ಹಲವು ಉದ್ಯಮ, ವ್ಯವಹಾರಗಳ ಸ್ವರೂಪ ಬದಲಾಗಿದೆ ಹಾಗೂ ಬದಲಾಗುತ್ತಿದೆ. ದೈನಂದಿನ ಚಟುವಟಿಕೆಗಳಲ್ಲಿ ಸಿಬ್ಬಂದಿ ಹಾಗೂ ಗ್ರಾಹಕರ ಮಧ್ಯೆ ನೇರ ಸಂಪರ್ಕವನ್ನು ತಡೆಯುವ ಉದ್ದೇಶದಿಂದಲೇ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಮಾಲೀಕರು. ಅಂಥದ್ದೇ ಒಂದು ಉದಾಹರಣೆ ಈಗ ಪುಣೆಯಲ್ಲಿ ವರದಿ ಆಗಿದೆ. ಅಲ್ಲಿ "ಆತ್ಮನಿರ್ಭರ್ ಅಭಿಯಾನ" ಆರಂಭಿಸಲಾಗಿದೆ.
ಸಿಬ್ಬಂದಿ ಹಾಗೂ ಗ್ರಾಹಕರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತೆ ಖಾತ್ರಿ ಮಾಡಿಕೊಳ್ಳುವುದು ಈ ಅಭಿಯಾನದ ಉದ್ದೇಶ. ಅಂದ ಹಾಗೆ ಈ ಆತ್ಮನಿರ್ಭರ್ ಪೆಟ್ರೋಲ್ ಬಂಕ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಗೊತ್ತಾ? ಹಂತ ಹಂತವಾಗಿ ಇಲ್ಲಿ ವಿವರಿಸಲಾಗುತ್ತಿದೆ, ಮುಂದೆ ಓದಿ.
ಪೆಟ್ರೋಲ್ ಬಂಕ್ ನಲ್ಲಿ ವ್ಯವಹಾರ ಹೇಗೆ ನಡೆಯುತ್ತದೆ?
* ಮೊದಲಿಗೆ ಗ್ರಾಹಕರಿಗೆ ಕೈಗೆ ಸ್ಯಾನಿಟೈಸ್ ಹಾಕಿಕೊಳ್ಳಲು ಹೇಳಲಾಗುತ್ತದೆ.
* ಎಷ್ಟು ತೈಲ ಬೇಕು ಎಂಬುದನ್ನು ಅಂಕಿಗಳನ್ನು ನಮೂದಿಸಲು ತಿಳಿಸಲಾಗುತ್ತದೆ. ಬಂಕ್ ಸಿಬ್ಬಂದಿ ದೂರ ನಿಂತು ಈ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.
* ಪೆಟ್ರೋಲ್/ಡೀಸೆಲ್ ತುಂಬುವ ನೋಜಲ್ ಅನ್ನು ತೆಗೆದು, ಮೀಟರ್ ನಲ್ಲಿ ಶೂನ್ಯವನ್ನು ಖಾತ್ರಿ ಮಾಡಿಕೊಂಡು, ನೋಜಲ್ ಅನ್ನು ಗ್ರಾಹಕರೇ ವಾಹನದ ತೈಲ ತುಂಬುವ ಜಾಗದಲ್ಲಿ ಬಿಗಿ ಮಾಡಿ ಇಟ್ಟರೆ ತುಂಬಿಕೊಳ್ಳುತ್ತದೆ.
* ಎಷ್ಟು ಮೊತ್ತ ನಮೂದಿಸಲಾಗಿರುತ್ತದೋ ಅಷ್ಟಕ್ಕೆ ತೈಲ ಭರ್ತಿಯಾದ ಮೇಲೆ ತಾನಾಗಿಯೇ ಹರಿದು ಬರುತ್ತಿದ್ದದ್ದು ನಿಲ್ಲುತ್ತದೆ.
* ನೋಜಲ್ ಹೊರತೆಗೆದು, ಮತ್ತೆ ಮಷೀನ್ ನಲ್ಲೇ ಇಡಬೇಕು. "ವಾಲ್ಯೂಮ್" ಬಟನ್ ಒತ್ತಬೇಕು.
* ಪೆಟ್ರೋಲ್ ಬಂಕ್ ಸಿಬ್ಬಂದಿ ಬಳಿ ಇರುವಂತೆ ಮಶೀನ್ ನಗದು, ಕಾರ್ಡ್ ಅಥವಾ ಡಿಜಿಟಲ್ ಪಾವತಿ ಸ್ವೀಕರಿಸುತ್ತದೆ.
* ಕನಿಷ್ಠ 30 ರುಪಾಯಿ ಹಾಗೂ ಗರಿಷ್ಠ 400 ರುಪಾಯಿಗೆ ದ್ವಿಚಕ್ರ ವಾಹನಕ್ಕೆ ತೈಲ ತುಂಬಿಸಬಹುದು.
ಈ ನಿಯಮ ಹೇಗೆ ಇದು ನಡೆಯುತ್ತಿದೆ?
ತೈಲ ಭರ್ತಿ ಮಾಡುವಾಗ ಅಳತೆ ವಿಚಾರದಲ್ಲಿ ಗ್ರಾಹಕರು- ಸಿಬ್ಬಂದಿ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಆದರೆ ಈಗ ಆ ಸಮಸ್ಯೆ ಇರುವುದಿಲ್ಲ. ಜತೆಗೆ ಮಾರಾಟ ಮಾಡುವವರು ಹಾಗೂ ಗ್ರಾಹಕರ ಮಧ್ಯೆ ಸಾಮಾಜಿಕ ಅಂತರ ಕೂಡ ಕಾಯ್ದುಕೊಳ್ಳಬಹುದು. ಈ ಹೊಸ ಆಲೋಚನೆ ಚೆನ್ನಾಗಿ ಕೆಲಸ ಮಾಡುತ್ತಿದೆ.
ಎಷ್ಟು ಲೀಟರ್ ಪೆಟ್ರೋಲ್- ಡೀಸೆಲ್?
ಒಂದು ದಿನಕ್ಕೆ 800ರಿಂದ 900 ಲೀಟರ್ ಪೆಟ್ರೋಲ್ ಹಾಗೂ 500ರಿಂದ 600 ಲೀಟರ್ ಡೀಸೆಲ್ ಮಾರಾಟ ಆಗುತ್ತಿದೆ ಎಂದು ಪುಣೆಯ ಈ ಪೆಟ್ರೋಲ್ ಬಂಕ್ ಮ್ಯಾನೇಜರ್ ಸಂಕೇತ್ ವರುಡೆ ತಿಳಿಸಿದ್ದಾರೆ ಎಂಬುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ಹೊಸ ನಿಯಮದ ಬಗ್ಗೆ ಇತರರು ಕೂಡ ಆಸಕ್ತಿ ತೋರುತ್ತಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications