ಬೆಂಗಳೂರು, ಆಗಸ್ಟ್ 09 : ವಿ. ಜಿ. ಸಿದ್ದಾರ್ಥ ಸಾವಿನ ಬಳಿಕ ಕೆಫೆ ಕಾಫಿ ಡೇ ಭವಿಷ್ಯವೇನು? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಸಿಡಿಇಎಲ್ ಬೆಂಗಳೂರಿನಲ್ಲಿರುವ 90 ಎಕರೆ ಐಟಿ ಪಾರ್ಕ್ ಮಾರಾಟ ಮಾಡಲು ತೀರ್ಮಾನಿಸಿದೆ.
ಕೆಫೆ ಕಾಫಿ ಡೇ ವ್ಯವಹಾರ ನೋಡಿಕೊಳ್ಳುತ್ತಿರುವ ಕಾಫಿ ಡೇ ಎಂಟರ್ಪ್ರೈಸಸ್ ಲಿ.(ಸಿಡಿಇಎಲ್) ಐಟಿ ಪಾರ್ಕ್ ಮಾರಾಟ ಮಾಡಲು ತೀರ್ಮಾನಿಸಿದೆ. ಈ ಮೂಲಕ ಕಾಫಿ ಡೇಯನ್ನು ನಷ್ಟದಿಂದ ಹೊರತರಲು ಯೋಜನೆ ರೂಪಿಸಿದೆ.
ಬೆಂಗಳೂರಿನ 90 ಎಕರೆ ಪ್ರದೇಶದಲ್ಲಿ ಗ್ಲೋಬಲ್ ವಿಲೇಲ್ ಇದೆ. ಇದು ವಿ. ಜಿ. ಸಿದ್ದಾರ್ಥಗೆ ಸೇರಿದ ಆಸ್ತಿಯಾಗಿದೆ. ಇದನ್ನು ಮಾರಾಟ ಮಾಡಲು ಮುಂದಾಗಿದ್ದು, ನ್ಯೂಯಾರ್ಕ್ ಮೂಲದ ಬ್ಲಾಕ್ ಸ್ಟೋನ್ ಗ್ರೂಪ್ ಖರೀದಿಗೆ ಆಸಕ್ತಿ ತೋರಿದೆ.

ಗ್ಲೋಬಲ್ ವಿಲೇಜ್ ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿರುವುದನ್ನು ಸಿಸಿಡಿ ಖಚಿತಪಡಿಸಿದೆ. ಗುರುವಾರ ನಡೆದ ಸಿಡಿಇಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಷ್ಟವನ್ನು ಕಡಿಮೆ ಮಾಡಲು ಮೂರು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ವಿ. ಜಿ. ಸಿದ್ದಾರ್ಥ ಕಂಪನಿ ಉದ್ಯೋಗಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪತ್ರದ ಸತ್ಯಾಸತ್ಯತೆ ತಿಳಿಯಲು ಫೋರೆನ್ಸಿಕ್ ಆಡಿಟ್ ಫಿರ್ಮ್ ನೇಮಕ ಮಾಡಿಕೊಳ್ಳಲು ಸಹ ಚರ್ಚೆ ನಡೆದಿದೆ.
ಸಿಡಿಇಎಲ್ ಜೂನ್ ವರೆಗಿನ ಆರ್ಥಿಕ ಪರಿಸ್ಥಿತಿ ಕುರಿತು ಚರ್ಚಿಸಲು ಆಗಸ್ಟ್ 8ರಂದು ಸಭೆ ನಿಗದಿ ಮಾಡಲಾಗಿತ್ತು. ಆದರೆ, ವಿ. ಜಿ. ಸಿದ್ದಾರ್ಥ ಸಾವಿನ ಹಿನ್ನಲೆಯಲ್ಲಿ ಹಲವು ಬೆಳವಣಿಗೆಗಳು ನಡೆದವು. ಆದರೆ, ನಿಗದಿಯಂತೆ ಸಭೆ ನಡೆಸಲಾಯಿತು.
ವಿ. ಜಿ. ಸಿದ್ದಾರ್ಥ ನಂತರವೂ ಉದ್ಯಮವನ್ನು ಮುಂದುವರೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲಿಯೇ strategic corporate adviser ನೇಮಕ ಮಾಡಲು ಸಹ ತೀರ್ಮಾನಿಸಲಾಗಿದೆ.
ಜುಲೈ 31ರಂದು ತುರ್ತು ಸಭೆ ನಡೆಸಿದ್ದ ಸಿಡಿಇಎಲ್ ವಿ. ಜಿ. ಸಿದ್ದಾರ್ಥ ಪತ್ನಿ ಮಾಳವಿಕಾ ಹೆಗಡೆ ಅವರನ್ನು ಮಂಡಳಿ ಹೆಚ್ಚುವರಿ ಸದಸ್ಯರಾಗಿ ನೇಮಕ ಮಾಡಿತ್ತು. ಸಿಇಓ ಮಟ್ಟದ ತೀರ್ಮಾನಗಳನ್ನು ಕೈಗೊಳ್ಳಲು ಅವರನ್ನು ನೇಮಿಸಲಾಗಿತ್ತು.
ಸಿಡಿಇಎಲ್ ಸಲ್ಲಿಕೆ ಮಾಡಿರು ಬ್ಯಾಲೆನ್ಸ್ ಶೀಟ್ ಪ್ರಕಾರ ಸಿಡಿಇಲ್ 11,259 ಕೋಟಿ ರೂ. ಆಸ್ತಿಯನ್ನು ಹೊಂದಿದೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?

Bengaluru Airport: ಇರಾನ್-ಇಸ್ರೇಲ್ ಯುದ್ಧ ಪರಿಣಾಮ ಬೆಂಗಳೂರು ಏರ್ಪೋರ್ಟ್ನಲ್ಲಿ 37 ವಿಮಾನಗಳು ರದ್ದು!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Airport: ಬೆಂಗಳೂರು ಏರ್ಪೋರ್ಟ್ಗೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಭೀತಿ! ಹಲವು ವಿಮಾನ ಹಾರಾಟ ರದ್ದು

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!



Click it and Unblock the Notifications