ನೋಟು ನಿಷೇಧ, ಜಿಎಸ್ಟಿಯಿಂದ ಆರ್ಥಿಕ ಅಭಿವೃದ್ಧಿಗೆ ಹೊಡೆತ: ರಘುರಾಮ್ ರಾಜನ್

ಕಳೆದ ವರ್ಷ ದೇಶದ ಆರ್ಥಿಕ ಬೆಳವಣಿಗೆಯ ಹಿನ್ನಡೆಗೆ ನೋಟು ನಿಷೇಧ ಹಾಗು ಜಿಎಸ್ಟಿ ಇವೆರಡು ಪ್ರಮುಖ ಕಾರಣವಾಗಿದ್ದವು ಎಂದು ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಕಳೆದ ವರ್ಷ ದೇಶದ ಆರ್ಥಿಕ ಬೆಳವಣಿಗೆಯ ಹಿನ್ನಡೆಗೆ ನೋಟು ನಿಷೇಧ ಹಾಗು ಜಿಎಸ್ಟಿ ಇವೆರಡು ಪ್ರಮುಖ ಕಾರಣವಾಗಿದ್ದವು ಎಂದು ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ನೋಟು ನಿಷೇಧ, ಜಿಎಸ್ಟಿಯಿಂದ ಆರ್ಥಿಕ ಅಭಿವೃದ್ಧಿಗೆ ಹೊಡೆತ: ರಘುರಾಮ್

ದೇಶದ ಅಗತ್ಯತೆಗಳನ್ನು ಪೂರೈಸಲು ಪ್ರಸ್ತುತ ಇರುವಂತ ಶೇ. 7ರ ಬೆಳವಣಿಗೆ ದರ ಸಾಕಾಗುವುದಿಲ್ಲ ಎಂದು ತಿಳಿಸಿದರು. 2012 ರಿಂದ 2016ರ ವರೆಗಿನ ನಾಲ್ಕು ವರ್ಷ ಅವಧಿಯಲ್ಲಿ ಭಾರತದ ಬೆಳವಣಿಗೆಯ ವೇಗ ಹೆಚ್ಚಾಗಿತ್ತು. ಆದರೆ ನೋಟು ರದ್ದತಿ ಮತ್ತು ಜಿಎಸ್ಟಿಯಿಂದ ಅಭಿವೃದ್ಧಿಯ ವೇಗಕ್ಕೆ ತಡೆಯುಂಟಾಗಿದೆ ಎಂದಿದ್ದಾರೆ. ನೋಟು ರದ್ದತಿ ಮತ್ತು ಜಿಎಸ್ಟಿಯ ಹೊಡೆತಗಳಿಂದ ದೇಶದ ಆರ್ಥಿಕತೆ ಮುಗ್ಗರಿಸಿದ್ದು, ಜಗತ್ತಿನ ಇತರೆ ಆರ್ಥಿಕತೆಗಳು ವೇಗವಾಗಿ ಬೆಳೆಯುತ್ತಿರುವಾಗ ಭಾರತದ ಆರ್ಥಿಕತೆಗೆ ಇದು ಅಡ್ಡಿಯಾಯಿತು ಎಂದು ಅವರು ವಿಶ್ಲೇಷಣೆ ಮಾಡಿದರು.

2017ರಲ್ಲಿ ಜಾಗತಿಕ ಅರ್ಥವ್ಯವಸ್ಥೆ ಚೇತರಿಸಿಕೊಂಡರೆ ಭಾರತದ ಅರ್ಥ ವ್ಯವಸ್ಥೆ ಜಾರು ಹಾದಿಯಲ್ಲಿತ್ತು. ನೋಟು ರದ್ದತಿ ಮತ್ತು ಜಿಎಸ್ಟಿಯ ಹೊಡೆತ ಎಷ್ಟು ಬಲವಾಗಿತ್ತು ಎಂಬುದನ್ನು ಅದು ಸಂಕೇತಿಸುತ್ತದೆ ಎಂದು ರಘುರಾಮ್ ರಾಜನ್ ನುಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+