
ಕೇಂದ್ರ ಸರ್ಕಾರ ಎಫ್ಡಿಐ, ಡೀಸೆಲ್ ಬೆಲೆ ಏರಿಕೆ ಕ್ರಮಗಳನ್ನು ಕೈಗೊಂಡಿ ರುವ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ತೆಗೆದುಕೊಂಡಿರುವ ಈ ನೀತಿಯಿಂದ ಆರ್ಥಿಕ ವ್ಯವಸ್ಥೆಗೆ ಸುಮಾರು 17 ಸಾವಿರ ಕೋಟಿ ರೂಪಾಯಿ ಹರಿದು ಬರಲಿದೆ. ರಾಷ್ಟ್ರದ ಅರ್ಥ ವ್ಯವಸ್ಥೆಯಲ್ಲಿ ಉತ್ಪಾದನಾ ವಿಭಾಗಗಳಿಗೆ ಸಾಕಾಗುವಷ್ಟು ಹಣದ ಹರಿವನ್ನು ನೋಡಿಕೊಳ್ಳುವುದು ಆರ್ಬಿಐ ಪ್ರಥಮ ಆದ್ಯತೆಯಾಗಿದೆ.
ಬಡ್ಡಿದರ ಇಳಿಕೆ ಸಾಧ್ಯವೇ?: ಸಾಲು ಸಾಲು ಹಬ್ಬದ ಋತು ಆರಂಭವನ್ನು ಗಮನಿಸಿ ಎಸ್ ಬಿಐ, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್ ಗಳು ವಿಶೇಷ ಕೊಡುಗೆಗಳನ್ನು ತನ್ನ ಗ್ರಾಹಕರಿಗೆ ಈಗಾಗಲೇ ನೀಡಿದೆ. ಆರ್ ಬಿಐ ನೀತಿಯಿಂದ ಹರಿದು ಬರುವ ಸುಮಾರು 2,000 ಕೋಟಿ ಇಟ್ಟುಕೊಂಡು ಬಡ್ಡಿದರ ಇಳಿಕೆ ಮಾಡಲು ಯಾವ ಬ್ಯಾಂಕು ಕೂಡಾ ಮುಂದಾಗುವ ಸಾಧ್ಯತೆ ಕಮ್ಮಿ ಎನ್ನಬಹುದು.
ಬೇಕಾದರೆ ಇನ್ನಷ್ಟು ಗ್ರಾಹಕ ಸ್ನೇಹಿ ಆಫರ್ ಗಳು ಹೆಚ್ಚಾಗಬಹುದು. ಎಚ್ ಡಿಎಫ್ ಸಿ, ಐಸಿಐಸಿಐ ಸೇರಿದಂತೆ ಕೆಲ ಪ್ರಮುಖ ಖಾಸಗಿ ಬ್ಯಾಂಕುಗಳು ಮಾತ್ರ ಬಡ್ಡಿದರ ಇಳಿಕೆ ಬಗ್ಗೆ ಮಾತನಾಡಿದೆ.
ಮೂಲಾಂಶ ಕಡಿತದಿಂದ ಸಿಆರ್ಆರ್ ಪ್ರಮಾಣ ಶೇ.4.5ಕ್ಕೆ ಇಳಿದರೆ, ಬ್ಯಾಂಕ್ಗಳಿಗೆ ನೀಡುವ ಸಾಲದ ರೆಪೋದರದಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಹೀಗಾಗಿ, ರೆಪೋದರ ಶೇ.8 ರಷ್ಟಿದೆ. ಬ್ಯಾಂಕ್ಗಳಿಂದ ಪಡೆಯುವ ಸಾಲದ ಹೆಚ್ಚುವರಿ ದ್ರವ್ಯತ್ವ ರಿವರ್ಸ್ ರೆಪೋದರವೂ ಶೇ. 7ರಷ್ಟೇ ನಿಂತಿದೆ.
ಹಣದುಬ್ಬರ ನಾಗಾಲೋಟವನ್ನು ಮುಂದುವರಿಸಿದ್ದು, ಬೆಲೆಏರಿಕೆ ಮತ್ತು ಹಣದುಬ್ಬರದ ನಿರೀಕ್ಷೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತಿರುವುದರಿಂದ ವಿತ್ತೀಯ ನೀತಿಯನ್ನು ಹಾಗೇ ಕಾಪಾಡಿಕೊಳ್ಳಲಾಗಿದೆ ಎಂದು ಗವರ್ನರ್ ಡಿ. ಸುಬ್ಬಾರಾವ್ ಹೇಳಿದ್ದಾರೆ.
ಜುಲೈನಲ್ಲಿ ಶೇ. 6.87 ರಷ್ಟಿದ್ದ ಹಣದುಬ್ಬರ ಆಧರಿಸಿದ ಸಗಟು ಬೆಲೆ ಆಗಸ್ಟ್ ತಿಂಗಳಿನಲ್ಲಿ ಶೇ.7.55ಕ್ಕೇರಿದೆ. ಸೆ.22ರಿಂದಲೇ ಸಿಆರ್ ಆರ್ ಕಡಿತವೂ ಜಾರಿಗೆ ಬರಲಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಆರ್ಬಿಐನ ಸಿಆರ್ಆರ್ ದರ ಕಡಿತಗೊಂಡಿರುವುದರಿಂದಾಗಿ ಬ್ಯಾಂಕ್ಗಳ ಸಾಲ ಪ್ರಮಾಣವೂ ಹೆಚ್ಚಾಗಲಿದೆ. ಇದರಿಂದ ಹೂಡಿಕೆ ಸುಧಾರಿಸಲಿದ್ದು ಪ್ರಗತಿಗೆ ಪೂರಕವಾಗಲಿದೆ
ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications