Adi Shankaracharya Statue Cost: 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಗೆ ತಗುಲಿದ ವೆಚ್ಚವೆಷ್ಟು?

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 8ನೇ ಶತಮಾನದ ಹಿಂದೂ ತತ್ವಜ್ಞಾನಿ ಮತ್ತು ಸಂತ ಆದಿ ಶಂಕರಾಚಾರ್ಯರ 108 ಅಡಿ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಈ "ಏಕತೆಯ ಪ್ರತಿಮೆ"ಯು ನರ್ಮದಾ ನದಿಯ ಮೇಲಿರುವ ಮಂಧಾತ ಬೆಟ್ಟದ ಮೇಲೆ ಇದೆ.

ಈ ಪ್ರತಿಮೆಯು ಕೇವಲ ಭೌತಿಕ ರಚನೆಯಲ್ಲ. ಬದಲಾಗಿ ಸಂತನ ಬೋಧನೆಗಳನ್ನು ಪ್ರತಿಬಿಂಬಿಸುತ್ತದೆ. ಇದು ಆದಿ ಶಂಕರಾಚಾರ್ಯರ ಮೂಲ ಕಾರ್ಯವನ್ನು ಸ್ಮರಿಸುತ್ತದೆ. ಈ ಅಸಾಧಾರಣ ಪ್ರತಿಮೆಯನ್ನು ರಚಿಸುವ ಯೋಜನೆಯನ್ನು ಆಚಾರ್ಯ ಶಂಕರ್ ಸಾಂಸ್ಕೃತಿಕ ಏಕತಾ ನ್ಯಾಸ್ ಮತ್ತು ಮಧ್ಯಪ್ರದೇಶ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮಾರ್ಗದರ್ಶನದಲ್ಲಿ ರಚಿಸಲಾಗಿದೆ.

108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಗೆ ತಗುಲಿದ ವೆಚ್ಚವೆಷ್ಟು?

ಇದು ನರ್ಮದಾ ನದಿಯ ದಡದಲ್ಲಿರುವ ಓಂಕಾರೇಶ್ವರದ ಮಾಂಧಾತ ಪರ್ವತದ ಮೇಲೆ ನೆಲೆಗೊಂಡಿದೆ. ಇದನ್ನು ಬಹು ಲೋಹಗಳ ಸಂಯೋಜನೆಯಿಂದ ತಯಾರಿಸಲಾಗಿದೆ. ಪ್ರತಿಮೆಯು 54 ಅಡಿ ಎತ್ತರದಲ್ಲಿದೆ. ಇದನ್ನು "ಏಕತ್ಮಾತಾ ಕಿ ಪ್ರತಿಮಾ" (ಏಕತ್ವದ ಪ್ರತಿಮೆ) ಎಂದು ಹೆಸರಿಸಲಾಗಿದೆ.

ಈ ಪ್ರತಿಮೆಯ ವೆಚ್ಚ ಎಷ್ಟಿದೆ?

ಓಂಕಾರೇಶ್ವರವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶಿವನಿಗೆ ಸಮರ್ಪಿತವಾದ ಪವಿತ್ರ ಕ್ಷೇತ್ರಗಳಿಗೆ ನೆಲೆಯಾಗಿದೆ. ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಈ ಹಿಂದೆ ಓಂಕಾರೇಶ್ವರದಲ್ಲಿರುವ ವಸ್ತುಸಂಗ್ರಹಾಲಯದ ಜೊತೆಗೆ ಆದಿ ಶಂಕರಾಚಾರ್ಯರ ಪ್ರತಿಮೆಗಾಗಿ 2,141.85 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಿತ್ತು.

ಕೇರಳದಲ್ಲಿ ಜನಿಸಿದ ಶಂಕರಾಚಾರ್ಯರು ತಮ್ಮ ಬಾಲ್ಯದಲ್ಲಿ ಸನ್ಯಾಸ ಸ್ವೀಕರಿಸಿದ ನಂತರ ಓಂಕಾರೇಶ್ವರವನ್ನು ತಲುಪಿದರು. ಅಲ್ಲಿ ಅವರು ತಮ್ಮ ಗುರು ಗೋವಿಂದ ಭಗವತ್ಪಾದರನ್ನು ಭೇಟಿಯಾದರು. ಅವರು ನಾಲ್ಕು ವರ್ಷಗಳ ಕಾಲ ಈ ಧಾರ್ಮಿಕ ನಗರದಲ್ಲಿ ನೆಲೆಸುವ ಮೂಲಕ ವಿದ್ಯೆಯನ್ನು ಪಡೆದರು ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶಂಕರಾಚಾರ್ಯರು ಅದ್ವೈತ ವೇದಾಂತ ತತ್ತ್ವವನ್ನು ಜನರಿಗೆ ಹರಡಲು 12 ನೇ ವಯಸ್ಸಿನಲ್ಲಿ ಓಂಕಾರೇಶ್ವರದೊಂದಿಗೆ ದೇಶದ ಇತರ ಭಾಗಗಳಿಗೂ ಅವರು ತೆರಳಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+