ವೇಗವಾಗಿ ಬೆಳಯುತ್ತಿರುವ ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯು ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ.
ವೇಗವಾಗಿ ಬೆಳಯುತ್ತಿರುವ ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯು ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ.
ಎಫ್ಎಂಸಿಜಿ ಕಂಪನಿಗಳೊಂದಿಗೆ ಭಾರೀ ಪೈಪೋಟಿ ನಿಡುತ್ತಿರುವ ಪತಂಜಲಿ ಇದೇ ಮೊದಲ ಬಾರಿ ತನ್ನ ಕೆಲ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದವು ಮೊದಲ ಬಾರಿಗೆ ಹಲವಾರು ಉತ್ಪನ್ನಗಳ ಮೇಲೆ ವಿಶೇಷ ಕೊಡುಗೆಗಳು, ಕಾಂಬೊ ಪ್ಯಾಕ್ ಮತ್ತು ರಿಯಾಯಿತಿಗಳನ್ನು ಹೊರತಂದಿದೆ. ಗ್ರಾಹಕರನ್ನು ಸೆಳೆಯಲು ಪ್ರಾರಂಭಿಸಲಾದ ಈ ಕ್ರಮವು ಮಾರಾಟವನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.
Buy 3, Get 3 free
ಪತಂಜಲಿ ಪ್ರಕಾರ, ಮೂರು ವಸ್ತುಗಳು ಖರೀದಿ ಮಾಡಿದರೆ ಮೂರು ಉಚಿತ (Buy 3, Get 3 free) ಹಾಗೂ ಕೆಲ ವಸ್ತುಗಳ ಮೇಲೆ ಶೇ. 50 ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಜ್ಯೂಸ್, ಹಿಟ್ಟು, ಎಣ್ಣೆ, ಓಟ್ಸ್ ಮತ್ತು ಸಿದ್ಧ ಆಹಾರಗಳಿಗೆ ಕಂಪನಿ ರಿಯಾಯಿತಿ ನೀಡುತ್ತಿದೆ. ಶಾಂಪೂ, ಫೇಸ್ವಾಶ್ ನಂತಹ ಸೌಂದರ್ಯ ವರ್ಧಕಗಳಿಗೆ ಕಾಂಬೋ ಆಫರ್ ನೀಡಲಿದೆ. ಕಂಪನಿಯು ಆಯ್ದ ನಗರಗಳಲ್ಲಿ ಕಾಂಬೊ ಆಫರ್ ಪ್ಯಾಕ್ಗಳನ್ನು ಬಿಡುಗಡೆ ಮಾಡಿದೆ.
ಪತಂಜಲಿಯ ಹಠಾತ್ ರಿಯಾಯಿತಿಯತ್ತ ಸಾಗಿದ್ದು ಏಕೆ?
ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಪತಂಜಲಿಯ ಮಾರಾಟ ಕುಸಿಯುತ್ತಿದೆ. ಇದು ಕಳೆದ ಹಣಕಾಸು ವರ್ಷದಲ್ಲಿ ಉತ್ಪನ್ನಗಳ ಅವಧಿ ಮುಗಿದಿದೆ. ಕಳೆದ ತ್ರೈಮಾಸಿಕದಲ್ಲಿ ಹೆಚ್ಚಿನ ಪ್ರಮುಖ ಎಫ್ಎಂಸಿಜಿ ಕಂಪನಿಗಳು ಮಾರಾಟದಲ್ಲಿ ಮಂದಗತಿಯನ್ನು ಕಂಡಿವೆ. ಪತಂಜಲಿ ಕೂಡ ಎರಡು ವರ್ಷಗಳಿಂದ ಕಡಿಮೆ ಮಾರಾಟವನ್ನು ದಾಖಲಿಸುತ್ತಿದೆ. ಇದು ಹಣಕಾಸು ವರ್ಷ 2017 ಕ್ಕೆ ಹೋಲಿಸಿದರೆ ಹಣಕಾಸು ವರ್ಷ 2018 ರಲ್ಲಿ ಆದಾಯದಲ್ಲಿ 10% ಕುಸಿತವನ್ನು ದಾಖಲಿಸಿದೆ.
ಪತಂಜಲಿ ವ್ಯವಸ್ಥಾಪಕ ಹೇಳಿದ್ದೇನು?
ಪತಂಜಲಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಕಂಪನಿಯು ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಒಪ್ಪಿಕೊಂಡಿದ್ದು, ನಿಧಾನಗತಿಯ ಬೆಳವಣಿಗೆ ದಾಖಲಿಸಿದ್ದಾರೆ. ಗ್ರಾಮೀಣ ಭಾಗದ ಮಂದಗತಿಯ ಬೇಡಿಕೆ ಕಾರಣದಿಂದಾಗಿ ಮಾರಾಟದಲ್ಲಿ ವ್ಯತ್ಯಾಸ ಕಂಡುಬಂದಿದೆ. ನಾವು ನಿಧಾನಗತಿಯ ಪರಿಣಾಮಗಳಿಂದ ಕ್ರಮೇಣ ಹೊರಬರುತ್ತಿದ್ದೇವೆ ಎಂದು ಬಾಲಕೃಷ್ಣ ಹೇಳಿದರು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications