ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಪದವಿಗಳು ಅನೇಕ ವ್ಯಕ್ತಿಗಳ ಯಶಸ್ಸಿನಲ್ಲಿ ಮಹತ್ವದ ಪ್ರಭಾವವನ್ನು ವಹಿಸುತ್ತದೆ, ಆದರೆ ಆ ಪದವಿಗಳು ಎಂದು ಯಶಸ್ಸಿಗೆ ಗ್ಯಾರಂಟಿಗಳಾಗಿರುವುದಿಲ್ಲ. ಯಾಕೆಂದರೆ ಯಶಸ್ಸು ಕನಸು, ಶೃದ್ದೆ, ಮತ್ತು ಪರಿಶ್ರಮದ ಫಲವಾಗಿ ಸಿಗುತ್ತದೆ.
ಪುಣೆ ಮೂಲದ ನವನಾಥ್ ಯೆವಲೆ, ಕಷ್ಟಗಳನ್ನು ಮೆಟ್ಟಿ ನಿಂತು ಚಹಾ ಉದ್ಯಮ ಮೂಲಕವೇ ಕೋಟ್ಯಾಧಿಪತಿಯಾದರು. ಐಐಟಿ ಅಥವಾ ಐಐಎಂಗಳಿಂದ ಪದವಿ ಪಡೆಯದಿದ್ದರೂ ಇಂದು ಲಾಭದಾಯಕ ಉದ್ಯಮವನ್ನು ಕಟ್ಟಿ ಬೆಳೆಸಿದ್ದಾರೆ. ಸಹಾ ಮಾರಾಟದ ಸಣ್ಣ ಕಂಪನಿಯಿಂದ ವಾರ್ಷಿಕವಾಗಿ ಕೋಟಿಗಳ ಆದಾಯ ಗಳಿಸುತ್ತಿರುವ ಯೆವಲೆ ಅವರು ಅನೇಕ ಯುವಕರಿಗೆ ಪ್ರೇರೇಪಕರಾಗಿದ್ದಾರೆ.

ನವನಾಥ್ ಯೆವಲೆ ಯಾರು?
ನವನಾಥ್ ಯೆವಲೆ ಅವರು ಯೆವಾಲೆ ಟೀ ಹೌಸ್ ಪುಣೆಯ ಅತ್ಯಂತ ಪ್ರಸಿದ್ಧ ಚಹಾ ಅಂಗಡಿ ಮಾಲೀಕರಾಗಿದ್ದಾರೆ. ಪುಣೆಯಲ್ಲಿ ಮೂರು ಟೀ ಸ್ಟಾಲ್ಗಳನ್ನು ಹೊಂದಿರುವ ಶ್ರೀಮಂತ ಉದ್ಯಮಿಯಾಗಿದ್ದಾರೆ. ಚಹಾ ಮಾರಾಟದಿಂದ ಯೆವಾಲೆಯ ವಾರ್ಷಿಕ ಆದಾಯವು ಕೋಟ್ಯಂತರ ರೂಪಾಯಿಗಳಾಗಿದೆ.
ಚಹಾ ಮಾರಾಟಗಾರರಾಗಿದ್ದ ಪುತ್ರನಾಗಿ ಜನಿಸಿದ ನವನಾಥ್ ಅವರು ತಂದೆಯ ಮರಣ ನಂತರ ಜೀವನೋಪಾಯಕ್ಕಾಗಿ ಇತರ ಮಾರ್ಗಗಳನ್ನು ಅರಿಸಿಕೊ ಳ್ಳುವುದು ಅನಿವಾರ್ಯವಾಗಿತ್ತು. ತಂದೆಯ ಮರಣದ ನಂತರ ಯೆವಾಲೆಯ ಕುಟುಂಬದ ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿತ್ತು. ನಗರದಲ್ಲಿ ಸಾಕಷ್ಟು ಚಹಾ ಪ್ರಿಯರಿದ್ದರೂ, ಕೆಲವು ಉತ್ತಮ ಚಹಾ ಅಂಗಡಿಗಳು ಮಾತ್ರ ಚಹಾ ಪ್ರಿಯರ ಅಗತ್ಯ ಪೂರೈಸಬಲ್ಲವು ಎಂದು ಯೇವಾಲೆ ಅರಿತುಕೊಂಡಿದ್ದರು.
ಇದಕ್ಕಾಗಿ ವರ್ಷಗಳ ಕಾಲ ಸಂಶೋಧನೆ ಮತ್ತು ನಾಲ್ಕು ವರ್ಷಗಳ ಚಹದ ಕುರಿತು ಅಧ್ಯಯನದ ಮಾಡಿ, ಯೆವಲೆ ಮತ್ತು ಅವರ ಸಹೋದರರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಉಳಿತಾಯದ ಹಣವನ್ನು ಹಾಕಿ 2011 ರಲ್ಲಿ ಯೆವಲೆ ಟೀ ಹೌಸ್ ಅನ್ನು ತೆರೆದರು.
ಯೆವಲೆ ಪುಣೆಯ ನೆಚ್ಚಿನ ಟೀ ಹೌಸ್
ಯೆವಲೆ ಟೀ ಹೌಸ್ ಅನ್ನು 2011 ರಲ್ಲಿ ಪ್ರಾರಂಭಿಸಲಾಯಿತು. ಗ್ರಾಹಕರಿಗೆ ಯೆವಾಲೆ ಟೀ ರುಚಿ ಹತ್ತತೊಡಗಿತು. ಸಾಲು ಸಾಲು ಗ್ರಾಹಕರು ಯೆವಾಲೆ ಟೀ ಹೌಸ್ ನತ್ತ ಬರಲಾರಂಭಿಸಿದರು. ಟೀ ಹೌಸ್ನ ಪ್ರತಿಯೊಬ್ಬ ಗ್ರಾಹಕನೂ ಅವರ ಆಯ್ಕೆಯ ಚಹಾವನ್ನು ಸ್ವೀಕರಿಸುವುದನ್ನು ಯೆವಾಲೆ ಅವರು ಖುದ್ದ ಮೇಲ್ವಿಚಾರಣೆ ಮಾಡುತ್ತಿದ್ದರು. ಕಾಲಾನಂತರದಲ್ಲಿ, ಅವರ ಚಹಾ ಕಂಪನಿಯು ವೇಗವಾಗಿ ಬೆಳೆದುನಿಂತಿತು. ಯೆವಾಲೆ ಪುಣೆಯಲ್ಲಿ ಒಂದು ಶಾಪ್ ನಿಂದ ಎರಡಕ್ಕೆ ಏರಿಕೆಯಾಯಿತು.
ಮಾದ್ಯಮ ವರದಿಗಳ ಪ್ರಕಾರ, ಯೆವಾಲೆ ಟೀ ಹೌಸ್ ಪ್ರಸ್ತುತ ಪ್ರತಿ ತಿಂಗಳು 10 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿಗಳನ್ನು ಹಾಗೂ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಗಳಿಸುತ್ತದೆ. ಯೆವಲೆ ಟೀ ಹೌಸ್ ವಿವಿಧ ಬಗೆ ಚಹಾಗಳು, ಬಿಸ್ಕತ್ತುಗಳು ಮತ್ತು ತಂಪು ಪಾನೀಯಗಳನ್ನು ವ್ಯಾಪಾರ ಮಾಡುತ್ತದೆ.
ಒಂದು ಟೀ ಹೌಸ್ನಲ್ಲಿ ಸರಿಸುಮಾರು ಹನ್ನೆರಡು ಮಂದಿ ಕೆಲಸಗಾರರಿದ್ದಾರೆ. ಯೆವಲೆ ಮತ್ತಷ್ಟು ದೊಡ್ಡದಾಗಿ ಬೆಳೆಯಲು, ತಮ್ಮ ವ್ಯಾಪಾರವನ್ನು ಭಾರತದ ಹಲವು ನಗರಗಳಿಗೆ ಕೊಂಡೊಯ್ಯಲ್ಲು ಯೆವಲೆ ಸಹೋದರರು ಶ್ರಮಿಸುತ್ತಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications