ನವದೆಹಲಿ, ಏಪ್ರಿಲ್ 3: 2016ರಲ್ಲಿ ನೋಟು ಅಮಾನ್ಯೀಕರಣದ ಬಳಿಕ ಸಂಚಲನ ಸೃಷ್ಟಿಯಾಗಿತ್ತು. ಈ ಆದೇಶ ಬಳಿಕ 1000 & 500 ಮುಖಬೆಲೆ ನೋಟು ಮಾಯವಾಗಿದ್ದವು. ಆಗ ಹುಟ್ಟಿಕೊಂಡ ₹2000 ಮುಖಬೆಲೆ ನೋಟು ಕೂಡ ಈಗ ತೆರೆಮರೆಗೆ ಸರಿಯುತ್ತಿದೆ. ಈಗಾಗಲೇ ಭಾಗಶಃ ₹2000 ಮುಖಬೆಲೆಯ ನೋಟುಗಳು ವಾಪಸ್ ಬ್ಯಾಂಕ್ಗೆ ಬಂದಿವೆಯಂತೆ.
ಕಳೆದ ವರ್ಷ 2023ರ ಮೇ 19 ರಂದು ಆರ್ಬಿಐ ಮಹತ್ವದ ಘೋಷಣೆ ಹೊರಡಿಸಿತ್ತು. ಹೀಗೆ ಒಟ್ಟು ₹3.56 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನ ಚಲಾವಣೆಯಿಂದ ಹಿಂಪಡೆಯುವುದಾಗಿ 2023ರ ಮೇ 19ರಂದು ಆರ್ಬಿಐ ಘೋಷಣೆ ಮಾಡಿತ್ತು. 2,000 ರೂಪಾಯಿ ಕರೆನ್ಸಿ ನೋಟು ವಾಪಾಸ್ ಪಡೆಯುವ ಘೋಷಣೆ ಹೊರಡಿಸಿದ ನಂತರ ಜನ ಕೂಡ ಮುಗಿಬಿದ್ದು ನೋಟನ್ನು ತಂದು ಬ್ಯಾಂಕ್ಗೆ ಜಮೆ ಮಾಡುತ್ತಿದ್ದಾರೆ. ಈವರೆಗೂ ಸಾಕಷ್ಟು ಪ್ರಮಾಣದಲ್ಲಿ, 2,000 ರೂಪಾಯಿ ಮುಖಬೆಲೆ ನೋಟುಗಳು ಬ್ಯಾಂಕ್ ಸೇರಿವೆ.

ಶೇ. 97ರಷ್ಟು ನೋಟು ವಾಪಸ್
ಇದೀಗ ಸಿಕ್ಕಿರುವ ಲೆಕ್ಕಾಚಾರದ ಪ್ರಕಾರ ₹2 ಸಾವಿರ ಮುಖಬೆಲೆಯ ಒಟ್ಟು ಶೇ. 97.69 ರಷ್ಟು ನೋಟುಗಳು ಬ್ಯಾಂಕ್ಗೆ ಮರಳಿ ಬಂದಿವೆ. ಇದೀಗ ಇನ್ನೂ ₹8,202 ಕೋಟಿ ಮೌಲ್ಯದ ನೋಟು ಸಾರ್ವಜನಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. 2016ರಲ್ಲಿ ಘೋಷಣೆ ಮಾಡಿದಂತೆ ದಿಢೀರ್ ನೋಟ್ ಬ್ಯಾನ್ ಮಾಡಿರಲಿಲ್ಲ ಆರ್ಬಿಐ. ಹೀಗಾಗಿ, ಜನರಿಗೆ ಅನುಕೂಲ ಆಗಲಿ ಎಂದು ಸಾಕಷ್ಟು ಸಮಯ ಆರ್ಬಿಐ ನೀಡಿದೆ. ಇದೇ ಕಾರಣಕ್ಕೆ ಜನರು ಕೂಡ ಆರಾಮವಾಗಿ ಬಂದು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ವಾಪಸ್ ನೀಡಿದ್ದಾರೆ.
19 ಪ್ರಾದೇಶಿಕ ಕಚೇರಿಗಳಲ್ಲಿ ಅವಕಾಶ
ಇದೀಗ ಆರ್ಬಿಐ ನೀಡಿರುವ ಮಾಹಿತಿ ಪ್ರಕಾರ ₹2 ಸಾವಿರ ಮುಖಬೆಲೆಯ ಒಟ್ಟು ಶೇ. 97.69 ರಷ್ಟು ನೋಟುಗಳು ಬ್ಯಾಂಕ್ಗೆ ಮರಳಿ ಬಂದಿವೆ. ಈಗ ಬಾಕಿ ಇರುವ ₹8,202 ಕೋಟಿ ಮೌಲ್ಯದ ನೋಟು ಹಿಂದಿರುಗಿಸಲು ಇನ್ನೂ ಕಾಲಾವಕಾಶ ಇದೆ. ಆ ಪ್ರಕಾರ ಬ್ಯಾಂಕ್ಗಳಲ್ಲಿ ಠೇವಣಿ ಇಡಲು & ಬೇರೆ ಮುಖಬೆಲೆಯ ನೋಟುಗಳ ಜೊತೆ ಬದಲಾಯಿಸಿಕೊಳ್ಳಲು ವ್ಯವಸ್ಥೆ ಮಾಡಿದೆ ಆರ್ಬಿಐ. ಇದಕ್ಕಾಗಿ ಆರ್ಬಿಐನ ಒಟ್ಟಾರೆ 19 ಪ್ರಾದೇಶಿಕ ಕಚೇರಿಗಳಲ್ಲಿ, ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಅಂಚೆ ಮೂಲಕವು ಕೂಡ ಪ್ರಾದೇಶಿಕ ಕಚೇರಿಗಳಿಗೆ ನೋಟುಗಳನ್ನು ಕಳುಹಿಸಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
2016ರಲ್ಲಿ 500 ಮತ್ತು 1000ರ ನೋಟ್ ಅಮಾನ್ಯ ಅಥವಾ ನೋಟ್ ಬ್ಯಾನ್ ನಂತರದಲ್ಲಿ 2000 ಮುಖಬೆಲೆ ನೋಟ್ ಚಲಾವಣೆಗೆ ಬಂತು. ಆರ್ಬಿಐ ದೇಶದಲ್ಲಿ ಚಲಾವಣೆ ಆಗುತ್ತಿದ್ದ, 2000 ರೂಪಾಯಿ ನೋಟು ಚಲಾವಣೆ ಸ್ಥಗಿತಗೊಳಿಸಿದೆ. ವಾಪಸ್ ಪಡೆಯುವುದಕ್ಕೆ, ಬ್ಯಾಂಕ್ಗಳಿಗೆ ಆರ್ಬಿಐ ಆದೇಶ ನೀಡಿತ್ತು. ಈ ಕಾರಣಕ್ಕೆ ಭಾಗಶಃ ನೋಟುಗಳು ವಾಪಸ್ ಬಂದಿವೆ, ಇನ್ನೂ ಬಾಕಿ ಉಳಿದ ನೋಟುಗಳು ಕೂಡ ವಾಪಸ್ ಬರುವ ನಿರೀಕ್ಷೆ ಇದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications