ಮುಂಬೈ ಷೇರು ಮಾರುಕಟ್ಟೆ ಸತತವಾಗಿ ಕುಸಿತದ ಹಾದಿಯಲ್ಲಿ ಸಾಗಿದೆ. ಬಂಡವಾಳ ಹೂಡಿಕೆದಾರರಿಗೆ ಹೊಸ ವರ್ಷ ಭರ್ಜರಿ ಹೊಡೆತ ನೀಡಿದೆ. ಭಾರತದ ಮಾರುಕಟ್ಟೆ ಕಳೆದ ಒಂದು ವರ್ಷದಲ್ಲಿಯೇ ಕನಿಷ್ಠ ಅಂಕ ದಾಖಲು ಮಾಡಿರುವುದು ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ.
ಮಾರುಕಟ್ಟೆ ಈ ಬಗೆಯಾಗಿ ಕುಸಿಯಲು ಏನು ಕಾರಣ ಎಂಬುದನನ್ನು ಲೆಕ್ಕ ಹಾಕಿದರೆ ಅನೇಕ ಅಂಶಗಳು ನಮ್ಮ ಎದುರಿಗೆ ಬಂದು ನಿಲ್ಲುತ್ತವೆ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ವ್ಯವಸ್ಥೆಯಲ್ಲಿ ತೆಗೆದುಕೊಂಡ ಬದಲಾವಣೆಗಳು. ಮಿಡ್ ಕ್ಯಾಪ್ ಷೇರುಗಳಲ್ಲಾದ ಸ್ಥಿತ್ಯಂತರ ಎಲ್ಲವೂ ಷೇರು ಕುಸಿಯಲು ಒಂದೆಲ್ಲಾ ಒಂದು ರೀತಿಯಲ್ಲಿ ಕಾರಣವಾಯಿತು.[ಈ ಎಲ್ಲ ವ್ಯವಹಾರಕ್ಕೆ ಪಾನ್ ಕಾರ್ಡ್ ಬೇಕು]
ಏಷ್ಯಾದ ಮಾರುಕಟ್ಟೆಯಲ್ಲಿನ ಹಿಂಜರಿತ ಪ್ರಮುಖ ಕಾರಣ ಎಂದು ಹೇಳಬಹುದು. ಹಾಂಕಾಂಗ್ ನ ಹಾಂಗ್ ಸೆಲ್ ಶೇಕಡಾ 2.61 ಅಂಕಗಳಷ್ಟು ಕುಸಿತ ಕಂಡರೆ, ಶಾಂಘೈ ಶೇಕಡಾ 2.40ರಷ್ಟು ಕುಸಿತ ಕಂಡಿದೆ. ಅಮೆರಿಕದ ಡೋವ್ ಜೋನ್ಸ್ ಕೈಗಾರಿಕಾ ವಲಯ ಶೇಕಡಾ 1.02ರಷ್ಟು ಕುಸಿತ ಕಂಡು ಬಂದಿದ್ದು ಭಾರತದ ಮಾರುಕಟ್ಟೆ ಮೇಲೆ ನೇರ ಪರಿಣಾಮ ಉಂಟುಮಾಡಿದೆ. ಷೇರು ಮಾರುಕಟ್ಟೆ ಕುಸಿಯಲು ಕಾರಣಗಳನ್ನು ಮುಂದೆ ನೀಡಲಾಗಿದೆ.
ರಜಾ ದಿನಗಳು
ವರ್ಷದ ಕೊನೆ ಹಿನ್ನೆಲೆಯಲ್ಲಿ ಸಾಲು ಸಾಲು ರಜಾದಿನಗಳು ಎದುರಾಗಿದ್ದು ಮಾರುಕಟ್ಟೆ ಮೇಲೆ ಪರಿಣಾಮ ಬೀರಿತು. ಹೂಡಿಕೆದಾರರಿಗೆ ನಿರ್ದಿಷ್ಟ ಯೋಜನೆ ರೂಪಿಸಲು ಸಾಧ್ಯವಾಗಲಿಲ್ಲ.
ಪರ್ಯಾಯ ಹೂಡಿಕೆಯತ್ತ ಚಿತ್ತ
ಮಿಡ್ ಕ್ಯಾಪ್ ಷೇರು ಪಾತಾಳಕ್ಕೆ ತಲುಪಿದೆ. ಜನವರಿ ಆರಂಭದಿಂದಲೂ ಮಾರುಕಟ್ಟೆ ಕುಸಿತದ ಹಾದಿಯಲ್ಲೇ ಸಾಗಿದ್ದು ಬಂಡವಾಳ ಹೂಡಿಕೆದಾರರು ಪರ್ಯಾಯ ಕ್ರಮಗಳತ್ತ ಚಿತ್ತ ಹರಿಸಿದ್ದು ಕುಸಿಯಲು ಮುಖ್ಯ ಕಾರಣ
ಹೆಚ್ಚಿನ ಬೆಲೆ ಕಟ್ಟಿದರು
ನಿರ್ದಿಷ್ಟ ಮುಖಬೆಲೆಯ ಷೇರೊಂದು 18 ರಿಂದ 20 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿತ್ತು. ಹಣ ಮಾಡುವ ತಂತ್ರಗಾರಿಕೆ ಹಿನ್ನೆಲೆಯಲ್ಲಿ ಕಡಿಮೆ ಮುಖಬೆಲೆಗೆ ಖರೀದಿಸಿ ಹೆಚ್ಚಿನದಕ್ಕೆ ಮಾರಾಟ ಮಾಡುವ ಸಮುದಾಯವೇ ಹುಟ್ಟಿಕೊಂಡಿತ್ತು. ವಾರಕ್ಕಿಂತ ಹೆಚ್ಚಿನ ಕಾಲ ಯಾರೂ ಷೇರು ಇಟ್ಟುಕೊಳ್ಳಲಿಲ್ಲ.
ಪರಿಣಾಮ ಬೀರದ ಫೆಡರಲ್ ಬ್ಯಾಂಕ್
ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರದಲ್ಲಿ ಬದಲಾವಣೆ ಮಾಡಿದ್ದು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿತ್ತು, ಆದರೆ ಭಾರತದ ಮಾರುಕಟ್ಟೆ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿತು.
ಆಹಾರ ಉತ್ಪನ್ನಗಳ ದರ ಏರಿಕೆ
ಇನ್ನೊಂದೆಡೆ ಆಹಾರ ಉತ್ಪನ್ನಗಳಾದ ಅಕ್ಕಿ, ಗೋಧಿ ಮತ್ತು ಬೇಳೆ ಕಾಳುಗಳಲ್ಲಿನ ದರ ಏರಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿತು. ಆಮದು ಮತ್ತು ರಫ್ತಿನಲ್ಲಾದ ಬದಲಾವಣೆ ಮಾರುಕಟ್ಟೆ ಕುಸಿತಕ್ಕೆ ಕಾರಣವಾಯಿತು.
ತೈಲ ದರ ಕುಸಿತ
ಕಚ್ಚಾ ತೈಲದ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ಗೆ 35 ಡಾಲರ್ ಗಿಂತ ಕಡಿಮೆಗೆ ಬಂದು ನಿಂತಿದೆ. ಹೂಡಿಕೆದಾರರು ಪಟ್ರೊಲಿಯಂ ಸೆಕ್ಟರ್ ನಿಂದ ಹಿಂದಕ್ಕೆ ಸರಿದು ಆಭರಣಗಳತ್ತ ಚಿತ್ತ ಹರಿಸಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications