ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ ನೆಟ್ ಬ್ಯಾಕಿಂಗ್ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದರೂ ಕೆಲವೊಂದು ಕಡೆ ಅನಿವಾರ್ಯವಾಗಿ ಚೆಕ್ ಬಳಕೆ ಮಾಡಬೇಕಾಗುತ್ತದೆ.
ಚೆಕ್ ಬಳಕೆ ಕಡಿಮೆ ಯಾಗಿರುವುದರಿಂದ ಅದನ್ನು ಕಳೆದುಕೊಳ್ಳುವ ಸಂಭವೂ ಹೆಚ್ಚಾಗಿದೆ. ಎಲ್ಲೋ ಕೈ ತಪ್ಪಿ ಚೆಕ್ ಬುಕ್ ಇಟ್ಟು ಯಾರಾದರೂ ಗೋಲ್ ಮಾಲ್ ಮಾಡಿದರೆ ಎಂದು ಪರಿತಪಿಸುವುದನ್ನು ಕಂಡಿದ್ದೇವೆ. ಹಾಗಾದರೆ ಚೆಕ್ ಬುಕ್ ದುರ್ಬಳಕೆ ಅಥವಾ ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳುವುದುದು ಹೇಗೆ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆಲ್ಲ ಇಲ್ಲಿದೆ ಉತ್ತರ.[ಸೇವಿಂಗ್ ಅಕೌಂಟ್ ಗಿಂತ ಕರೆಂಟ್ ಅಕೌಂಟ್ ಹೇಗೆ ಭಿನ್ನ?]

* ಯಾವ ಕಾರಣಕ್ಕೂ ಎಲ್ಲರಿಗೂ ಕಾಣುವಂತೆ ಚೆಕ್ ಬುಕ್ ಇಡಬೇಡಿ. ಸುರಕ್ಷಿತ ಸ್ಥಳದಲ್ಲಿ ಚೆಕ್ ಬುಕ್ ಇಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕ್ಯಾನ್ಸಲ್ ಆದ ಚೆಕ್ ಗಳನ್ನು ಕಾಯ್ದಿರಿಸಿಕೊಳ್ಳುವುದು ಜಾಣ ನಡೆ.
* ಬ್ಯಾಂಕ್ ನಿಂದ ಚೆಕ್ ಬುಕ್ ಪಡೆದಾಗ ಯಾವೂದಾರೂ ಚೆಕ್ ಮಿಸ್ ಆಗಿದೆಯೇ? ಅಥವಾ ಹರಿದಿದೆಯೇ? ಎಂಬುದನ್ನು ಗಮನಿಸಿಕೊಳ್ಳಬೇಕಯ.
* ಯಾರಾಗಾದರೂ ಚೆಕ್ ನೀಡುವುದಕ್ಕಿಂತ ಮುಂಚಿತವಾಗಿ ಸಹಿ ಹಾಕಲು ಹೋಗಬೇಡಿ.
* ಕ್ಯಾನ್ಸಲ್ ಆದ ಚೆಕ್ ಗಳನ್ನು ನಾಶಮಾಡಿ. ಜತೆಗೆ ಅವುಗಳ ಅಂಕೆ ಮತ್ತು ಎಂಐಸಿಆರ್ ಕೋಡ್ ಒಂದೆಡೆ ಬರೆದಿಟ್ಟುಕೊಳ್ಳುವುದು ಒಳಿತು.
* ನಿಮ್ಮ ಬ್ಯಾಂಕ್ ಖಾತೆಯನ್ನು ಆಗಾಗ ಪರಿಶೀಲನೆ ಮಾಡುತ್ತಿರಿ.[ಅಕೌಂಟ್ ಕ್ಲೋಸ್ ಮಾಡುವ ಮುನ್ನ 6 ಅಂಶ ತಲೆಯಲ್ಲಿರಲಿ]
* ನೀವು ಹಣ ನೀಡುವ ವ್ಯಕ್ತಿಯ ಹೆಸರು ಬರೆದ ನಂತರ ಸಾಲಿನ ಕೊನೆಯವರೆಗೆ ಒಂದು ಗೆರೆ ಎಳೆಯಿರಿ. ಅಲ್ಲದೇ ಹೆಸರಿನ ಮಧ್ಯೆ ದೊಡ್ಡದಾಗಿ ಜಾಗ ಬಿಡುವುದು ಒಳಿತಲ್ಲ.
* ಚೆಕ್ ನ ಎಡ ಮೂಲೆಯ ಮೇಲೆ ಒಮ್ಮೆ ಕಣ್ಣು ಹಾಯಿಸುವುದು ಉತ್ತಮ. ನಗದು ಬದಲಾವಣೆ ಅಗತ್ಯವಿಲ್ಲ ಎಂದೆನಿಸಿದ್ದಲ್ಲಿ ಅಕೌಂಟ್ ಪೇ ಎಂದು ಬರೆಯಲು ಮರೆಯಬಾರದು.
* ಹಣ ಬರೆದಾದ ಮೇಲೆ ಈ "/-" ಚಿಹ್ನೆ ಹಾಕಲು ಮರೆಯಬೇಡಿ. 25,000 ಎಂದು ಬರೆಯುವ ಬದಲು 25,000/- ಎಂದು ಬರೆಯಬೇಕು.
* ಚೆಕ್ ನೀಡಿದ ಬಗ್ಗೆ ಒಂದು ದಾಖಲೆಯನ್ನು ಕಾಪಿಡುವುದು ಉತ್ತಮ
* ಒಂದು ವೇಳೆ ಖಾತೆ ಕ್ಲೋಸ್ ಮಾಡುವುದಾದರೆ ಎಲ್ಲ ಚೆಕ್ ಗಳನ್ನು ನಾಶ ಮಾಡಬೇಕು. (ಗುಡ್ ರಿಟರ್ನ್ಸ್.ಇನ್)
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications