ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮತ್ತೆ ತನ್ನ ವಿಶೇಷ ಎಫ್ಡಿ ಯೋಜನೆಯ ಅವಧಿಯನ್ನು ವಿಸ್ತರಣೆ ಮಾಡಿದೆ. ಎಸ್ಬಿಐ ವಿಕೇರ್ ಎಫ್ಡಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಈ ಎಫ್ಡಿಯಲ್ಲಿ 5 ವರ್ಷದಿಂದ 10 ವರ್ಷದವರೆಗಿನ ಅವಧಿಯ ಹೂಡಿಕೆಗೆ ಅಧಿಕ ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಹಿರಿಯ ನಾಗರಿಕರಿಗೆ ಇರುವ ವಿಶೇಷ ಎಫ್ಡಿ ಯೋಜನೆಯಾಗಿದೆ.
ಈ ಹಿಂದೆ ಎಚ್ಡಿಎಫ್ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ ವಿಶೇಷ ಎಫ್ಡಿ ಯೋಜನೆಯನ್ನು ವಿಸ್ತರಣೆ ಮಾಡಿದೆ. ಬ್ಯಾಂಕ್ನ ವೆಬ್ಸೈಟ್ನ ಪ್ರಕಾರ ಸೀನಿಯರ್ ಸಿಟಿಜನ್ ಕೇರ್ ಎಫ್ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕವನ್ನು ಜುಲೈ 7, 2023 ರವರೆಗೆ ವಿಸ್ತರಿಸಲಾಗಿದೆ. ಈಗ ಎಸ್ಬಿಐ ಎಫ್ಡಿ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. ಯೋಜನೆಯ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಎಸ್ಬಿಐ ವಿಕೇರ್ ಎಫ್ಡಿ ಯೋಜನೆ
ಈ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವೆಬ್ಸೈಟ್ನಲ್ಲಿ ಮಾಹಿತಿ ನೀಡಿದೆ. "ಎಸ್ಬಿಐ ಹಿರಿಯ ನಾಗರಿಕರೊಂದಿಗಿನ ತನ್ನ ಆಫರ್ ಬಗ್ಗೆ ಹೆಮ್ಮೆಯನ್ನು ಹೊಂದಿದೆ. ಟರ್ಮ್ ಡೆಪಾಸಿಟ್ಗಳ ಮೇಲೆ ಹೆಚ್ಚುವರಿ ಬಡ್ಡಿಯನ್ನು ನೀಡುವ ಮೂಲಕ ಆದಾಯವನ್ನು ರಕ್ಷಣೆ ಮಾಡಲು ಹೊಸದಾದ ಡೆಪಾಸಿಟ್ ಯೋಜನೆ "ಎಸ್ಬಿಐ ವಿಕೇರ್" ಅನ್ನು ಪರಿಚಯಿಸುತ್ತದೆ," ಎಂದು ವೆಬ್ಸೈಟ್ನಲ್ಲಿ ತಿಳಿಸಲಾಗಿದೆ. ಎಸ್ಬಿಐ ವಿಕೇರ್ ಬಡ್ಡಿದರವು ಶೇಕಡ 7.50 ಆಗಿದೆ.
ಎಸ್ಬಿಐ ಅಮೃತ ಕಲಶ ಬಡ್ಡಿದರ
ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕೂಡಾ ವಿಶೇಷ ಎಫ್ಡಿ ಯೋಜನೆಯನ್ನು ಹೊಂದಿದೆ. ಅಮೃತ ಕಲಶ ಎಫ್ಡಿ ರಿಟೇಲ್ ಟರ್ಮ್ ಡೆಪಾಸಿಟ್ ಯೋಜನೆ ಎಂಬುವುದು ಎಸ್ಬಿಐ ವಿಶೇಷ ಎಫ್ಡಿ ಯೋಜನೆಗಳಲ್ಲಿ ಒಂದಾಗಿದೆ. ಈ ತಿಂಗಳ ಅಂತ್ಯದಲ್ಲಿಯೇ ಅಂದರೆ ಜೂನ್ ತಿಂಗಳ ಕೊನೆಯಲ್ಲೇ ಇದರ ಅವಧಿ ಅಂತ್ಯವಾಗಲಿದೆ.
ಈ ಹಿಂದೆ ಅಂತ್ಯವಾಗಿದ್ದ ಎಫ್ಡಿ ಯೋಜನೆ ಇದಾಗಿದ್ದು ಎಸ್ಬಿಐ ಮತ್ತೆ ಆರಂಭ ಮಾಡಿದೆ. ಎಸ್ಬಿಐ ವೆಬ್ಸೈಟ್ ಪ್ರಕಾರ, ಈ 400-ದಿನಗಳ ಅಮೃತ ಕಲಶ ಎಫ್ಡಿ ಗ್ರಾಹಕರಿಗೆ ಶೇಕಡ 7.1 ಆಗಿದೆ. ಹಿರಿಯ ನಾಗರಿಕರಿಗೆ ಶೇಕಡ 7.6ರಷ್ಟು ಬಡ್ಡಿದರ ಇದೆ. ಎಸ್ಬಿಐ ವೆಬ್ಸೈಟ್ ಪ್ರಕಾರ, "400 ದಿನಗಳ ಎಫ್ಡಿ (ಅಮೃತ ಕಲಶ) ಬಡ್ಡಿದರ ಶೇಕಡ 7.10 ಆಗಿದೆ. ಹಿರಿಯ ನಾಗರಿಕರಿಗೆ ಶೇಕಡ 7.60 ಆಗಿದೆ," ಎಂದು ಉಲ್ಲೇಖ ಮಾಡಲಾಗಿದೆ.
ಎರಡೂ ಎಫ್ಡಿ ಯೋಜನೆಗಳ ಕೊನೆಯ ದಿನಾಂಕ
ಎಸ್ಬಿಐ ವಿಕೇರ್ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2023 ರವರೆಗೆ ವಿಸ್ತರಿಸಲಾಗಿದೆ. ಪ್ರಸ್ತುತ ಈ ಯೋಜನೆಗೆ ಹೊಸದಾಗಿ ಹೂಡಿಕೆ ಮಾಡಬಹುದಾಗಿದೆ ಅಥವಾ ಮೆಚ್ಯೂರಿಟಿ ಆದ ಡೆಪಾಸಿಟ್ಗಳ ಅಪ್ಡೇಟ್ಗೆ ಅವಕಾಶವಿದೆ. ಎಸ್ಬಿಐ ವಿಕೇರ್ ಬಡ್ಡಿದರ ಶೇಕಡ 7.50 ಆಗಿದೆ. ಇನ್ನು ಎಸ್ಬಿಐ ಅಮೃತ ಕಲಶ ವಿಶೇಷ ಫಿಕ್ಸಿಡ್ ಡೆಪಾಸಿಟ್ (ಎಫ್ಡಿ) ಯೋಜನೆಯನ್ನು ಕೂಡಾ ವಿಸ್ತರಣೆ ಮಾಡಲಾಗಿದೆ.
ಈ ಹಿಂದೆ ಎಸ್ಬಿಐ ಅಮೃತ ಕಲಶ ವಿಶೇಷ ಯೋಜನೆಯ ಅವಧಿ ಕೊನೆಯಾದ ಬಳಿಕ ಮತ್ತೆ ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಆದರೆ ಈಗ ಆಗಸ್ಟ್ 15, 2023ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಬ್ಯಾಂಕ್ ಫೆಬ್ರವರಿಯಲ್ಲಿ ಹೊಸದಾಗಿ ಈ ಯೋಜನೆಯನ್ನು ಆರಂಭ ಮಾಡಿದೆ. ಆರಂಭದಲ್ಲಿ ಫೆಬ್ರವರಿ 15ರಿಂದ ಮಾರ್ಚ್ 31ರವರೆಗೆ ಇತ್ತು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications