ಬೆಂಗಳೂರು, ಏಪ್ರಿಲ್ 17: ಭಾರತ ಮಾತ್ರವಲ್ಲ ಇಡೀ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿರುವವರು ಮುಕೇಶ್ ಅಂಬಾನಿ. ಇತ್ತೀಚೆಗೆ ತಮ್ಮ ಮಗನ ಮದುವೆಯನ್ನು ಕೂಡ ನೂರಾರು ಕೋಟಿ ರೂ. ಖರ್ಚು ಮಾಡಿ ಬಹಳ ಅದ್ದೂರಿಯಾಗಿ ಮಾಡಿದ್ದರು.
ಮುಕೇಶ್ ಅಂಬಾನಿ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ. ಕುಟುಂಬದ ಆಸ್ತಿ ವಿಭಜನೆಯಾದ ಬಳಿಕ ಅನಿಲ್ ಅಂಬಾನಿ ಅವರು ಆರ್ಥಿಕವಾಗಿ ಸಾಲದ ಸುಳಿಗೆ ಸಿಲುಕಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದರು. ಆದರೆ, ಇದೀಗ ಅನಿಲ್ ಅಂಬಾನಿ ಅವರ ಕಂಪೆನಿಗಳು ಕೂಡ ಆರ್ಥಿಕವಾಗಿ ನಿಧಾನಕ್ಕೆ ಚೇತರಿಕೆ ಕಾಣುತ್ತಿದೆ. ಅದರಲ್ಲಿಯೂ ಅನಿಲ್ ಅಂಬಾನಿ ಅವರ ರಿಲಯನ್ಸ್ ಪವರ್ ಕಂಪೆನಿ ಷೇರುಗಳು ಏರುಗತಿಯಲ್ಲಿವೆ.

2020ರ ಮಾರ್ಚ್ 27ರಂದು ರಿಲಯನ್ಸ್ ಷೇರು ಬೆಲೆ 1.13ರಷ್ಟು ಇತ್ತು. ರಿಲಯನ್ಸ್ನ ಇತ್ತೀಚಿನ ಫೈಲಿಂಗ್ ಮಾಹಿತಿಯಂತೆ ರಿಲಯನ್ಸ್ ಪವರ್ ಕಂಪನಿಯು ಜೆಎಸ್ಡಬ್ಲ್ಯು ರಿನಿಯ್ಯುವೇಬಲ್ ಎನರ್ಜಿಯಿಂದ 132.39 ಕೋಟಿ ರೂ. ಪಡೆದುಕೊಂಡಿದೆ. ಈ ಡೀಲ್ ಪ್ರಕಾರ, ರಿಲಯನ್ಸ್ ಪವರ್ ಮಹಾರಾಷ್ಟ್ರದ ವಾಶ್ಪೇಟ್ನ 45 ಮೆ.ವ್ಯಾ. ಪವರ್ ಪ್ರಾಜೆಕ್ಟ್ನ ಡೀಲಿಂಗ್ ಆಗಿದೆ.
ಜೆಎಸ್ಡಬ್ಲ್ಯು ಎನರ್ಜಿಯ 7.2 ಜಿಡಬ್ಲ್ಯು, 206 ಜಿಡಬ್ಲ್ಯು ಪವನ ಹಾಗೂ ಜಲವಿದ್ಯುತ್ನಂತ ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಇದು ಒಟ್ಟು 12.5 ಜಿಡ್ಲ್ಯು ಲಾಕ್-ಇನ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದರ ಹೊರತಾಗಿ ಕಂಪೆನಿಯು ಬ್ಯಾಟರಿ ಶಕ್ತಿಯ ಶೆಖರಣಾ ವ್ಯವಸ್ಥೆ ಮತ್ತು ಹೈಡ್ರೋ ಪಂಪ್ಡ್ ಸ್ಟೋರೇಜ್ ಯೋಜನೆ ಮೂಲಕ 3.4ಜಿಡಬ್ಲ್ಯುಎಚ್ ಲಾಕ್-ಇನ್ ಇಂಧನದ ಶೇಖರಣಾ ಸಾಮರ್ಥ್ಯವನ್ನು ಕೂಡ ಹೊಂದಿದೆ.
ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಡಿಬಿಎಸ್ ಬ್ಯಾಂಕ್ನ ಸಾಲವನ್ನು ತೀರಿಸಿದ ಬಳಕ ಈ ದೊಡ್ಡ ಮೊತ್ತದ ಡೀಲ್ ನಡೆದಿದೆ. ಈ ಎಲ್ಲ ಬ್ಯಾಂಕ್ಗಳು ಸುಮಾರು 400 ಕೋಟಿ ರೂ.ನಷ್ಟು ನೀಡಿದ್ದು, ಆ ಪೈಕಿ ಸಾಲದ ಶೇ.30-35ರಷ್ಟು ಪ್ರಿನ್ಸಿಪಲ್ ಮೊತ್ತವನ್ನು ಪಾವತಿಸಿದೆ. ಅಲ್ಲದೆ, ಅನಿಲ್ ಅಂಬಾನಿಯ ಕಂಪೆನಿಯು ಜೆಸಿ ಫ್ಲವರ್ಸ್ನ 2100 ಕೋಟಿ ರೂ. ಸಾಲ ವಿಲೇವಾರಿ ಮಾಡುವುದಕ್ಕೂ ಮುಂದಾಗಿರುವುದಾಗಿ ವರದಿಯಾಗಿದೆ.
ಈ ವರ್ಷದಲ್ಲಿ ರಿಲಯನ್ಸ್ ಪವರ್ ತನ್ನ ಅರುಣಾಚಲ ಪ್ರದೇಶಸದ ಕಲೈನ 1200 2ನೇ ಹಂತದ ಜಲ ವಿದ್ಯುತ್ ಯೋಜನೆಯನ್ನು ಕೂಡ 128.39 ಕೋಟಿ ರೂ.ಗೆ ಟಿಎಚ್ಡಿಸಿ ಇಂಡಿಯಾಕ್ಕೆ ಮಾರಾಟ ಮಾಡುವ ಒಪ್ಪಂದಕ್ಕೂ ಸಹಿ ಮಾಡಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications