ಅಮೆಜಾನ್ ನಿಂದ ಹೊಸದಾಗಿ ಸಾಲ ನೀಡುವ ಯೋಜನೆ ಪರಿಚಯಿಸಲಾಗಿದೆ. ಅದನ್ನು ಅಮೆಜಾನ್ ಪೇ ಲೇಟರ್ ಇನ್ ಇಂಡಿಯಾ ಎಂದು ಕರೆಯಲಾಗಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ತಕ್ಷಣವೇ ಅಮೆಜಾನ್ ಇಂಡಿಯಾದಲ್ಲಿ ಲಿಸ್ಟ್ ಆಗಿರುವ ಯಾವುದೇ ಉತ್ಪನ್ನಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಇದರ ಜತೆಗೆ ತಿಂಗಳ ಕಂತಿನಲ್ಲಿ ಕೂಡ ಮರುಪಾವತಿಸಬಹುದು. ಅದಕ್ಕೆ ಹನ್ನೆರಡು ತಿಂಗಳ ತನಕ ಕಾಲಾವಕಾಶ ನೀಡಲಾಗುತ್ತದೆ.
ಗ್ರಾಹಕರು ಅಮೆಜಾನ್ ಇಂಡಿಯಾದಲ್ಲಿ ಯಾವ ಉತ್ಪನ್ನಗಳು ಬೇಕು ಅನ್ನೋದನ್ನು ಖರೀದಿಸಿ, ಮುಂದಿನ ತಿಂಗಳಲ್ಲಿ ಪಾವತಿ ಮಾಡಬಹುದು.
ಇನ್ನು ಅದರ ಬದಲಿಗೆ ಹನ್ನೆರಡು ತಿಂಗಳ ತನಕ ಇಎಂಐ ಆಗಿ ಕೂಡ ಬದಲಿಸಿಕೊಳ್ಳಬಹುದು. ಅದಕ್ಕೆ ತಿಂಗಳಿಗೆ 1.5 ಪರ್ಸೆಂಟ್ ನಿಂದ 2 ಪರ್ಸೆಂಟ್ ಬಡ್ಡಿ ಬೀಳುತ್ತದೆ. ಇಲ್ಲಿ ಗಮನಿಸಬೇಕಾದದ್ದು ಏನೆಂದರೆ, ಅಮೆಜಾನ್ ನಿಂದ ನೋ ಕಾಸ್ಟ್ ಇಎಂಐ ಆಫರ್ ಇದೆ. ಇದರ ಮೂಲಕ ಬಡ್ಡಿ ದರ ಶೂನ್ಯಕ್ಕೆ ಇಳಿಸಲಾಗುತ್ತದೆ.

ಲಾಕ್ ಡೌನ್ ಅವಧಿಯಲ್ಲಿ ಗ್ರಾಹಕರು ಬೇರೆ ಖರ್ಚುಗಳನ್ನು ನಿಭಾಯಿಸಲು ಅನುಕೂಲ ಆಗಲಿ ಎಂಬ ಉದ್ದೇಶದಿಂದ ನಂತರ ಹಣ ಪಾವತಿ ಮಾಡುವ ಅವಕಾಶ ನೀಡಲಾಗುತ್ತಿದೆ. ಹಾಗಿದ್ದರೆ ಎಷ್ಟು ಕನಿಷ್ಠ ಹಾಗೂ ಗರಿಷ್ಠ ಸಾಲ ಎಷ್ಟು ಸಿಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿರುವ ಸಂಸ್ಥೆ, ಕನಿಷ್ಠ 1 ರುಪಾಯಿಯಿಂದ ಗರಿಷ್ಠ 60 ಸಾವಿರ ರುಪಾಯಿ ತನಕ ಸಾಲ ಸಿಗುತ್ತದೆ ಎಂದು ತಿಳಿಸಲಾಗಿದೆ. ಹಾಗಂತ ಗರಿಷ್ಠ ಮಿತಿಯನ್ನು ಹೇರಿರುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರತು ಅಮೆಜಾನ್ ಅಲ್ಲ.
ಬಳಕೆದಾರರು ಮೊದಲಿಗೆ ಅಮೆಜಾನ್ ಪೇ ಲೇಟರ್ ಸೇವೆಗೆ ನೋಂದಣಿ ಮಾಡಿಕೊಳ್ಳಬೇಕು. ಅಮೆಜಾನ್ ಇಂಡಿಯಾ ಮೊಬೈಲ್ ಅಪ್ಲಿಕೇಷನ್ ನಲ್ಲಿ ಈ ನೋಂದಣಿ ಮಾಡಿಕೊಳ್ಳಬಹುದು. ಸದ್ಯಕ್ಕೆ ಡೆಸ್ಕ್ ಟಾಪ್ ನಲ್ಲಿ ನೋಂದಣಿ ಸಾಧ್ಯವಿಲ್ಲ. ಗ್ರಾಹಕರು ಕೆವೈಸಿ (Know Your Customer) ಅರ್ಜಿಯನ್ನು ಭರ್ತಿ ಮಾಡಬೇಕು.
ಇದಾದ ಮೇಲೆ ನೋಂದಣಿ ಆಗಿದೆಯೋ ಇಲ್ಲವೋ ಎಂಬುದನ್ನು ಅಮೆಜಾನ್ ಪೇ ಲೇಟರ್ ಡ್ಯಾಶ್ ಬೋರ್ಡ್ ನಲ್ಲಿ ಪರಿಶೀಲಿಸಬಹುದು. ಅಮೆಜಾನ್ ನಲ್ಲಿ ಏನು ವ್ಯವಹಾರ ಮಾಡಿದ್ದೀರಿ ಅನ್ನೋದನ್ನು ಸಹ ಇಲ್ಲಿ ಪರಿಶೀಲಿಸಬಹುದು.
More From GoodReturns

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications