ಭಾರತ ಸರ್ಕಾರವು ಬುಧವಾರ ದೇಶದ ಅತೀ ಉನ್ನತ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಗಣರಾಜ್ಯೋತ್ಸವಕ್ಕೂ ಮುಂಚಿನ ದಿನ ಈ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು ಒಟ್ಟು ಈ ವರ್ಷ 106 ಮಂದಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪೈಕಿ ವ್ಯಾಪಾರ ವಲಯದಲ್ಲಿ ಭಾರತಕ್ಕೆ ರಸ್ನಾ ಪರಿಚಯಿಸಿದ ಅರೀಜ್ ಖಂಬಟ್ಟ ಪದ್ಮ ಶ್ರೀ ಪ್ರಶಸ್ತಿ ಪಡೆದಿದ್ದಾರೆ.
2023ರಲ್ಲಿ ಒಟ್ಟಾಗಿ ಆರು ಪದ್ಮ ವಿಭೂಷಣ, 9 ಪದ್ಮ ಭೂಷಣ ಹಾಗೂ 91 ಪದ್ಮ ಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. 106 ಮಂದಿಯ ಪೈಕಿ 19 ಮಂದಿ ಮಹಿಳೆಯರಾಗಿದ್ದಾರೆ. ಇಬ್ಬರು ವಿದೇಶಿ/ಎನ್ಆರ್ಐ/ಪಿಐಒ/ಒಸಿಐ ವಿಭಾಗದಲ್ಲಿ ಬರುತ್ತಾರೆ. 7 ಮಂದಿ ಮರಣೋತ್ತರ ಪದ್ಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮರಣೋತ್ತರ ಪದ್ಮ ಪ್ರಶಸ್ತಿಯನ್ನು ಪಡೆದ 7 ಮಂದಿಗಳ ಪೈಕಿ ಅರೀಜ್ ಖಂಬಟ್ಟ ಕೂಡಾ ಒಬ್ಬರು.
ಕಲೆ, ಸಾಮಾಜಿಕ ಕಾರ್ಯ, ವಿಜ್ಞಾನ ಹಾಗೂ ಇಂಜಿನಿಯರಿಂಗ್, ವ್ಯಾಪಾರ ಮತ್ಯು ಉದ್ಯಮ, ಔಷಧಿ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮೊದಲಾದ ಕ್ಷೇತ್ರಗಳಿಗೆ ಪದ್ಮ ಪ್ರಶಸ್ತಿಯನ್ನು ನೀಡಲಾಗಿದೆ. ವ್ಯಾಪಾರ ಕ್ಷೇತ್ರದಲ್ಲಿ ಒಟ್ಟಾಗಿ ಮೂವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಆದಿತ್ಯ ಬಿರ್ಲಾದ ಕುಮಾರ್ ಮಂಗಳಂ ಬಿರ್ಲಾ, ದೇಶದ ಪ್ರಸಿದ್ಧ ಸ್ಟಾಕ್ ಮಾರುಕಟ್ಟೆ ಟ್ರೇಡರ್ ರಾಕೇಶ್ ರಾಧೇಶ್ಯಾಮ್ ಜುಂಜುವಾಲಾ ಹಾಗೂ ರಸ್ನಾ ಸಂಸ್ಥಾಪಕ ಅರೀಜ್ ಖಂಬಟ್ಟ ಈ ಮೂವರು. ಅರೀಜ್ ಖಂಬಟ್ಟ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

ಅರೀಜ್ ಖಂಬಟ್ಟ ಯಾರು?
ಬುಧವಾರ ಭಾರತ ಸರ್ಕಾರ ಘೋಷಣೆ ಮಾಡಿದ ಪದ್ಮ ಪ್ರಶಸ್ತಿಯಲ್ಲಿ ಪ್ರದ್ಮ ಶ್ರೀ ಪ್ರಶಸ್ತಿಗೆ ಭಾಜನರಾದವರ ಪಟ್ಟಿಯಲ್ಲಿ ನಾವು ಅರೀಜ್ ಫಿರೋಜ್ಶಾ ಖಂಬಟ್ಟ ಹೆಸರನ್ನು ಕೂಡಾ ಕಾಣಬಹುದು. ಭಾರತದ ಅತೀ ಪ್ರಸಿದ್ಧ ಪಾನೀಯಗಳಲ್ಲಿ ಒಂದಾಗ ರಸ್ನಾದ ಹಿಂದಿರುವ ಕೈ ಅರೀಜ್ ಖಂಬಟ್ಟರದ್ದು. ಅರೀಜ್ ಖಂಬಟ್ಟ ತನ್ನ 85ನೇ ವಯಸ್ಸಿನಲ್ಲಿ ನವೆಂಬರ್ 21, 2022ರಲ್ಲಿ ಅಹಮದಾಬಾದ್ನಲ್ಲಿ ಹೃದಯಾಘಾತವಾಗಿ ನಿಧನರಾಗಿದ್ದಾರೆ.
