ತಮ್ಮ ಸ್ವಂತ ಉದ್ಯಮ- ವ್ಯಾಪಾರ ಆರಂಭಿಸಬೇಕು ಎನ್ನುವುದು ಬಹಳಷ್ಟು ಜನರ ಕನಸಾಗಿರುತ್ತದೆ. ಉದ್ಯಮ ಆರಂಭಿಸುವುದು ಬಹಳಷ್ಟು ಸವಾಲಿನ ಕೆಲಸವಾಗಿದೆ. ಈ ಎಲ್ಲಾ ಸವಾಲನ್ನು ಎದುರಿಸಿ ಅನೇಕರು ತಮ್ಮ ವ್ಯವಹಾರವನ್ನು ನಿರ್ಮಿಸಲು ಪ್ರಯತ್ನಿಸುತ್ತಾರೆ, ಆದರೆ ಅಲ್ಲಿ ಎಲ್ಲರೂ ಯಶಸ್ವಿಯಾಗುವುದಿಲ್ಲ.
ಹೀಗೆ ಉದ್ಯಮದಲ್ಲಿ ಅನೇಕ ರಿಸ್ಕ್ಗಳಿದ್ದರೂ, ಬಹಳಷ್ಟು ಯುವಜನತೆ ತಮ್ಮ ಅತ್ಯುತ್ತಮ ವೇತನದ ಕೆಲಸವನ್ನು ತೊರೆದು, ಆ ಬಳಿಕ ಯಶಸ್ವಿ ಕಂಪನಿಗಳನ್ನು ನಿರ್ಮಿಸಿದ ಹಲವಾರು ಉದಾಹರಣೆಗಳಿವೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಅಹಾನಾ ಗೌತಮ್. ಇವರು ತಮ್ಮ 30 ನೇ ವಯಸ್ಸಿನಲ್ಲಿ ತಮ್ಮ ಸ್ವಂತ ಉದ್ಯಮ ಆರಂಭಿಸಬೇಕು ಎಂದು ಕನಸು ಕಂಡು ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಬಂದರು.

ಆ ಬಳಿಕ ಆರೋಗ್ಯಕರ ತಿಂಡಿಗಳನ್ನು "ಓಪನ್ ಸಿಕ್ರೇಟ್" ತಯಾರಿಸುವ ಸ್ಟಾರ್ಟ್ ಆಪ್ ಆರಂಭಿಸಿದರು. ಈ ಕಂಪನಿಯು 100 ಕೋಟಿ ರೂಪಾಯಿ ವಹಿವಾಟು ನಡೆಸುವಷ್ಟು ಬೆಳೆದುನಿಂತಿದೆ. ಅಹಾನಾ ಅಮೆರಿಕಾದಲ್ಲಿ ಒಳ್ಳೆಯ ವೇತನ ಪಡೆಯುವ ಕೆಲಸದಲ್ಲಿದ್ದರು. ಆದರೆ ಸ್ವಂತ ಉದ್ಯಮ ಆರಂಭಿಸಬೇಕು ಎನ್ನುವ ಕನಸಿನಲ್ಲಿ ಕೆಲಸ ತೊರೆದು ನೇರ ಭಾರತದ ವಿಮಾನ ಹತ್ತಿದರು. ಕಂಪನಿಯನ್ನು ಪ್ರಾರಂಭಿಸಲು ಆರಂಭಿಕ ಬಂಡವಾಳದ ಅಗತ್ಯವಿತ್ತು. ಇದನ್ನು ಅಹಾನಾ ತಮ್ಮ ತಾಯಿ ಬಳಿ ಪಡೆದುಕೊಂಡು ಉದ್ಯಮವನ್ನು ಆರಂಭಿಸಿದರು.
ಅಹಾನಾ ರಾಜಸ್ಥಾನದ ಭರತ್ಪುರದವರು. ಇವರು ಐಐಟಿ ಬಾಂಬೆಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. ಅಹಾನಾ 2014-2016ರಲ್ಲಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನಲ್ಲಿ ಎಂಬಿಎ ಮಾಡಿದ್ದಾರೆ. ಅಹಾನಾ ಗೋದ್ರೇಜ್ ಟೈಸನ್ ಫುಡ್ಸ್ ಲಿಮಿಟೆಡ್ನಲ್ಲಿ ಸ್ವತಂತ್ರ ಮಂಡಳಿ ನಿರ್ದೇಶಕರಾಗಿದ್ದಾರೆ.
2019 ರಲ್ಲಿ "ಓಪನ್ ಸೀಕ್ರೆಟ್" ಅನ್ನು ಪ್ರಾರಂಭಿಸಿದ್ದು,ಆರೋಗ್ಯಕರ ತಿಂಡಿಗಳನ್ನು ಒದಗಿಸುವ ಕಂಪನಿಯನ್ನು ನಡೆಸುತ್ತಿದ್ದಾರೆ. ಅಹಾನಾ, ಅತಿ ಹೆಚ್ಚು ತೂಕ ಹೊಂದಿದ್ದು, ಅಮೇರಿಕಾದಲ್ಲಿರುವಾಗ ಹೋಲ್ ಫುಡ್ಸ್ ಅಂಗಡಿಗೆ ಭೇಟಿ ನೀಡಿದ ನಂತರ ಆರೋಗ್ಯಕರ ಆಹಾರದ ಪ್ರಾಮುಖ್ಯತೆಯನ್ನು ಅವರು ಅರಿತುಕೊಂಡಿದ್ದರು.
ತನ್ನ ಸ್ಟಾರ್ಟ್ಅಪ್ ಅನ್ನು ಆರಂಭಿಸುವ ಮೊದಲು, ಅವರು ಜನರಲ್ ಮಿಲ್ಸ್ನಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದರು. ಇದಾದ ನಂತರ 4 ವರ್ಷಗಳ ಕಾಲ ಪ್ರಾಕ್ಟರ್ ಮತ್ತು ಗ್ಯಾಂಬಲ್ (P&G) ಜೊತೆಗೆ ಕೆಲಸ ಮಾಡಿದರು. ಭಾರತವನ್ನು ಅನ್-ಜಂಕ್ ಅಂದರೆ ಸಂಸ್ಕರಿಸಿದ ಸಕ್ಕರೆ, ಮೈದಾ, ಕೃತಕ ಬಣ್ಣಗಳು ಮತ್ತು ಸುವಾಸನೆಗಳಿಂದ ತುಂಬಿರುವ ಭಾರತದ ತಿಂಡಿ, ಜಂಕ್ ಫುಡ್ಗಳಿಂದ ದೂರವಿಡುವ ಉದ್ದೇಶ ಹೊಂದಿರುವ ಅವರು ಇದೇ ಕಾರಣಕ್ಕೆ "ಓಪನ್ ಸೀಕ್ರೆಟ್" ಆರಂಭಿಸಿದ್ದು, ನಟ್ಟಿ ಕುಕೀಸ್ ಅವರ ಟ್ರೇಡ್ ಮಾರ್ಕ್ ಉತ್ಪನ್ನವಾಗಿದೆ.
More From GoodReturns

ಎಲ್ಲ ಹಣವನ್ನೂ ಒಂದೇ ಬ್ಯಾಂಕ್ನಲ್ಲಿ ಇಡ್ತಿದ್ದೀರಾ? ಒಂದು ತಪ್ಪು ನಿಮ್ಮ ಸಂಪೂರ್ಣ ಉಳಿತಾಯಕ್ಕೆ ಅಪಾಯ!

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications