ಶ್ರೀಮಂತರು ಹೃದಯಹೀನರೆ? ಬಹುತೇಕ ಶ್ರೀಮಂತರು ಏಕೆ ದ್ವೀಪಗಳಂತೆ ಬದುಕುತ್ತಿರುತ್ತಾರೆ? ಇಂಥ ಹಲವು ಪ್ರಶ್ನೆಗಳಿಗೆ ಕ್ರಿಸ್ ರಯಾನ್ ಉತ್ತರ ನೀಡಿದ್ದಾರೆ. ಅವರು ಒಂದು ಪುಸ್ತಕ ಬರೆದಿದ್ದಾರೆ. ಅದರ ಹೆಸರು 'Civilized to Death: the price of progress'. ಬಹಳ ಆಸಕ್ತಿಕರವಾದ ವಿಷಯಗಳನ್ನು ಅವರು ತಿಳಿಸಿದ್ದು, ಶ್ರೀಮಂತಿಕೆಯ ಸೈಡ್ ಎಫೆಕ್ಟ್ ಗಳನ್ನು ವಿವರಿಸಿದ್ದಾರೆ.
* ಶ್ರೀಮಂತಿಕೆ ಬಂದಾಕ್ಷಣ ದೊಡ್ಡ ಮನೆ, ದೊಡ್ಡ ಜಾಗ, ದೊಡ್ಡ- ದೊಡ್ಡ ಕಾಂಪೌಂಡ್ ಗಳನ್ನು ನಿರ್ಮಿಸಿಕೊಳ್ಳುವುದನ್ನು ನೋಡುತ್ತೇವೆ. ಅಷ್ಟೇ ಏಕೆ, ದೊಡ್ಡ ಕಾರು ಮತ್ತು ಅದಕ್ಕೆ ಕಪ್ಪು ಗಾಜು ಇರುತ್ತದೆ. ಏಕೆಂದರೆ ಇತರರಿಂದ ನಾವು ಬೇರೆ ಎಂಬ ಭಾವವು ಅವರನ್ನು ಸದಾ ಬೆನ್ನಟ್ಟುತ್ತದೆ. ಆ ಕಾರಣಕ್ಕೆ ಜನರಿಗಿಂತ ಹೆಚ್ಚಾಗಿ ವಸ್ತುಗಳ ಜತೆ ಸಮಯ ಕಳೆಯುವಂತಾಗುತ್ತದೆ.

* ಎದುರಿಗೆ ಇರುವ ವ್ಯಕ್ತಿಗಳ ಭಾವನಾತ್ಮಕ ಸಂಗತಿಗಳು ಮುಖ್ಯ ಎನಿಸುವುದಿಲ್ಲ.
* ಇನ್ನು ಶ್ರೀಮಂತರು ಉಳಿದುಕೊಳ್ಳುವುದು ಬಹುತೇಕ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ. ಅಂಥ ವಾತಾವರಣದಲ್ಲಿ ಒಬ್ಬರು ಮತ್ತೊಬ್ಬರ ಜತೆಗೆ ಮಾತನಾಡುವುದನ್ನು ನೋಡುವುದಕ್ಕೆ ಸಿಗುತ್ತದೆಯೇ?
* ಸಾಮಾನ್ಯ ಜನರು ಬಳಸುವ ವಸ್ತುಗಳು ಹಾಗೂ ಶ್ರೀಮಂತರು ಬಳಸುವ ವಸ್ತುಗಳು ಎಂಬ ವ್ಯತ್ಯಾಸ ಕೂಡ ತುಂಬ ಸ್ಪಷ್ಟವಾಗಿ ಕಾಣುತ್ತದೆ.
* ವಯಸ್ಸಾದವರು ರಸ್ತೆ ದಾಟುತ್ತಿದ್ದರೆ ಸಾಮಾನ್ಯ ಕಾರಿನಲ್ಲಿ ಸಾಗುತ್ತಿರುವವರು ನಿಲ್ಲಿಸುತ್ತಾರೆ. ಆದರೆ ದುಬಾರಿ ಕಾರಿನಲ್ಲಿ ಹೋಗುತ್ತಿರುವವರಿಗೆ ಆ ಯೋಚನೆ ಬರುವುದಿಲ್ಲ ಎನ್ನುತ್ತಾರೆ ರಯಾನ್.
* ಒಂದು ಪೆಗ್ ವೈನ್ ಕುಡಿಯುವುದರಿಂದ ಹೆಚ್ಚು ಹಾನಿಯಾಗಲಿಕ್ಕಿಲ್ಲ. ಆದರೆ ಹನ್ನೆರಡು ಬಾಟಲಿ ವೈನ್ ಇದ್ದರೆ... ಅದೇ ರೀತಿ ನಿಯಮಿತ ಪ್ರಮಾಣದಲ್ಲಿ ಇದ್ದರೆ ಔಷಧ, ಇಲ್ಲದಿದ್ದರೆ ಅಪಾಯಕಾರಿ ರಾಸಾಯನಿಕ ಆಗುತ್ತದೆ. ಹಣವೂ ಅಷ್ಟೇ, ಅಳತೆಗೆ ಮೀರಿದರೆ ಆಪತ್ತು.
* ಹಾಗಂತ ಹಣ ದುಡಿಯುವುದು ತಪ್ಪಲ್ಲ. ಅದನ್ನು ಅಗತ್ಯ ಇರುವವರ ಜತೆಗೆ ಹಂಚಿಕೊಳ್ಳುವುದರಿಂದ ಸಂತೋಷವಾಗಿ ಇರಬಹುದು.
* ಹಣಕ್ಕೂ ಹಾಗೂ ಸಂತೋಷಕ್ಕೂ ಸಂಬಂಧ ಇದೆಯಾ? ಹಣವೇ ಎಲ್ಲ ಆಗಿದ್ದರೆ ಶ್ರೀಮಂತರೆಲ್ಲ ಸಂತೋಷವಾಗಿ ಇರಬೇಕಿತ್ತು. ಇನ್ನು ಅದರಿಂದಲೇ ಆರೋಗ್ಯ, ಆಯುಷ್ಯ್ ಹೆಚ್ಚಾಗಿದೆಯಾ ಎಂದು ಗಮನಿಸಿದರೆ ಅದೂ ಇಲ್ಲ.
* ಶ್ರೀಮಂತರೆಲ್ಲ ಒಂದೇ ಎಂದು ಗೆರೆ ಕೊಯ್ದಂತೆ ಹೇಳಲು ಆಗುವುದಿಲ್ಲ. ಯಾರಿಗೆ ಸಂಪತ್ತನ್ನು ನಿರ್ವಹಿಸುವುದು ಹೇಗೆ ಎಂಬುದು ಗೊತ್ತಿರುತ್ತದೋ ಅಂಥವರಿಗೆ ಸಮಸ್ಯೆ ಆಗುವುದಿಲ್ಲ.
* ಆದರೆ, ಗುಂಪಿನಲ್ಲಿ ಒಬ್ಬರಾಗಿ ಇರುವುದು ಶ್ರೀಮಂತ ವರ್ಗಕ್ಕೆ ಸಾಧ್ಯವಾಗುವುದಿಲ್ಲ. ಗಮನಿಸಿ ನೋಡಿ, ಗುಂಪಿನಿಂದ ಹೊರಬಂದ ಪ್ರಾಣಿ- ಪಕ್ಷಿ ಬೇಟೆಗಾರನ ಪಾಲಿಗೆ ಸುಲಭ ಬೇಟೆ. ಅದರರ್ಥ ಸಾವು. ಭಾವನಾತ್ಮಕವಾಗಿ ಗುಂಪಿನಿಂದ ಹೊರಬಂದ ವ್ಯಕ್ತಿಗೆ ಅದು ಸಾವಿಗೆ ಸಮಾನವಾದದ್ದು. ಶ್ರೀಮಂತಿಕೆ ಎಂಬುದು ಗುಂಪಿನಿಂದ ಬೇರ್ಪಡಿಸುತ್ತದೆ.
* ತುಂಬ ದುಡ್ಡು ಬಂದರೆ ಅದರಿಂದ ವಿಪರೀತ ಖಾಸಗಿತನ ಖರೀದಿ ಮಾಡುತ್ತೀವಿ. ಯಾರಿಗೂ ತಲುಪಲಾರದಂತೆ, ಸಿಗಲಾರದಂತೆ ಆಗುತ್ತೇವೆ.
* ಬಹಳ ವರ್ಷ ಬದುಕಿರಬೇಕು ಅಂದರೆ ಸಂತೋಷವಾಗಿರಬೇಕು. ಸುತ್ತಲೂ ನಮ್ಮವರು ಅಂತಿರಬೇಕು. ಅದು ಕೇವಲ ಹಣದಿಂದಷ್ಟೇ ಸಾಧ್ಯವಿಲ್ಲ. ಸಂಬಂಧ, ಜನಸಂಪರ್ಕವೂ ಮುಖ್ಯ. ಆದರೆ ಅದು ಮುಖ್ಯ ಎಂಬ ಭಾವನೆ ಮೂಡುವುದಿಲ್ಲ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications