ಭಾರತೀಯ ಮಿಲಿಯನೇರ್ ಮತ್ತು ಕೋವಿಡ್ ಲಸಿಕೆ ಸೃಷ್ಟಿಕರ್ತ ಆಧಾರ್ ಪೂನಾವಾಲಾ ಲಂಡನ್ನಲ್ಲಿ ಅತ್ಯಂತ ದುಬಾರಿ 25,000 ಚದರ ಅಡಿ ಮೇಫೇರ್ ನಿವಾಸವನ್ನು ಖರೀದಿಸಲಿದ್ದಾರೆ.
ಫೈನಾನ್ಷಿಯಲ್ ಟೈಮ್ಸ್ ಪ್ರಕಾರ, 2023 ರಲ್ಲಿ ಅತ್ಯಂತ ದುಬಾರಿ ಆಸ್ತಿ ಎಂದು ಕರೆಯಲಾಗುವ ಈ ಲಂಡನ್ ಮನೆ £ 138 ಮಿಲಿಯನ್ (ಸುಮಾರು 1447 ಕೋಟಿ ರೂಪಾಯಿ) ಗೆ ಮಾರಾಟವಾಗುವ ನಿರೀಕ್ಷೆಯಿದೆ.
ದಿವಂಗತ ಕೈಗಾರಿಕೋದ್ಯಮಿ ಜಾನ್ ಕುಲ್ಜಿಕ್ ಅವರ ಮಗಳು ಮತ್ತು ಪೋಲೆಂಡ್ನ ಅತ್ಯಂತ ಶ್ರೀಮಂತ ವ್ಯಕ್ತಿ ಡೊಮಿನಿಕಾ ಕುಲ್ಜಿಕ್, ಹೈಡ್ ಪಾರ್ಕ್ಗೆ ಸಮೀಪವಿರುವ 1920 ರ ದಶಕದ ದೊಡ್ಡ ಮಹಲು ಅಬರ್ಕಾನ್ವೇ ಹೌಸ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ಮಾಹಿತಿ ಪ್ರಕಾರ ಪೂನಾವಾಲಾ ಕುಟುಂಬದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಯುಕೆ ಮೂಲದ ಅಂಗಸಂಸ್ಥೆಯಾದ ಸೀರಮ್ ಲೈಫ್ ಸೈನ್ಸಸ್ ಆಸ್ತಿಯನ್ನು ಖರೀದಿಸುತ್ತದೆ.
ಐಷಾರಾಮಿ ರಿಯಲ್ ಎಸ್ಟೇಟ್ ಬ್ರೋಕರ್ಗಳು ಹೇಳುವಂತೆ ಬೆಲೆಯ ಲೆಕ್ಕಾಚಾರದಲ್ಲಿ ನೋಡಿದಾಗ ಈ ಅಬರ್ಕಾನ್ವೇ ಹೌಸ್ ವರ್ಷದ ಅತಿದೊಡ್ಡ ಮನೆ ಮಾರಾಟವಾಗಿದೆ ಮತ್ತು ಲಂಡನ್ನಲ್ಲಿ ಇದುವರೆಗೆ ಮಾರಾಟವಾದ ಎರಡನೇ ಅತಿ ಹೆಚ್ಚು ಬೆಲೆಯ ಮನೆಯಾಗಿದೆ.
ಆಧಾರ್ ಪೂನಾವಾಲಾ ಯಾರು?
ಅತ್ಯಂತ ಶ್ರೀಮಂತ ಸೈರಸ್ ಪೂನಾವಾಲಾರ ಪುತ್ರರಾಗಿರುವ ಆಧಾರ್ ಪೂನಾವಾಲಾ ಅವರ ಒಟ್ಟು ಸಂಪತ್ತು 22.1 ಬಿಲಿಯನ್ ಡಾಲರ್ ಅಥವಾ 1.8 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ವರದಿಯಾಗಿದೆ.
ಪುಣೆಯ ಬಿಷಪ್ ಶಾಲೆ, ಕ್ಯಾಂಟರ್ಬರಿಯಲ್ಲಿರುವ ಸೇಂಟ್ ಎಡ್ಮಂಡ್ ಶಾಲೆ ಮತ್ತು ಅಂತಿಮವಾಗಿ ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಲಂಡನ್ನಲ್ಲಿದ್ದಾಗ ಮ್ಯಾನೇಜ್ಮೆಂಟ್ ಮತ್ತು ಜೈವಿಕ ತಂತ್ರಜ್ಞಾನವನ್ನು ಅಧ್ಯಯನ ಮಾಡಿದರು.
ಕೇವಲ 21 ವರ್ಷ ವಯಸ್ಸಿನಲ್ಲಿ ಉದ್ಯಮಕ್ಕೆ ಆಧಾರ್ ಪೂನಾವಾಲಾ ಎಂಟ್ರಿ ನೀಡಿದ್ದಾರೆ. 2001 ರಲ್ಲಿ, ಆಧಾರ್ ಪೂನಾವಾಲಾ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸದಸ್ಯರಾದರು.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ, 2011 ರಲ್ಲಿ ಸಿಇಒ ಆಗಿ ಆಧಾರ್ ಪೂನಾವಾಲಾ ನೇಮಕಗೊಂಡಿದ್ದಾರೆ. ಆಧಾರ್ ಪೂನಾವಾಲಾ ನಿರ್ದೇಶನದ ಅಡಿಯಲ್ಲಿ ಕೋವಿಡ್ ಅನ್ನು ಎದುರಿಸುವ ಅಂತರರಾಷ್ಟ್ರೀಯ ಅಭಿಯಾನದಲ್ಲಿ ಎಸ್ಐಐ ಪ್ರಮುಖ ಪಾತ್ರ ವಹಿಸಿದೆ.
ನಿಗಮವು 2021 ರ ಅಂತ್ಯದ ವೇಳೆಗೆ ವಾರ್ಷಿಕವಾಗಿ 3 ಬಿಲಿಯನ್ ಡೋಸ್ ವ್ಯಾಕ್ಸಿನೇಷನ್ಗಳನ್ನು ಉತ್ಪಾದಿಸಲು ಯೋಜಿಸಿದೆ. ಆಧಾರ್ ಪೂನಾವಾಲಾ ನಾಯಕತ್ವದಲ್ಲಿ ಎಸ್ಐಐ ವಿಶ್ವಾದ್ಯಂತ ಸಾಂಕ್ರಾಮಿಕ ಸಮಯದಲ್ಲಿ 70 ರಾಷ್ಟ್ರಗಳಿಗೆ ಕೋವಿಡ್ ಲಸಿಕೆಯ 280 ಮಿಲಿಯನ್ ಡೋಸ್ಗಳನ್ನು ಉತ್ಪಾದಿಸಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications