ಚೆನ್ನೈ, ಮಾರ್ಚ್ 28: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿರುವೆನ್ನೆನಲ್ಲೂರಿನ ರಥಿನವೇಲ್ ಮುರುಗನ್ ದೇವಸ್ಥಾನದಲ್ಲಿ 9 ನಿಂಬೆಹಣ್ಣುಗಳನ್ನು 2.36 ಲಕ್ಷ ರೂಪಾಯಿಗೆ ಹರಾಜು ಮಾಡಿದ ಘಟನೆ ಸಾರ್ವಜನಿಕರನ್ನು ಹುಬ್ಬೇರುವಂತೆ ಮಾಡಿದೆ.
ವಿಲ್ಲುಪುರಂ ಜಿಲ್ಲೆಯ ಒಟ್ಟನಂದಾಲ್ ಗ್ರಾಮದಲ್ಲಿ ನಡೆದ ಹಬ್ಬದಲ್ಲಿ ರಥಿನವೇಲ್ ಮುರುಗನ್ ದೇವರ ಈಟಿಗೆ ಚುಚ್ಚಿದ್ದ ಪವಿತ್ರ ನಿಂಬೆಹಣ್ಣುಗಳು ಮಂಗಳವಾರ ಹರಾಜಿಗೆ ಹೋಗಿದ್ದವು. ಆ ಒಂಬತ್ತು ಪವಿತ್ರ ನಿಂಬೆಹಣ್ಣುಗಳು ಬಂಜೆತನವನ್ನು ನಿವಾರಿಸುತ್ತದೆ ಮತ್ತು ಅವರ ಮನೆಗಳಿಗೆ ಸಮೃದ್ಧಿಯನ್ನು ತರುತ್ತದೆ ಎಂದು ಜನರು ನಂಬಿದ್ದರಿಂದ ಹರಾಜಿನಲ್ಲಿ ನಿಂಬೆಹಣ್ಣ ಹರಾಜಿನಲ್ಲಿ 2.36 ಲಕ್ಷ ರೂ.ಗೆ ಮಾರಾಟವಾಯಿತು.

ಪೂರ್ವಜರ ಹಿಂದಿನ ಸಂಪ್ರದಾಯದಂತೆ ಜನರು ಈ ದೇವಾಲಯದ ಗರ್ಭಗುಡಿಯಲ್ಲಿ 5 ಅಡಿ ಎತ್ತರದಲ್ಲಿ ಮುರುಗನ ವೆಲ್ ಅನ್ನು ಪೂಜಿಸುತ್ತಾರೆ. ಹರಾಜು ಸಂಪ್ರದಾಯವು ಪ್ರತಿ ವರ್ಷ ಪಂಗುನಿ ಉಥಿರಂ ಹಬ್ಬದ ಸಮಯದಲ್ಲಿ ಒಂಬತ್ತು ದಿನಗಳವರೆಗೆ ನಡೆಯುತ್ತದೆ. ಅದರಂತೆ ಆ.15ರಂದು ಧ್ವಜ ಆರಂಭವಾಗಿ ಈ ವರ್ಷ ಮಾ.23ರವರೆಗೆ 9 ದಿನಗಳ ಕಾಲ ನಡೆಯಿತು.
ಈ 9 ದಿನಗಳಲ್ಲಿ ರಥಿನವೇಲ್ ಮುರುಗನ್ ದೇವರ ಈಟಿಯಲ್ಲಿ ಅಲಂಕರಿಸಿದ ನಿಂಬೆಹಣ್ಣುಗಳನ್ನು ಪೂಜೆ ಮುಗಿದ ನಂತರ ದಿನದ ಕೊನೆಯಲ್ಲಿ ಹರಾಜು ಮಾಡಲಾಗುತ್ತದೆ. 9 ದಿನಗಳ ಉತ್ಸವದಲ್ಲಿ ಪೂಜೆ ಸಲ್ಲಿಸಿದ 9 ನಿಂಬೆಹಣ್ಣುಗಳು ಒಂದೊಂದಾಗಿ ಇಲ್ಲಿ ಇಡಲಾಗುತ್ತದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಹರಾಜಿನಲ್ಲಿ ಪಾಲ್ಗೊಳ್ಳುತ್ತಾರೆ.
ಪ್ರತಿ ನಿಂಬೆಹಣ್ಣು 100 ರೂಪಾಯಿಗೆ ಶುರುವಾಗಿದ್ದು, ಹಲವರು 1000, 2000, 3000ಕ್ಕೆ ಬಿಡ್ ಮಾಡಿದರು. ಹರಾಜಿನಲ್ಲಿ ಹಬ್ಬದ ಮೊದಲ ದಿನ ಗರಿಷ್ಠ 50,500 ರೂ.ಗೆ ಮಾರಾಟವಾದ ನಿಂಬೆಹಣ್ಣು 2ನೇ ದಿನ 26,500 ರೂ. 3ನೇ ದಿನ 42,100 ರೂ., 4ನೇ ದಿನ 19,000 ರೂ., 5ನೇ ದಿನ 11,000 ರೂ., 6ನೇ ದಿನದ ನಿಂಬೆಹಣ್ಣು ರೂ.34,000, 7ನೇ ದಿನ ರೂ. 24,500, 8ನೇ ದಿನ ರೂ. 13,500, ಮತ್ತು 9ನೇ ದಿನ ರೂ. 15,000. ಇದರೊಂದಿಗೆ ಒಟ್ಟು 9 ನಿಂಬೆಹಣ್ಣು 2,36 ಲಕ್ಷ ರೂ.ಗೆ ಮಾರಾಟವಾದವು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications