ಎಜಿಆರ್ ಬಾಕಿ ಪಾವತಿಗೆ ಹತ್ತು ವರ್ಷದ ಅವಧಿ ನೀಡಿ, ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮಾರ್ಚ್ 31, 2021ರೊಳಗೆ 10% ಮೊತ್ತವನ್ನು ಪಾವತಿಸಬೇಕಿದೆ. ಪ್ರತಿ ವರ್ಷದ ಫೆಬ್ರವರಿ 7ರೊಳಗೆ ಹಣವನ್ನು ಪಾವತಿ ಮಾಡಬೇಕು ಎಂದು ಮಾಧ್ಯಮ ವರದಿಗಳು ಹೇಳಿವೆ. ಸ್ಪೆಕ್ಟ್ರಂ ಮಾರಾಟಕ್ಕೆ ಸಂಬಂಧಿಸಿದಂತೆ ಟೆಲಿಕಾಂ ಕಂಪೆನಿಗಳ ದಿವಾಳಿ ಕಲಾಪದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ನಿಂದ ಎನ್ ಸಿಎಲ್ ಟಿಗೆ ಬಿಡಲಾಗಿದೆ.
ಟೆಲಿಕಾಂ ಕಂಪೆನಿಗಳ ಎಜಿಆರ್ ಬಾಕಿಯನ್ನು ಮರುಪಾವತಿಸಲು 20 ವರ್ಷಗಳ ಅವಧಿ ಕೇಳಿತ್ತು. ವೊಡಾಫೋನ್ ಐಡಿಯಾ 50,400 ಕೋಟಿ ರುಪಾಯಿಗೂ ಹೆಚ್ಚು, ಭಾರ್ತಿ 26,000 ಕೋಟಿಗೆ ಹತ್ತಿರ ಬಾಕಿ ಇದೆ. ಇವೆರಡೂ 15 ವರ್ಷಗಳ ಕಾಲ ಸಮಯವನ್ನು ಕೇಳಿದ್ದವು. ಒಂದು ವೇಳೆ ಒಂದೇ ಸಲಕ್ಕೆ ವೊಡಾಫೋನ್ ಐಡಿಯಾ ಎಜಿಆರ್ ಬಾಕಿ ಪಾವತಿಸಿದಲ್ಲಿ ಕಂಪೆನಿಯೇ ಮುಚ್ಚಬೇಕಾಗುತ್ತದೆ ಎಂದು ತಿಳಿಸಿತ್ತು.
ಮ್ಯಾನೇಜಿಂಗ್ ಡೈರೆಕ್ಟರ್ ಗಳು ಅಥವಾ ಸಿಇಒಗಳು ವೈಯಕ್ತಿಕ ಖಾತ್ರಿ
ಟೆಲಿಕಾಂ ಕಂಪೆನಿಗಳ ಮ್ಯಾನೇಜಿಂಗ್ ಡೈರೆಕ್ಟರ್ ಗಳು ಅಥವಾ ಸಿಇಒಗಳು ಇನ್ನು ನಾಲ್ಕು ವಾರದೊಳಗೆ ವೈಯಕ್ತಿಕ ಖಾತ್ರಿ ನೀಡಬೇಕು ಎಂದು ಪೀಠವು ಸೂಚಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಒಂದು ವೇಳೆ ಕಂತಿನ ಮೊತ್ತ ಪಾವತಿಸದಿದ್ದರೆ ಅದಕ್ಕೆ ದಂಡ, ಬಡ್ಡಿ ಹಾಗೂ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ಕೂಡ ಕೋರ್ಟ್ ತಿಳಿಸಿದೆ.
1.6 ಲಕ್ಷ ಕೋಟಿ ರುಪಾಯಿ ಬಾಕಿ
2019ರ ಅಕ್ಟೋಬರ್ ನಲ್ಲಿ ಇದೇ ಪೀಠ ನೀಡಿದ ತೀರ್ಪಿನಲ್ಲಿ ಟೆಲಿಕಾಂ ಇಲಾಖೆ ನಿಲುವನ್ನು ಬೆಂಬಲಿಸಿತ್ತು. ನಾನ್- ಕೋರ್ ಐಟಮ್ ಗಳಿಗೆ ವ್ಯಾಖ್ಯಾನವನ್ನು ವಿಸ್ತರಿಸಿತ್ತು. ಲೈಸೆನ್ಸ್ ಶುಲ್ಕ, ಸ್ಪೆಕ್ಟ್ರಮ್ ಬಳಕೆ ಶುಲ್ಕ, ಬಡ್ಡಿ ಹಾಗೂ ದಂಡ ಸೇರಿ 1.6 ಲಕ್ಷ ಕೋಟಿ ರುಪಾಯಿ ಬಾಕಿ ಪಾವತಿಸಬೇಕಿತ್ತು.
ಎನ್ ಸಿಎಲ್ ಟಿಗೆ ತೀರ್ಮಾನವನ್ನು ಬಿಡಲಾಗಿದೆ
ವೊಡಾಫೋನ್ ಐಡಿಯಾ ಈ ತನಕ 7,854 ಕೋಟಿ ರುಪಾಯಿ, ಏರ್ ಟೆಲ್ 18 ಸಾವಿರ ಕೋಟಿ ರುಪಾಯಿ ಪಾವತಿಸಿದೆ. ರಿಲಯನ್ಸ್ ಜಿಯೋ 2016ರಿಂದ ಆರಂಭವಾಗಿದ್ದು, ಅದರ ಮೇಲೆ ಎಜಿಆರ್ ಬಾಕಿ ಪಾವತಿ ದೊಡ್ಡ ಪರಿಣಾಮ ಬೀರಿಲ್ಲ. ಅದು 195 ಕೋಟಿ ರುಪಾಯಿ ಬಾಕಿ ಪಾವತಿಸಿದೆ. ಇನ್ನು ಎಜಿಆರ್ ಬಾಕಿ ಪಾವತಿಸದ ಹೊರತು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಷನ್ ದಿವಾಳಿ ಪ್ರಕ್ರಿಯೆಗೆ ಒಪ್ಪಿಗೆ ನೀಡಲು ಆಗಲ್ಲ ಎಂದು ಸರ್ಕಾರ ತಿಳಿಸಿದೆ. ಇನ್ನು ಸುಪ್ರೀಂ ಕೋರ್ಟ್ ನಿಂದ ತೀರ್ಮಾನವನ್ನು ಎನ್ ಸಿಎಲ್ ಟಿಗೆ ಬಿಡಲಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!



Click it and Unblock the Notifications