ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ: ಕೆಲಸ ಕಳೆದುಕೊಂಡವರಿಗೆ ಸಿಗುವ ಪರಿಹಾರಗಳೇನು?
ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ತನ್ನ 175 ನೇ ಸಭೆಯಲ್ಲಿ, ನೌಕರರ ರಾಜ್ಯ ವಿಮಾ ಕಾಯಿದೆ 1948 ರ ಅಡಿಯಲ್ಲಿ ವಿಮೆ ಮಾಡಿರುವ ವ್ಯಕ್ತಿಗಳಿಗೆ 'ಅಟಲ್ ಬಿಮಿತ್ ವಕ್ತಿ ಕಲ್ಯಾಣ್ ಯೋಜನೆ' ಸೌಲಭ್ಯ ಒದಗಿಸಲು ಅನುಮೋದನೆ ನೀಡಿದೆ.
ಕೆಲಸ ಕಳೆದುಕೊಂಡಿರುವವರಿಗೆ/ವಿಮಾದಾರ ನಿರುದ್ಯೋಗಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಉದ್ಯೋಗವನ್ನು ಕಳೆದುಕೊಳ್ಳುವವರಿಗೆ ಆರ್ಥಿಕ ನೆರವು ಒದಗಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಹೊಸ ಯೋಜನೆಯನ್ನು ಪ್ರಾರಂಭಿಸಿದೆ.
ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ತನ್ನ 175 ನೇ ಸಭೆಯಲ್ಲಿ, ನೌಕರರ ರಾಜ್ಯ ವಿಮಾ ಕಾಯಿದೆ 1948 ರ ಅಡಿಯಲ್ಲಿ ವಿಮೆ ಮಾಡಿರುವ ವ್ಯಕ್ತಿಗಳಿಗೆ 'ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ' ಸೌಲಭ್ಯ ಒದಗಿಸಲು ಅನುಮೋದನೆ ನೀಡಿದೆ. ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!
ಯೋಜನೆ ಉದ್ದೇಶ, ಅರ್ಹತೆ
ಭಾರತದಲ್ಲಿನ ಉದ್ಯೋಗದ ಪ್ರಸಕ್ತ ಸನ್ನಿವೇಶ ತುಂಬಾ ಕೆಟ್ಟದ್ದಾಗಿದ್ದು, ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ ನಿರುದ್ಯೋಗದ ಸಂದರ್ಭದಲ್ಲಿ, ವಿಮಾದಾರರ ಬ್ಯಾಂಕಿನ ಖಾತೆಗೆ ನೇರವಾಗಿ ನಗದು ಪಾವತಿಸುವ ಪರಿಹಾರವಾಗಿದೆ. ನೌಕರರ ರಾಜ್ಯ ವಿಮಾ ಕಾಯಿದೆ, 1948 ರ ಅಡಿಯಲ್ಲಿ ವಿಮೆ ಮಾಡಿರುವ ವ್ಯಕ್ತಿಗಳಿಗೆ ಈ ಸೌಲಭ್ಯ ಸಿಗಲಿದೆ.
ವಿಮಾದಾರನ ಖಾತೆಗೆ ನಗದು
ಜನರು ಉದ್ಯೋಗ ಯಾಕೆ ಕಳೆದುಕೊಳ್ಳುತ್ತಾರೆ? ಇಲ್ಲಿವೆ ಪ್ರಮುಖ 10 ಕಾರಣ
ಚಿಕಿತ್ಸೆ ಅರ್ಹತೆ ಸಡಿಲಿಕೆ
ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅರ್ಹತೆಯನ್ನು ಸಡಿಲಗೊಳಿಸಲಾಗಿದ್ದು, ಹಿಂದಿನ 2 ವರ್ಷ 06 ತಿಂಗಳುಗಳಿಂದ 78 ದಿನಗಳಿಗೆ ಸಡಿಲಿಸಲಾಗಿದೆ. ಅಂದರೆ ಸೇವೆ ಸಲ್ಲಿಸಿದ ವಿಮಾ ಉದ್ಯೋಗಿಗಳ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅರ್ಹತೆಯನ್ನು 78 ದಿನಗಳಿಗೆ ಇಳಿಸಲಾಗಿದೆ.
ವಿಮಾದಾರರಿಗೆ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಪಡೆಯುವ ಅರ್ಹತೆಯನ್ನು 156 ದಿನ, ಒಂದು ವರ್ಷ ಕೆಲಸದಿಂದ ವಿಶ್ರಾಂತಿ ಪಡೆಯಲು ಸಡಿಲಿಕೆ ನೀಡಲಾಗಿದೆ.
ಉಚಿತ ವಿಶೇಷ ಸೌಲಭ್ಯ
ಪರಿಷ್ಕೃತ ಅರ್ಹತೆಗೆ ಅನುಗುಣವಾಗಿ ವಿಮೆದಾರರಿಗೆ ಮತ್ತು ಅವರ ಫಲಾನುಭವಿಗಳಿಗೆ ಉಚಿತ ವಿಶೇಷ ಚಿಕಿತ್ಸಾ ಸೌಲಭ್ಯವನ್ನು ಪಡೆಯಲು ಈ ವಿಶ್ರಾಂತಿ ವಿಪರೀತವಾಗಿ ಸಹಾಯ ಮಾಡುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಅಂತ್ಯಕ್ರಿಯೆ ಖರ್ಚು ಹೆಚ್ಚಳ
ಮರಣದ ನಂತರ ವಿಮಾದಾರನ ಅಂತ್ಯಕ್ರಿಯೆಯ ಖರ್ಚುಗಳನ್ನು ಈಗಿರುವ ರೂ. 10,000 ದಿಂದ ರೂ. 15,000 ಕ್ಕೆ ಹೆಚ್ಚಿಸಲು ನಿಗಮ ಒಪ್ಪಿಕೊಂಡಿದೆ.