ಪ್ರಸ್ತುತ ಅರೀಜ್ ಖಂಬಟ್ಟರಿಗೆ ಮರಣೋತ್ತರ ಪದ್ಮ ಶ್ರೀ ಪ್ರಶಸ್ತಿಯು ಲಭ್ಯವಾಗಿದೆ. ಅರೀಜ್ ಖಂಬಟ್ಟ 1937ರ ಸೆಪ್ಟೆಂಬರ್ 22ರಂದು ಬ್ರಿಟಿಷ್ ಆಡಳಿತದಲ್ಲಿ ಪಂಜಾಬ್ ಪ್ರಾಂತ್ಯದ ಕರಾಚಿಯಲ್ಲಿ ಜನಿಸಿದ್ದಾರೆ. ತನ್ನ ತಾಯಿಯೊಂದಿಗೆ ಅರೀಜ್ ಖಂಬಟ್ಟ ಕರಾಚಿಯಲ್ಲಿಯೇ ಬಾಲ್ಯವನ್ನು ಕಳೆದಿದ್ದಾರೆ.
ಅರೀಜ್ ಖಂಬಟ್ಟ ವ್ಯಾಪಾರ ಜೀವನ
ಅರೀಜ್ ಖಂಬಟ್ಟ 1940ರಲ್ಲಿ ತನ್ನದೇ ಆದ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ. ಆರಂಭದಲ್ಲಿ ಪಾನೀಯವನ್ನು ತಯಾರಿಸಲಾಗುವ ರಸ ಅಥವಾ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದರು. ವ್ಯಾಪಾರಿಗಳಿಂದ ವ್ಯಾಪಾರಿಗಳಿಗೆ ಈ ವ್ಯಾಪಾರ ನಡೆಯುತ್ತಿತ್ತು. ಅಂದರೆ B2B ಆಗಿತ್ತು. ಆದರೆ ಬಳಿಕ B2C ಅಂದರೆ ವ್ಯಾಪಾರಿಗಳಿಂದ ಗ್ರಾಹಕರ ಮಾರುಕಟ್ಟೆಗೆ ಧುಮುಕಿದರು. ಆರಂಭದಲ್ಲಿ ಜೆಫ್ಪೆ ಎಂಬ ಹೆಸರಲ್ಲಿ ಮಾರಾಟ ಮಾಡಲಾಗುತ್ತಿತ್ತು, ಗುಜರಾತ್ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಆದರೆ ಬಳಿಕ 1970ರಲ್ಲಿ ಹೆಸರನ್ನು ರಸ್ನಾ ಎಂದು ಬದಲಾವಣೆ ಮಾಡಲಾಗಿದೆ.
ಆ ಬಳಿಕ ರಸ್ನಾ ಬ್ರಾಂಡ್ ಆಗಿ ಬದಲಾವಣೆಯಾಗಿದೆ, ದೇಶದಲ್ಲಿ ಸುಮಾರು 1.8 ಮಿಲಿಯನ್ ರಿಟೇಲ್ ಮಾರಾಟವಾಗಿದೆ. ಹಾಗೆಯೇ ರಸ್ನಾ ದೇಶದಲ್ಲೇ ಅತೀ ದೊಡ್ಡ ಮನೆಯಲ್ಲಿಯೇ ಪಾನೀಯ ತಯಾರಿಸಲು ಸಹಾಯಕವಾದ ರಸವನ್ನು ಮಾರಾಟ ಮಾಡುವ ಸಂಸ್ಥೆಯಾಗಿದೆ. ಇನ್ನು ಅರೀಜ್ ಖಂಬಟ್ಟ WAPIZ (World Alliance of Parsi Irani Zarthostis) ನ ಮಾಜಿ ಚೇರ್ಮನ್ ಕೂಡಾ ಹೌದು. ಅಹಮದಾಬಾದ್ ಪಾರ್ಸಿ ಪಂಚಾಯತ್ನ ಮಾಜಿ ಅಧ್ಯಕ್ಷ, ಪಾರ್ಸಿ ಜೋರೋಸ್ಟ್ರೇನ್ ಅಂಜುಮಾಸ್ ಆಫ್ ಇಂಇಡಯಾದ ಉಪಾಧ್ಯಕ್ಷರು ಆಗಿದ್ದರು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications