

| 91.968 | ![]() | United States Dollar |
ಆರ್ ಬಿಐ ಈ ಕಠಿಣ ಕ್ರಮ ಕೈಗೊಂಡರೆ ಮುಂದಿನ ಅಕ್ಷಯ ತದಿಗೆ ಗ್ರಾಹಕರ ಪಾಲಿಗೆ ಹೆಚ್ಚಿನ ಲಾಭ ತರಲು ಸಾಧ್ಯವಿಲ್ಲ. ಚಿನ್ನದ ಆಮದು ನಿಯಂತ್ರಿಸಲು ಬ್ಯಾಂಕುಗಳಲ್ಲಿ ಚಿನ್ನದ ನಾಣ್ಯ ಮಾರಾಟವನ್ನು ನಿಷೇಧಿಸಲು ರಿಸರ್ವ್ ಬ್ಯಾಂಕ್ ಚಿಂತನೆ ನಡೆಸಿದೆ.
ಚಾಲ್ತಿ ಖಾತೆ ಕೊರತೆ ವಿಸ್ತರಣೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದ್ದರಿಂದ ಚಿನ್ನದ ಆಮದು ಹೆಚ್ಚಾಗಿತ್ತು. ಇದನ್ನು ಸರಿದೂಗಿಸಲಾಗಿಸಲು ನಾಣ್ಯ ಮಾರಾಟ ನಿಷೇಧಕ್ಕೆ ಆರ್ ಬಿಐ ಚಿಂತಿಸಿದೆ.
2010 ರಲ್ಲಿ 963 ಟನ್ ಗಳಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. 2011ರಲ್ಲಿ 878 ಟನ್ ಗಳಷ್ಟು ಮಾತ್ರ ಆಮದಾಗಿತ್ತು. 2011ರಲ್ಲಿ ಬ್ಯಾಂಕ್ ಗಳಲ್ಲಿ ಚಿನ್ನದ ನಾಣ್ಯ ಮಾರಾಟ ಶೇ 33 ರಷ್ಟು ಏರಿಕೆ ಕಂಡಿತ್ತು.
ಭಾರತದಲ್ಲಿ ಎಸ್ ಬಿಐ, ಐಸಿಐಸಿಐ, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗಳ ಮೂಲಕ ಶೇ 70 ರಷ್ಟು ಚಿನ್ನದ ನಾಣ್ಯ ಮಾರಾಟ ನಡೆಯುತ್ತಿದೆ. ಚಿನ್ನದ ನಾಣ್ಯ ವ್ಯಾಪಾರದಿಂದ ಹೆಚ್ಚಿನ ಲಾಭವೇನಿಲ್ಲ ಎಂದು ಬ್ಯಾಂಕುಗಳು ಹೇಳಿದೆ.
ಆದರೆ, ಚಿನ್ನದ ನಾಣ್ಯ ಮಾರಾಟದಿಂದ ಬ್ಯಾಂಕ್ ಗಳು 150 ಕೋಟಿ ರು ಲಾಭ ಗಳಿಸುತ್ತಿದ್ದರೂ ಇದು ಬ್ಯಾಂಕುಗಳ ಕೋರ್ ಬಿಸಿನೆಸ್ ಅಲ್ಲ ಆದ್ದರಿಂದ ನಾಣ್ಯ ಮಾರಾಟ ಸ್ಥಗಿತಗೊಳಿಸುವುದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಆರ್ ಬಿಐ ಹೇಳಿದೆ.
ಇನ್ನೊಂದು ಕೋನದಲ್ಲಿ ನೋಡುವುದಾದರೆ ಬ್ಯಾಂಕುಗಳು ಉಳಿತಾಯವನ್ನು ಬಂಡವಾಳವನ್ನಾಗಿಸುವುದು ಹಾಗೂ ಆರ್ಥಿಕ ಚಟುವಟಿಕೆ ಪ್ರಚಾರ ಮಾಡುವುದು ಮುಖ್ಯವಾಗಿದೆ. ಚಿನ್ನದ ನಾಣ್ಯ ಮಾರಾಟ, ಬ್ಯಾಂಕಿನ ಕೆಲಸವಲ್ಲ ಎಂದು ಆರ್ ಬಿಐ ತೀರ್ಮಾನಿಸಿದೆ. ಆರ್ ಬಿಐ ನಿರ್ಧಾರ ಬರೀ ಬ್ಯಾಂಕುಗಳಿಗೆ ಸೀಮಿತವಾಗಿದೆಯೇ ಅಥವಾ ಪೋಸ್ಟ್ ಆಫೀಸ್ ಗಳಿಗೂ ಅನ್ವಯಿಸುತ್ತದೆಯೇ? ಗೊತ್ತಿಲ್ಲ. ಆರ್ ಬಿಐ ನಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications
