಗರ್ ಗುಪ್ತಾ ಸೋನೆಪತ್ನಲ್ಲಿ ಕಾರ್ಖಾನೆಯನ್ನು ಹೊಂದಿದ್ದು 1000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದಾರೆ. ಹೊಸ ಘಟಕದಲ್ಲಿ43 - 90 ಇಂಚುಗಳ ನಡುವಿನ ಗಾತ್ರದ ಟೆಲಿವಿಷನ್ಗಳನ್ನು ತಯಾರಿಸುವ ಯೋಜನೆ ಹಾಕಿಕೊಂಡಿದ್ದು. ಇಲ್ಲೂ 1500 ಜನರಿಗೆ ಉದ್ಯೋಗ ಕಲ್ಪಿಸುವ ಭರವಸೆ ಇದೆ.
More From GoodReturns

New Income Tax: ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ: ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

India Post: ಅಂಚೆ ಕಚೇರಿಯಲ್ಲಿ ಇಂದಿನಿಂದ ಹೊಸ ಸೇವೆ ಆರಂಭ; ಇನ್ಮೇಲೆ ಮತ್ತಷ್ಟು ಸುಲಭ

Tumkur Railway: ತುಮಕೂರಿನ ಈ ಭಾಗದಲ್ಲಿ ಲೆವೆಲ್ ಕ್ರಾಸಿಂಗ್ ಕಾಮಗಾರಿ; ಸುಮಾರು 25 ರೈಲುಗಳ ಸಂಚಾರ ವ್ಯತ್ಯಯ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Gold-Silver Rates Today Live Updates: ಚಿನ್ನ-ಬೆಳ್ಳಿ ದರ ದಿಢೀರ್ ಏರಿಕೆ; ಸಂಪೂರ್ಣ ಮಾಹಿತಿ ಇಲ್ಲಿದೆ

Bengaluru Gold Price: ಬೆಂಗಳೂರಿನಲ್ಲಿ ಪಾತಾಳಕ್ಕಿಳಿದ ಚಿನ್ನದ ದರ! ಒಂದೇ ದಿನ 1,030 ರೂ. ಇಳಿಕೆ

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ



Click it and Unblock the Notifications