ಒಮ್ಮೊಮ್ಮೆ ಹೀಗೂ ಆಗಬಹುದು! ಕೋಲ್ಕತ್ತಾದ ವ್ಯಕ್ತಿಯೊಬ್ಬರು ಫ್ರೆಡ್ರಿಚ್ ಇಂಗೆಲ್ಸ್ ಹಾಗೂ ಕಾರ್ಲ್ ಮಾರ್ಕ್ಸ್ ಅವರ 'ದ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ' ಎಂಬ ಪುಸ್ತಕವನ್ನು ಅಮೆಜಾನ್ ನಲ್ಲಿ ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಜೂನ್ 13ನೇ ತಾರೀಕಿನಂದು 'ಭಗವದ್ಗೀತಾ' ಗ್ರಂಥವು ತಲುಪಿದೆ.
ಸುತಿರ್ಥ ದಾಸ್ ಎಂಬ ಕೋಲ್ಕತ್ತಾದ ಗರಿಯಾ ನಿವಾಸಿ ಫೇಸ್ ಬುಕ್ ಪೋಸ್ಟ್ ನಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. "ಕಳೆದ ಬುಧವಾರ, ಜೂನ್ 10ರಂದು 'ದ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ' ಪುಸ್ತಕವನ್ನು 90 ರುಪಾಯಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದನ್ನು ನೋಡಿದೆ. ಆ ತಕ್ಷಣವೇ ಹಣ ಪಾವತಿಸಿ, ಬುಕ್ ಆರ್ಡರ್ ಮಾಡಿದೆ. ಶುಕ್ರವಾರ ಅಥವಾ ಶನಿವಾರದ ದಿನ ಪುಸ್ತಕ ಡೆಲಿವರಿ ಆಗುತ್ತದೆ ಎಂಬ ಸಂದೇಶ ಬಂತು" ಎಂದು ದಾಸ್ ಬರೆದುಕೊಂಡಿದ್ದಾರೆ.
ಪುಸ್ತಕ ಡೆಲಿವರಿಗೆ ಹೊರಟಿದೆ ಎಂದು ಶನಿವಾರ ಬೆಳಗ್ಗೆ ಅಮೆಜಾನ್ ನಿಂದ ಸಂದೇಶ ಬಂತು. ಮಧ್ಯಾಹ್ನ 2 ಗಂಟೆಗೆ, ಕಚೇರಿಯಲ್ಲಿ ಇರುವಾಗ ಪುಸ್ತಕ ಡೆಲಿವರಿ ಆಗಿದೆ ಎಂಬ ವಿಚಾರ ನನಗೆ ಗೊತ್ತಾಯಿತು. ಸಂಜೆ ವಾಪಸ್ ಬಂದು, ಗಮನಿಸಿದಾಗ ಗೊತ್ತಾಯಿತು, 'ದ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ' ಪುಸ್ತಕವು ಭಗವದ್ಗೀತಾ ಇಂಗ್ಲಿಷ್ ಪುಸ್ತಕ ಆಗಿತ್ತು ಎಂದಿದ್ದಾರೆ ದಾಸ್.

ಫೇಸ್ ಬುಕ್ ಪೋಸ್ಟ್ ಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಆನ್ ಲೈನ್ ಡೆಲಿವರಿಯಲ್ಲೂ 'ರಾಜಕೀಯ' ಮಾಡಲಾಗುತ್ತಿದೆ ಮತ್ತು ಪರೋಕ್ಷ ಸೆನ್ಸಾರ್ ಷಿಪ್ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಇನ್ನು ಪುಸ್ತಕ ಮಾರಾಟಗಾರ ಡೀಲರ್ ಸ್ಪೆಕ್ಟ್ರಲ್ ವಕ್ತಾರರು ಮಾತನಾಡಿ, ಇದು ತಾತ್ಸಾರದಿಂದ ಆಗಿರುವ ತಪ್ಪು ಎಂದಿದ್ದಾರೆ.
ಈಗ ಆಗಿರುವ ತಪ್ಪಿಗೆ ವಿಷಾದಿಸುತ್ತೇವೆ. ಗ್ರಾಹಕರು ನೀಡಿದ ಮೊತ್ತಕ್ಕೆ ಪುಸ್ತಕವನ್ನು ಬದಲಿಸಿಕೊಡುತ್ತೇವೆ ಎಂದು ವಕ್ತಾರರು ಹೇಳಿರುವುದಾಗಿ ವರದಿ ಆಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications