ಪ್ರಧಾನ ಮಂತ್ರಿ ವನ ಧನ ಯೋಜನೆ (ಪಿಎಂವಿಡಿವೈ) ಅಥವಾ ವನ ಧನ ವಿಕಾಸ ಯೋಜನೆ (ವಿಡಿವಿವೈ) ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಭಾರತದಲ್ಲಿ ಬುಡಕಟ್ಟು ಸಮುದಾಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಾರಂಭಿಸಿದ ಯೋಜನೆಯಾಗಿದೆ.
ಈ ಯೋಜನೆಯು ಅರಣ್ಯ ಆಧಾರಿತ ಉತ್ಪನ್ನಗಳ ಸರಪಳಿಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಅಧಿಕ ಕೇಂದ್ರೀಕರಿಸುತ್ತದೆ. ಹಾಗೆಯೇ ಬುಡಕಟ್ಟು ಸಮುದಾಯಗಳಿಗೆ ಕೌಶಲ್ಯ ತರಬೇತಿ ಮತ್ತು ಸಾಮರ್ಥ್ಯ ಹೆಚ್ಚಿಸುವ ತರಭೇತಿ ಮೂಲಕ ಈ ಸಮುದಾಯದ ಆದಾಯ ಹೆಚ್ಚಿಸಲು ಸಹಾಯ ಮಾಡುತ್ತದೆ.

ವನ ಧನ ವಿಕಾಸ ಯೋಜನೆ ಅಡಿಯಲ್ಲಿ, ಬುಡಕಟ್ಟು ಸಮುದಾಯಗಳ ಕ್ಲಸ್ಟರ್ಗಳನ್ನು ರೂಪಿಸಲು ಮತ್ತು ಮೌಲ್ಯವನ್ನು ಹೆಚ್ಚಿಸಲು ಅರಣ್ಯ ಉತ್ಪನ್ನಗಳ ಸಂಸ್ಕರಣೆಯನ್ನು ಕೈಗೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಈ ಕ್ಲಸ್ಟರ್ಗಳಿಗೆ ಉಪಕರಣಗಳು ಮತ್ತು ಸಲಕರಣೆಗಳಂತಹ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ.
ಉತ್ಪನ್ನಗಳ ತಯಾರಿ, ಕೌಶಲ್ಯ ಅಭಿವೃದ್ಧಿ, ಉದ್ಯಮದ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ಯೋಜನೆಯು ಆನ್ಲೈನ್ ಪ್ಲಾಟ್ಫಾರ್ಮ್ಗಳು ಸೇರಿದಂತೆ ವಿವಿಧ ಚಾನಲ್ಗಳ ಮೂಲಕ ಬುಡಕಟ್ಟು ಸಮುದಾಯಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕವನ್ನು ಒದಗಿಸುತ್ತದೆ.
ಯೋಜನೆಯು ಮೂರು ಹಂತದ ಅನುಷ್ಠಾನ ಪ್ರಕ್ರಿಯೆಯನ್ನು ಹೊಂದಿದೆ. ಗ್ರಾಮ ಮಟ್ಟದಲ್ಲಿ ವನ ಧನ ವಿಕಾಸ ಕೇಂದ್ರಗಳು, ಕ್ಲಸ್ಟರ್ ಮಟ್ಟದಲ್ಲಿ ವನ ಧನ ವಿಕಾಸ ಸಂರಕ್ಷಣಾ ಸಮಿತಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ವನ ಧನ ವಿಕಾಸ ಸಮೂಹವೇ ಈ ಮೂರು ಹಂತದ ಅನುಷ್ಠಾನ ಪ್ರಕ್ರಿಯೆಯಾಗಿದೆ.
ಈ ಯೋಜನೆಯು ದೇಶಾದ್ಯಂತ 50,000 ವನ ಧನ ವಿಕಾಸ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದು ಸುಮಾರು 10 ಲಕ್ಷ ಬುಡಕಟ್ಟು ಉದ್ಯಮಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯು ಉದ್ಯಮಶೀಲತೆಯನ್ನು ಉತ್ತೇಜಿಸುವುದಲ್ಲದೆ ಅರಣ್ಯಗಳ ಸಂರಕ್ಷಣೆ ಮತ್ತು ಜೀವವೈವಿಧ್ಯದ ರಕ್ಷಣೆಗೆ ಸಹಾಯ ಮಾಡುತ್ತದೆ.
ವನ ಧನ ವಿಕಾಸ ಯೋಜನೆ ಪ್ರಮುಖ ಮುಖ್ಯಾಂಶಗಳು
* ಬುಡಕಟ್ಟು ಜನಾಂಗದವರಿಗೆ ಜೀವನೋಪಾಯದ ಉತ್ಪಾದನೆಯನ್ನು ಗುರಿಯಾಗಿಟ್ಟುಕೊಂಡು ಅವರನ್ನು ಉದ್ಯಮಿಗಳಾಗಿ ಪರಿವರ್ತಿಸುವ ಉಪಕ್ರಮ.
* ಪ್ರಧಾನವಾಗಿ ಅರಣ್ಯವಿರುವ ಬುಡಕಟ್ಟು ಜಿಲ್ಲೆಗಳಲ್ಲಿ ಬುಡಕಟ್ಟು ಸಮುದಾಯದ ಒಡೆತನದ ವನ ಧನ ವಿಕಾಸ ಕೇಂದ್ರಗಳನ್ನು (ವಿಡಿವಿಕೆ) ಸ್ಥಾಪಿಸುವುದು.
* ಒಂದು ಕೇಂದ್ರವು 15 ಬುಡಕಟ್ಟು ಸ್ವಸಹಾಯ ಗುಂಪುಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದೂ 20 ಬುಡಕಟ್ಟು ಎನ್ಟಿಎಫ್ಪಿ ಸಂಗ್ರಾಹಕರು ಅಥವಾ ಕುಶಲಕರ್ಮಿಗಳನ್ನು ಒಳಗೊಂಡಿರುತ್ತದೆ. ಅಂದರೆ ಪ್ರತಿ ವನ ಧನ ಕೇಂದ್ರಕ್ಕೆ ಸುಮಾರು 300 ಫಲಾನುಭವಿಗಳು ಇರುತ್ತಾರೆ.
* ಪ್ರತಿ 300 ಸದಸ್ಯರ ವನ ಧನ ಕೇಂದ್ರಕ್ಕೆ ಕೇಂದ್ರ ಸರ್ಕಾರವು 15 ಲಕ್ಷ ರೂಪಾಯಿ ಸಹಾಯಧನ ನೀಡುತ್ತದೆ.
ಅನುಷ್ಠಾನದ ಹಂತ: ವನ ಧನ ಯೋಜನೆಯು ಕೇಂದ್ರ ಮಟ್ಟದಲ್ಲಿ ಟಿಆರ್ಐಎಫ್ಇಡಿ, ರಾಜ್ಯ ನೋಡಲ್ ಇಲಾಖೆ ಮತ್ತು ರಾಜ್ಯ ಅನುಷ್ಠಾನ ಸಂಸ್ಥೆ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನುಕ್ರಮವಾಗಿ ಜಿಲ್ಲಾ ಅನುಷ್ಠಾನ ಘಟಕಗಳೊಂದಿಗೆ ದೃಢವಾದ ಚೌಕಟ್ಟಿನ ಮೂಲಕ ಜಾರಿಗೊಳಿಸಲು ಯೋಜಿಸಲಾಗಿದೆ.
ಸಲಕರಣೆಗಳ ಪೂರೈಕೆ ಮತ್ತು ತರಬೇತಿಯ ಪ್ರಾರಂಭ: ಆಯಾ ರಾಜ್ಯಗಳಲ್ಲಿನ ಜಿಲ್ಲಾ ಅನುಷ್ಠಾನ ಘಟಕವು ಪ್ರತಿ ವನ ಧನ ವಿಕಾಸ ಸ್ವಸಹಾಯ ಸಂಘಕ್ಕೆ ಕೊಯ್ಲು ಮತ್ತು ಎಂಎಫ್ಡಿಗಳ ಮೌಲ್ಯವರ್ಧನೆಗಾಗಿ ಮೂಲ ಸಲಕರಣೆಗಳನ್ನು ಒದಗಿಸಬೇಕು. ಇಎಸ್ಡಿಪಿ ಕಾರ್ಯಕ್ರಮದ ಮೂಲಕ ಪ್ರತಿ ವನ ಧನ ವಿಕಾಸ ಎಸ್ಎಚ್ಜಿಗೆ ಸುಸ್ಥಿರ ಕೊಯ್ಲು, ಎಂಎಫ್ಪಿಗಳ ಮೌಲ್ಯವರ್ಧನೆ, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಕುರಿತು ಗರಿಷ್ಠ 7 ದಿನಗಳ ತರಬೇತಿಯೊಂದಿಗೆ ತರಬೇತಿಗಳನ್ನು ನೀಡಲಾಗುತ್ತದೆ.
ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜಿಂಗ್: ವನ ಧನ ವಿಕಾಸ ಎಸ್ಎಚ್ಜಿಯ ಸದಸ್ಯರು ತರಬೇತಿ ಕಾರ್ಯಕ್ರಮದಿಂದ ಕಲಿಕೆಗಳನ್ನು ಅಳವಡಿಸಿಕೊಳ್ಳಬೇಕು. ವಿಶ್ವ ರಫ್ತು ಮತ್ತು ರಿಟೇಲ್ ಮಾನದಂಡಗಳಿಗೆ ಹೊಂದಿಕೆಯಾಗುವ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜಿಂಗ್ಗಾಗಿ ಫಂಡ್ಗಳ ಹಂಚಿಕೆಗಾಗಿ ವ್ಯಾಪಾರ ಯೋಜನೆಯನ್ನು ಅಭಿವೃದ್ಧಿಪಡಿಸುವುದು.
ಮಾರ್ಕೆಟಿಂಗ್: ಉದ್ಯಮದ ಪಾಲುದಾರರೊಂದಿಗೆ ವಿವಿಧ ಉಪಕ್ರಮಗಳ ಮೂಲಕ ಪ್ರತಿ ಬುಡಕಟ್ಟು ಉತ್ಪನ್ನಗಳಿಗೆ ಜಾಗತಿಕವಾಗಿ ಮಾರ್ಕೆಟಿಂಗ್ ಮತ್ತು ಪ್ರಚಾರಕ್ಕಾಗಿ ವೇದಿಕೆ ಒದಗಿಸಲಾಗಿದೆ.
ಫಂಡ್ನ ವಿನಿಯೋಗ
20 ಸದಸ್ಯರ ಎಚ್ಎಸ್ಜಿಗಾಗಿ ಅನುಮೋದಿಸಲಾದ ಒಟ್ಟು ಮೊತ್ತವು ಮಾರ್ಗಸೂಚಿಗಳ ಅನುಸಾರವಾಗಿ ಒಂದು ಲಕ್ಷ ರೂಪಾಯಿಗೆ ಸೀಮಿತವಾಗಿರುತ್ತದೆ. 20 ಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿರುವ ಯಾವುದೇ ಗುಂಪು, ಹಣ ಸರಿಸಮಾನವಾಗಿ ಹಂಚಿಕೆ ಮಾಡಿ ಮಾತ್ರ ಮೊತ್ತ ಬಿಡುಗಡೆ ಮಾಡಬೇಕು.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications